ರಾಯಚೂರು: ಸಂಕ್ರಾಂತಿ ಹಬ್ಬವನ್ನ ರಾಯಚೂರಿನಲ್ಲಿ ಸಡಗರ ಸಂಭ್ರಮದಿಂದ ಆಚರಿಸಲಾಗುತ್ತಿದ್ದು ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಗಾಳಿಪಟ ಹಾರಿಸಿ ಜನ ಸಂಭ್ರಮಿಸಿದ್ದಾರೆ.
ಸಂಕ್ರಾಂತಿ ಹಬ್ಬದ ವಿಶೇಷ ಖಾದ್ಯಗಳಾದ ಎಳ್ಳುಹಚ್ಚಿದ ಸಜ್ಜೆ ರೊಟ್ಟಿ, ಭರ್ತಾ, ಎಳ್ಳು ಹೋಳಿಗೆ ಶೇಂಗಾ ಹೋಳಿಗೆಯ ಊಟವನ್ನ ಉಣಬಡಿಸಲಾಯಿತು. ನಗರದ ರೋಟರಿ ಕ್ಲಬ್ ಹಾಗೂ ಜೆಸಿಐ ವತಿಯಿಂದ ಸಂಕ್ರಾಂತಿ ಹಿನ್ನೆಲೆಯಲ್ಲಿ ಗಾಳಿಪಟ ಸಂಭ್ರಮ ಹಾಗೂ ಊಟದ ವ್ಯವಸ್ಥೆ ಆಯೋಜಿಸಲಾಯಿತು. ಅಲ್ಲದೆ ಈ ಸಡಗರದಲ್ಲಿ ಭಾಗಿಯಾಗಿರುವ ಜನರು ಎಳ್ಳು ಬೆಲ್ಲವನ್ನ ಪರಸ್ಪರ ವಿನಿಮಯ ಮಾಡಿಕೊಂಡು ಸಂಕ್ರಾಂತಿ ಹಬ್ಬವನ್ನು ಸವಿದಿದ್ದಾರೆ.
ಕ್ರೀಡಾಂಗಣದಲ್ಲಿ ಚಿಣ್ಣರು ಗಾಳಿಪಟವನ್ನು ಹಾರಿಸುತ್ತ ಖುಷಿ ಪಡುತ್ತಿದ್ದಾರೆ. ವಯಸ್ಸಿನ ಬೇಧವಿಲ್ಲದೆ ಚಿಕ್ಕಮಕ್ಕಳಿಂದ ಹಿಡಿದು ಎಲ್ಲರೂ ಬಣ್ಣಬಣ್ಣದ ಪತಂಗಗಳನ್ನ ಹಾರಿಸಿ ಹಬ್ಬ ಆಚರಿಸಿದರು.
ಮಕರ ಸಂಕ್ರಮಣದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಅನೇಕ ಜನರು ನದಿ ದಡಗಳಿಗೆ ತೆರಳಿ ಪುಣ್ಯ ಸ್ನಾನವನ್ನು ಮಾಡುತ್ತಿದ್ದಾರೆ. ಕೃಷ್ಣಾ ಹಾಗೂ ತುಂಗಾಭದ್ರ ನದಿಯಲ್ಲಿ ನೀರಿನ ಕೊರತೆಯ ಮಧ್ಯೆಯೂ ಜನರು ಪುಣ್ಯ ಸ್ನಾನ ಮಾಡಿ ಸಂಕ್ರಾಂತಿಯನ್ನ ಆಚರಿಸುತ್ತಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv