ಕೊರೊನಾ ಭೀತಿ – ಮಂತ್ರಾಲಯಕ್ಕೆ ಯಾರೂ ಬರದಂತೆ ಸುಬುಧೇಂದ್ರತೀರ್ಥ ಶ್ರೀ ಮನವಿ

Public TV
1 Min Read
Subudhendra Tirtha Sri

ರಾಯಚೂರು: ಕೊರೊನಾ ಸೋಂಕು ಹರಡುವ ಭೀತಿ ಹೆಚ್ಚಳ ಹಿನ್ನೆಲೆ ರಾಯರ ಭಕ್ತರಿಗೆ ಮಂತ್ರಾಲಯಕ್ಕೆ ಬರದಂತೆ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥ ಸ್ವಾಮಿ ಭಕ್ತರಲ್ಲಿ ಮನವಿ ಮಾಡಿದ್ದಾರೆ.

ಮಂತ್ರಾಲಯಕ್ಕೆ ಭಕ್ತರು ಆಗಮಿಸದೇ ಶ್ರೀಮಠದ ಶಾಖಾ ಮಠದಲ್ಲೇ ಭಕ್ತಿ ಸಮರ್ಪಿಸಬೇಕು. ದೇಶದ ನಾನಾ ಕಡೆ ಕೊರೊನಾ ಭೀತಿ ಹೆಚ್ಚಾಗಿದೆ. ಆರೋಗ್ಯ ಇಲಾಖೆಯ ಸೂಚನೆ ಮೇರೆಗೆ ಶ್ರೀಮಠಕ್ಕೆ ಭಕ್ತರ ಪ್ರವೇಶ ಸಂಪೂರ್ಣ ನಿಷೇಧಿಸಲಾಗಿದೆ. ಭಕ್ತರ ಆರೋಗ್ಯದ ದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಅಂತ ಶ್ರೀಗಳು ಹೇಳಿದ್ದಾರೆ.

rcr mantralaya

ಮಠದಲ್ಲಿ ಎಂದಿನಂತೆಯೇ ಪೂಜೆ ಪುನಸ್ಕಾರಗಳು ನಡೆಯಲಿವೆ. ಕೊರೊನಾ ವೈರಸ್ ಹಾವಳಿ ಕೊನೆಗೊಂಡು ಪರಿಸ್ಥಿತಿ ಸಹಜತೆಗೆ ಮರಳಬೇಕಾಗಿದೆ. ಅಲ್ಲಿಯವರೆಗೂ ಭಕ್ತರಿಗೆ ದರ್ಶನವಕಾಶ ಸಂಪೂರ್ಣ ನಿಷೇಧಿಸಲಾಗಿದೆ ಅಂತ ಪೀಠಾಧಿಪತಿ ಸುಭುದೇಂದ್ರ ತೀರ್ಥರು ತಿಳಿಸಿದ್ದಾರೆ.

mantralaya mutt

ಇದುವರೆಗೆ ವಿದೇಶದಿಂದ ಬರುವ ಭಕ್ತರು ಹಾಗೂ ನೆಗಡಿ ಕೆಮ್ಮು ಇರುವವರು ಮಾತ್ರ ಬರಬೇಡಿ ಎಂದು ಮಠದ ಆಡಳಿತ ಮಂಡಳಿ ಸೂಚಿಸಿತ್ತು. ಅಲ್ಲದೆ ಭಕ್ತರಿಗೆ ಪಂಚಾಮೃತ ವಿತರಣೆ ನಿಲ್ಲಿಸಿತ್ತು. ಈಗ ಭೀತಿ ಹೆಚ್ಚಾಗಿರುವುದರಿಂದ ಯಾರೂ ಮಠಕ್ಕೆ ಬರುವುದು ಬರಬೇಡಿ ಎಂದು ಶ್ರೀಗಳು ಮನವಿ ಮಾಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *