ರಾಯಚೂರು: ಲಿಂಗಸುಗೂರು ತಾಲೂಕಿನ ಕಳ್ಳಿ ಲಿಂಗಸುಗೂರಿನಲ್ಲಿ ಯುವಕನೊಬ್ಬ ಫೇಸ್ಬುಕ್ನಲ್ಲಿ ಸ್ಟೇಟಸ್ ಹಾಕಿ ಬಳಿಕ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಲಿಂಗಸುಗೂರು ತಾಲೂಕಿನ ಕರಡಕಲ್ ಗ್ರಾಮದ ನಿವಾಸಿ ಅಮರೇಶ್ ನೆಲಹಾಳ ಆತ್ಮಹತ್ಯೆ ಶರಣಾದ ಯುವಕ. ನನ್ನ ಸಾವಿಗೆ ಈಶ್ವರ ಆಗ್ರೋ ಟ್ರೇಡರ್ಸ್ ಮಾಲೀಕ ಅಮರೇಗೌಡ ಕಾರಣ ಅಂತ ಅಮರೇಶ್ ಫೇಸ್ಬುಕ್ ಸ್ಟೇಟಸ್ನಲ್ಲಿ ಹಾಕಿಕೊಂಡಿದ್ದಾನೆ.
ಅಮರೇಶ್ ಈಶ್ವರ ಟ್ರೇಡರ್ಸ್ ನಲ್ಲಿ ಕೆಲಸ ಮಾಡುತ್ತಿದ್ದ. ಆದರೆ ಕೆಲ ದಿನಗಳ ಹಿಂದೆ ಹುಡುಗಿಯ ವಿಚಾರವಾಗಿ ಅಮರೇಶ್ ಹಾಗೂ ಅಮರೇಗೌಡ ಮಧ್ಯೆ ಜಗಳವಾಗಿತ್ತು ಎನ್ನಲಾಗಿದೆ. ಅಮರೇಗೌಡ ಅವರ ಪಪ್ಪಾಯ ತೋಟದಲ್ಲಿ ಇಂದು ಯಾರು ಇಲ್ಲದೆ ಇದ್ದಾಗ ಅಮರೇಶ್ ಕ್ರೀಮಿನಾಶಕ ಕುಡಿದು ಆತ್ಮಹತ್ಯೆ ಶರಣಾಗಿದ್ದಾನೆ. ಲಿಂಗಸುಗೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಅಸಹಜ ಸಾವು ಪ್ರಕರಣ ದಾಖಲಾಗಿದೆ.