ರಾಹುಲ್ ಗಾಂಧಿ ಮುಂದಿನ ಬಾರಿ ನೆರೆಯ ದೇಶಗಳಿಂದ ಸ್ಪರ್ಧಿಸಬೇಕು: ಪಿಯೂಷ್ ಗೋಯಲ್

Public TV
1 Min Read
Piyush goyal Rahul Gandhi

ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಮುಂದಿನ ಚುನಾವಣೆಯ ವೇಳೆ ನೆರೆಯ ರಾಷ್ಟ್ರಗಳಿಂದ ಸ್ಪರ್ಧೆ ಮಾಡಬೇಕಾಗುತ್ತದೆ ಎಂದು ಕೇಂದ್ರ ಸಚಿವ ಪಿಯುಷ್ ಗೋಯಲ್ ವ್ಯಂಗ್ಯವಾಡಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಹುಲ್ ಗಾಂಧಿ ಅವರು ಈ ಬಾರಿ ಸ್ಪರ್ಧಿಸುತ್ತಿರುವ ಉತ್ತರ ಪ್ರದೇಶದ ಅಮೇಥಿ ಹಾಗೂ ಕೇರಳದ ವಯನಾಡು ಲೋಕಸಭಾ ಕ್ಷೇತ್ರದಲ್ಲಿ ಸೋಲುತ್ತಾರೆ. ಅಮೇಥಿಯಲ್ಲಿ ಬಿಜೆಪಿ ಅಭ್ಯರ್ಥಿ ಸ್ಮೃತಿ ಇರಾನಿಯವರು ರಾಹುಲ್ ಗಾಂಧಿ ಅವರನ್ನು ಸೋಲಿಸುತ್ತಾರೆ. ಹೀಗಾಗಿ ಅವರು ಮುಂದಿನ ಚುನಾವಣೆಗಾಗಿ ಪಕ್ಕದ ದೇಶದಲ್ಲಿ ಯಾವುದಾದರೂ ಕ್ಷೇತ್ರವನ್ನು ಹುಡುಕಿಕೊಳ್ಳಬೇಕು ಎಂದು ಲೇವಡಿ ಮಾಡಿದ್ದಾರೆ. ಇದನ್ನು ಓದಿ: ರಾಹುಲ್ ಗಾಂಧಿ ಪೌರತ್ವದ ವಿವಾದ? ನಾಮಪತ್ರ ಪರಿಶೀಲನೆ ಮುಂದೂಡಿದ ಆಯೋಗ

piyush goyal

ರಾಹುಲ್ ಗಾಂಧಿ ಅವರಿಗೆ ಎಡಪಕ್ಷಗಳ ವಿರುದ್ಧ ಮಾತನಾಡುವ ಧೈರ್ಯವಿಲ್ಲ. ಹೀಗಾಗಿ ವಯನಾಡು ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಎಡಪಕ್ಷದ (ಸಿಪಿಐ) ಅಭ್ಯರ್ಥಿ ವಿರುದ್ಧ ಸೋಲುತ್ತಾರೆ ಎಂದರು.

ಸಿಪಿಐ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯಚೂರಿ ಹಾಗೂ ರಾಹುಲ್ ಗಾಂಧಿ ಜೊತೆಯಾಗಿ ನಿಂತಿರುವ ಕೆಲವು ಫೋಟೋಗಳನ್ನು ನೋಡಿದ್ದೇನೆ. ಅಮೇಥಿಯಲ್ಲಿ ಸೋಲಿನ ಭಯ ಕಾಡಿದ್ದರಿಂದ ವಯನಾಡುಗೆ ಹೋದರು. ಅಲ್ಲಿ ಸಿಪಿಐ ವಿರುದ್ಧ ಮಾತನಾಡದೇ, ಟೀಕೆ ಮಾಡದೇ ಹೆದರಿದ್ದಾರೆ ಎಂದು ವ್ಯಂಗ್ಯವಾಡಿದರು.

Smriti Irani Rahul Gandhi

ಸಾಧ್ವಿ ಪ್ರಜ್ಞಾಸಿಂಗ್ ಠಾಕೂರ್ ಅವರಿಗೆ ಭೋಪಾಲ್ ಟಿಕೆಟ್ ನೀಡಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿ ಕ್ಷಮೆ ಕೇಳಬೇಕು ಎಂದು ಮಹಾರಾಷ್ಟ್ರದ ಮಾಜಿ ಸಿಎಂ ಪೃಥ್ವಿರಾಜ್ ಚೌಹಾನ್ ಹೇಳಿದ್ದಾರೆ. ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಪಿಯುಷ್ ಗೋಯಲ್ ಅವರು, ಪೃಥ್ವಿರಾಜ್ ಚೌಹಾನ್ ಅವರೇ ಮೊದಲು ಕ್ಷಮೆ ಕೇಳಬೇಕು. ಅವರು ಹಿಂದೂಗಳನ್ನು ಉಗ್ರರು ಎಂದು ಹೇಳಿಕೆ ನೀಡಿ, ಹಿಂದೂಗಳನ್ನು ಅವಮಾನಿಸಿದ್ದಾರೆ ಎಂದು ತಿರುಗೇಟು ನೀಡಿದರು.

Share This Article
Leave a Comment

Leave a Reply

Your email address will not be published. Required fields are marked *