ಚಂಢೀಗಢ: ಅಕ್ರಮ ಮರಳು ಗಣಿಗಾರಿಕೆ ವಿರುದ್ಧ ಪಂಜಾಬ್ ಮುಖ್ಯಮಂತ್ರಿ ಚರಣ್ ಜೀತ್ ಸಿಂಗ್ ಚನ್ನಿ ಕ್ರಮ ಕೈಗೊಂಡರೆ, ಪ್ರತಿಯೊಂದು ಪ್ರಕರಣಕ್ಕೆ ಅವರಿಗೆ 25,000 ಬಹುಮಾನ ನೀಡುವುದಾಗಿ ಆಮ್ ಆದ್ಮಿ ಹೇಳಿದೆ.
ಮರಳು ಅಕ್ರಮ ಗಣಿಗಾರಿಕೆ ಕುರಿತು ಸಂಬಂಧಪಟ್ಟ ಅಧಿಕಾರಿಗಳಿಗೆ ಪುರಾವೆ ಕೊಟ್ಟವರಿಗೆ 25,000 ಬಹುಮಾನ ನೀಡಲಾಗುವುದು ಎಂದು ಚನ್ನಿ ಗುರುವಾರವಷ್ಟೇ ಹೇಳಿದ್ದರು. ಅವರು ಈ ಘೋಷಣೆ ಮಾಡಿದ ಮರುದಿನ ಸುದ್ದಿಗೋಷ್ಠಿ ನಡೆಸಿದ ಎಎಪಿ ವಕ್ತಾರ ರಾಘವ್ ಛಡ್ಡಾ, ಪಂಜಾಬ್ ಮುಖ್ಯಮಂತ್ರಿ ಚರಣ್ ಜೀತ್ ಸಿಂಗ್ ಚನ್ನಿ ಕ್ರಮ ಕೈಗೊಂಡರೆ, ಪ್ರತಿಯೊಂದು ಪ್ರಕರಣಕ್ಕೆ ಅವರಿಗೆ 25,000 ಬಹುಮಾನ ನೀಡುವುದಾಗಿ ಸವಾಲು ಎಸೆದಿದ್ದಾರೆ. ಮರಳು ಅಕ್ರಮ ಗಣಿಗಾರಿಕೆಯನ್ನು ತಡೆಯುವುದು ನಿಜವಾದ ಉದ್ದೇಶವಾಗಿದ್ದರೆ ಅದರ ವಿರುದ್ಧ ಕ್ರಮ ಕೈಗೊಳ್ಳಿ ಎಂದಿದ್ದಾರೆ. ಇದನ್ನೂ ಓದಿ: ಮತಾಂತರ ನಿಷೇಧ ಕಾಯ್ದೆ ಜಾರಿ ಸರಿಯಿದೆ: ಬಿವೈ ರಾಘವೇಂದ್ರ
ಚನ್ನಿ ಅವರ ವಿಧಾನಸಭೆ ಕ್ಷೇತ್ರವಾದ ರಾಮ್ಪಂತ್ನಲ್ಲಿಯೇ ಮರಳು ಅಕ್ರಮ ಗಣಿಗಾರಿಕೆ ನಡೆಯುತ್ತಿದೆ. ಯಾವ ಸ್ಥಳಗಳಲ್ಲಿ ಮರಳು ಗಣಿಗಾರಿಕೆ ನಡೆಯುತ್ತಿದೆ ಎನ್ನುವ ಮಾಹಿತಿಯನ್ನು ಅಧಿಕಾರಿಗಳಿಂದ ಕೇವಲ ಐದು ನಿಮಿಷಗಳಲ್ಲಿ ಮುಖ್ಯಮಂತ್ರಿ ಅವರು ಪಡೆಯಬಹುದು. ನೀವು ನನ್ನ ಜೊತೆ ಬನ್ನಿ. ಯಾವ ಸ್ಥಳಗಳಲ್ಲಿ ಮರಳು ಗಣಿಗಾರಿಕೆ ನಡೆಯುತ್ತಿದೆ ಎಂದು ನಾನು ನಿಮಗೆ ತೋರಿಸುತ್ತೇನೆ ಎಂದು ಅವರು ಸವಾಲು ಹಾಕಿದ್ದಾರೆ. ಇದನ್ನೂ ಓದಿ: ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಸುದೀಪ್ ಕುಟುಂಬ ಸಮೇತರಾಗಿ ಭೇಟಿ
ನಿಮ್ಮ ಕ್ಷೇತ್ರದ ಜಿಂದಾಪುರ್ ಪಿಂಡ್ ಪ್ರದೇಶದಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿರುವುದಕ್ಕೆ ನಾನು ನಿಮಗೆ ಪುರಾವೆಗಳನ್ನು, ನಿಮ್ಮ ವಿರುದ್ಧವೇ ಮೊದಲು ಎಫ್ಐಆರ್ ದಾಖಲಿಸಿಕೊಳ್ಳಿ. ಮುಖ್ಯಮಂತ್ರಿಯೇ ಅಕ್ರಮ ಗಣಿಗಾರಿಕೆಯ ಅತಿದೊಡ್ಡ ಮಾಫಿಯಾ ಆದಂತಿದೆ. ಚನ್ನಿ ಅವರ ವಿಧಾನಸಭೆ ಕ್ಷೇತ್ರದಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿರುವುದನ್ನು ಬಹಿರಂಗಪಡಿಸಿದ್ದೇವೆ ಎಂದು ಛಡ್ಡಾ ಹೇಳಿದ್ದರು.