ಸಂಬಂಧಿಕರ ಮನೆಗೆ ಬಂದು ಕೃಷ್ಣಾನದಿ ಪಾಲಾದ ಯುವಕರು

Public TV
1 Min Read
Raichur

ರಾಯಚೂರು: ಕೃಷ್ಣಾ ನದಿಯಲ್ಲಿ ಸ್ನಾನ ಮಾಡಲು ಹೋಗಿ ಯುವಕರಿಬ್ಬರು ನೀರುಪಾಲಾಗಿರುವ ಘಟನೆ ರಾಜ್ಯದ ರಾಯಚೂರು ಗಡಿಭಾಗದಲ್ಲಿನ ತೆಲಂಗಾಣದ ವಾಸವಿನಗರದಲ್ಲಿ ನಡೆದಿದೆ.

ಹೈದರಾಬಾದಿನಲ್ಲಿ ಓದುತ್ತಿದ್ದ 25 ವರ್ಷದ ವಿದ್ಯಾರ್ಥಿ ಶ್ರೀಹರಿರಾಜು ಹಾಗೂ ಹೋಟೆಲ್ ಉದ್ಯಮದಲ್ಲಿದ್ದ 28 ವರ್ಷದ ರಾಮಕೃಷ್ಣ ರಾಜು ಮೃತ ದುರ್ದೈವಿಗಳು. ವಾಸವಿನಗರದ ಕೃಷ್ಣಾ ನದಿಯ ಸ್ನಾನ ಘಟ್ಟದ ಬಳಿ ಈ ಘಟನೆ ನಡೆದಿದೆ.

Raichur2

ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ಯುವಕರು ಅನಾರೋಗ್ಯ ಪೀಡಿತ ಸಂಬಂಧಿಯೊಬ್ಬರನ್ನ ಮಾತನಾಡಿಸಲು ವಾಸವಿನಗರಕ್ಕೆ ಬಂದಿದ್ದರು. ಈ ವೇಳೆ ಸ್ನಾನಕ್ಕೆ ಕೃಷ್ಣಾನದಿಯಲ್ಲಿ ನೀರಿಗೆ ಇಳಿದ ಐವರಲ್ಲಿ ಇಬ್ಬರು ನೀರುಪಾಲಾಗಿದ್ದಾರೆ.

ತೆಲಂಗಾಣದ ಕೃಷ್ಣಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಕೃಷ್ಣಾ ಠಾಣೆ ಪೊಲೀಸರು ಶವಗಳನ್ನು ಹೊರತೆಗೆದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *