ಉದ್ಯೋಗದಲ್ಲಿ ಆಟೋ ಚಾಲಕ, ರಾತ್ರಿಯಾದ್ರೆ ಕಳ್ಳತನ- ಖತರ್ನಾಕ್ ಕಳ್ಳ ಅರೆಸ್ಟ್

Public TV
1 Min Read
RCR Arrest

– 750 ಗ್ರಾಂ ಬಂಗಾರ ವಶ

ರಾಯಚೂರು: ಆಟೋ ಚಾಲಕರು ಅಂದ್ರೆ ಎಷ್ಟೋ ಪ್ರಕರಣಗಳಲ್ಲಿ ಪ್ರಾಮಾಣಿಕತೆಯನ್ನು ಮೆರೆದು ಮಾದರಿಯಾದವರಿದ್ದಾರೆ. ಆದರೆ ರಾಯಚೂರಿನ ಖದೀಮನೊಬ್ಬ ವೃತ್ತಿಯಲ್ಲಿ ಆಟೋಚಾಲಕನಾಗಿದ್ದರೂ ರಾತ್ರಿ ವೇಳೆ ಮನೆಬೀಗ ಹೊಡೆದು ಕಳ್ಳತನ ಮಾಡುತ್ತಿದ್ದ.

ಎರಡು ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿ ಸುರೇಶ್‍ನನ್ನು ಪೊಲೀರು ಬಂಧಿಸಿದ್ದಾರೆ. ಆರೋಪಿಯಿಂದ 3 ಲಕ್ಷ ರೂ. ಮೌಲ್ಯದ ಒಟ್ಟು 750 ಗ್ರಾಂ ಬಂಗಾರವನ್ನು ವಶಪಡಿಸಿಕೊಂಡಿದ್ದಾರೆ.

ಸುರೇಶ್ ವಿರುದ್ಧ ಹೋಟೆಲ್‍ವೊಂದರಲ್ಲಿ ಬ್ಯಾಗ್ ಕದ್ದಿರುವ ಹಾಗೂ ರಾತ್ರಿ ವೇಳೆ ಮನೆಯ ಬಾಗಿಲು ಮುರಿದು ಕಳ್ಳತನ ಮಾಡಿರುವ ಪ್ರಕರಣವು ರಾಯಚೂರಿನ ನೇತಾಜಿ ಠಾಣೆ ದಾಖಲಾಗಿದ್ದವು. ಈ ಕುರಿತು ವಿಚಾರಣೆ ಆರಂಭಿಸಿದ ಪೊಲೀಸರು ಗುರುವಾರ ಆರೋಪಿಯನ್ನು ಬಂಧಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *