ರಾಹುಲ್ ಗಾಂಧಿ ರಾಜ್ಯಕ್ಕೆ ಆಗಮಿಸುತ್ತಿರೋ ಬೆನ್ನಲ್ಲೇ ಶಾಸಕ ಆನಂದ್ ಸಿಂಗ್ ಹೊಸ ಶಪಥ

Public TV
1 Min Read
RAHUL ANAND

ಬಳ್ಳಾರಿ: ಒಂದೆಡೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಶನಿವಾರ ಬಳ್ಳಾರಿಗೆ ಆಗಮಿಸುತ್ತಿದ್ದಾರೆ. ಮತ್ತೊಂದೆಡೆ ಇತ್ತೀಚೆಗಷ್ಟೇ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದ ಶಾಸಕ ಆನಂದ್ ಸಿಂಗ್ ಹೊಸದೊಂದು ಶಪಥ ಮಾಡಿದ್ದಾರೆ ಎನ್ನಲಾಗಿದೆ.

vlcsnap 2018 02 09 09h00m54s248

ಕಳೆದ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಆನಂದ್ ಸಿಂಗ್ 70 ಸಾವಿರ ಮತಗಳಿಂದ ಗೆದ್ದಿದ್ರು. ಆದ್ರೆ ಈ ಬಾರಿ ಲಕ್ಷಕ್ಕೂ ಹೆಚ್ಚು ಮತಗಳನ್ನು ಗೆದ್ದೇ ಮನೆಗೆ ಹೋಗ್ತೀನಿ ಅಂತ ಆನಂದ್ ಸಿಂಗ್ ಶಪಥ ಮಾಡಿದ್ದಾರೆ. ಇದಕ್ಕಾಗಿ ಕಳೆದ ನಾಲ್ಕು ತಿಂಗಳಿಂದ ಮನೆಗೂ ಹೋಗದೆ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದಾರೆ. ಇದನ್ನೂ ಓದಿ: ನಾಳೆ ಬಳ್ಳಾರಿಗೆ ರಾಹುಲ್ ಗಾಂಧಿ ಎಂಟ್ರಿ- ಸಂಕಷ್ಟದಲ್ಲಿ ಕೈ ಹಿಡಿದ ಸ್ಥಳದಲ್ಲಿ ಚುನಾವಣಾ ಪ್ರಚಾರಕ್ಕೆ ಕಹಳೆ

Rahul Gandhi

ಅಕ್ಟೋಬರ್ 4ರಂದು ಹುಟ್ಟುಹಬ್ಬ ಆಚರಿಸಿಕೊಂಡ ಬಳಿಕ ಆನಂದ್ ಸಿಂಗ್ ಈವರೆಗೆ ಮನೆಗೆ ಹೋಗಿಲ್ಲ. ನಿತ್ಯವೂ ಕ್ಷೇತ್ರದಲ್ಲಿ ಸಂಚರಿಸುತ್ತಿದ್ದು, ರಾತ್ರಿ ಗ್ರಾಮವಾಸ್ತವ್ಯ ಇಲ್ಲವೇ ಹೋಟೆಲ್‍ನಲ್ಲಿ ತಂಗುತ್ತಿದ್ದಾರೆ. ಕುಟುಂಬದವರು ಭೇಟಿಯಾಗಬೇಕಾದ್ರೆ ಆನಂದ್ ಸಿಂಗ್ ಇರುವ ಜಾಗಕ್ಕೆ ಬಂದು ಹೋಗ್ತಿದ್ದಾರೆ ಎಂದು ತಿಳಿದುಬಂದಿದೆ. ಇದನ್ನೂ ಓದಿ:

Share This Article
Leave a Comment

Leave a Reply

Your email address will not be published. Required fields are marked *