ಮುಂಬೈ: ಯಾವುದೇ ಕ್ರೀಡಾಪಟುವಿಗೂ ವೃತ್ತಿ ಜೀವನ ಅಂತ್ಯದ ಬಳಿಕ ಅವಕಾಶ ಪಡೆಯುವುದು ಕಷ್ಟಸಾಧ್ಯವಾಗುತ್ತದೆ. ಆದರೆ ಸದ್ಯದ ಸ್ಥಿತಿಯಲ್ಲಿ ಯುವ ಜನಾಂಗ ಕ್ರೀಡೆಯ ಬಗ್ಗೆ ಹೆಚ್ಚಿನ ಒಲವು ತೋರುತ್ತಿದ್ದು, ಆದರೆ ಇಲ್ಲಿಯೂ ಕೂಡ ಅವಕಾಶಗಳ ಕೊರತೆ ದೊಡ್ಡ ಮಟ್ಟದಲ್ಲಿದೆ. ಆದ್ದರಿಂದ ರಾಹುಲ್ ದ್ರಾವಿಡ್ ಹೊಸ ಯೋಚನೆಯೊಂದಿಗೆ ಮುಂದೆ ಬಂದಿದ್ದಾರೆ.
17 ರಿಂದ 21 ವರ್ಷದ ಯುವ ಆಟಗಾರರು ವೃತ್ತಿ ಜೀವನದ ಆರಂಭದಲ್ಲಿ ಉತ್ತಮ ಪ್ರದರ್ಶನ ನೀಡದಿದ್ದರೆ ಮುಂದಿನ ಅವಕಾಶ ಪಡೆಯುವುದು ಕಷ್ಟಸಾಧ್ಯವಾಗಿದೆ. ಈ ಹಿನ್ನೆಲೆಯಲ್ಲಿ ಟೀಂ ಇಂಡಿಯಾ ಅಂಡರ್ 19 ತಂಡ ಹಾಗೂ ಎ ತಂಡಗಳ ಕೋಚ್ ಆಗಿರುವ ರಾಹುಲ್ ದ್ರಾವಿಡ್ ಆಟಗಾರರ ಭವಿಷ್ಯದ ಬಗ್ಗೆ ಗಮನ ಹರಿಸಿದ್ದು, ಯುವ ಆಟಗಾರರ ಪರ್ಯಾಯ ವೃತ್ತಿ ಜೀವನ ಕಲ್ಪಿಸುವ ಬಗ್ಗೆ ಬಿಸಿಸಿಐ ಮುಂದೆ ಪ್ರಸ್ತಾಪ ಮಾಡಿದ್ದಾರೆ.
ಕ್ರೀಡೆಯ ಹೊರತಾಗಿಯೂ ಕೂಡ ಆಟಗಾರರು ಉದ್ಯೋಗ ಅವಕಾಶ ಪಡೆಯುವ ಕೌಶಲ್ಯ ಹಾಗೂ ಸಾಮಥ್ರ್ಯವನ್ನು ಗಳಿಸಬೇಕಿದೆ. ಇಂತಹ ಒಂದು ಕಲ್ಪನೆಯನ್ನು ದ್ರಾವಿಡ್ ಮೊದಲ ಬಾರಿಗೆ ಪ್ರಸ್ತಾಪಿಸಿದ್ದಾರೆ. ಇದಕ್ಕೆ ಇತರೇ ಕೋಚ್ ಗಳು ಕೂಡ ಸಭೆಯಲ್ಲಿ ಬೆಂಬಲ ನೀಡಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.
ಕಳೆದ ಮೂರು ವರ್ಷಗಳಿಂದ ಎರಡು ತಂಡಗಳ ಯುವ ಆಟಗಾರ ಜವಾಬ್ದಾರಿಯನ್ನು ನಿರ್ವಹಿಸುತ್ತಿರುವ ರಾಹುಲ್ ದ್ರಾವಿಡ್, ಯುವ ಆಟಗಾರರು ಕ್ರೀಡಾ ವೃತ್ತಿ ಜೀವನ ಮುಂದುವರಿಸಲು ಕಷ್ಟಸಾಧ್ಯವಾದರೆ ಮುಂದೇನು ಎಂಬುವುದು ಅವರ ಯೋಜನೆ ಆಗಿದೆ. ಆದ್ದರಿಂದ ವೃತ್ತಿ ಜೀವನದ ಆಚೆಗೂ ಆಟಗಾರರಿಗೆ ಶಿಕ್ಷಣ ಸೇರಿದಂತೆ, ಕೌಶಲ್ಯಗಳ ಅಗತ್ಯತೆಯ ಪೂರೈಸುವ ಯೋಜನೆಯ ಚಿಂತನೆಯನ್ನು ಮಾಡಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv