ಬೆಂಗಳೂರು: ಡಿಕೆ ಶಿವಕುಮಾರ್ (DK Shivakumar) ತಮ್ಮ ಕರ್ಮ ಕಳೆಯಲು ಗಂಗಾಸ್ನಾನ ಮಾಡಿದ್ದಾರೆ ಎಂದು ಆರ್. ಅಶೋಕ್ (R Ashok) ವ್ಯಂಗ್ಯವಾಡಿದರು.
ವಿಧಾನಸಭೆಯಲ್ಲಿ ಪ್ರಶ್ನೋತ್ತರ ಕಲಾಪದ ವೇಳೆ ಮಾತನಾಡಿದ ಅವರು, ನಿಮ್ಮ ಡಿಸಿಎಂ ಎಲ್ಲ ಕರ್ಮಗಳು ಕಳೆಯಲಿ ಎಂದು ಗಂಗೆ ಸ್ನಾನ ಮಾಡಿ ಬಂದಿದ್ದಾರೆ. ಮಹದೇವಪ್ಪ ಮಹದೇಶ್ವರ ಬೆಟ್ಟದ ಕಡೆಯವರು, ಶಿವನ ತಲೆ ಮೇಲೆ ಗಂಗೆ ಇದೆ. ಆದರೆ ಈಗ ಕಾಂಗ್ರೆಸ್ ಸರ್ಕಾರದಲ್ಲಿ ಗಂಗೆಯೇ ಇಲ್ಲ ಎಂದರು. ಇದನ್ನೂ ಓದಿ: ಮಿಲನಾ ಬೆಸ್ಟ್ ಮದರ್: ಪತ್ನಿಯನ್ನು ಹೊಗಳಿದ ಡಾರ್ಲಿಂಗ್ ಕೃಷ್ಣ
Advertisement
Advertisement
ಇದೇ ವೇಳೆ ಸುನೀಲ್ ಕುಮಾರ್ ಮಾತನಾಡಿ, ಗಂಗಾ ಕಲ್ಯಾಣ ಯೋಜನೆ ಅನುಷ್ಠಾನ ಆಗುತ್ತಿಲ್ಲ, ಗಂಗಾ ಕಲ್ಯಾಣ ಮುಚ್ಚಿದ್ದೇವೆ ಎಂದು ಘೋಷಣೆ ಮಾಡಿಬಿಡಿ. ಪವಿತ್ರ ಗಂಗೆಯ ಬಗ್ಗೆ ಕಾಂಗ್ರೆಸ್ ಅವರು ಏನೆಲ್ಲ ಮಾತಾಡಿದ್ದಾರೆ ಗೊತ್ತಿದೆ. ಗಂಗೆಯ ವಿಚಾರದಲ್ಲಿ ರಾಜಕೀಯ ಬೇಡ, ಗಂಗಾ ಕಲ್ಯಾಣ ಯೋಜನೆ ಸರಿಯಾಗಿ ಮಾಡಿ ಎಂದು ತಿರುಗೇಟು ಕೊಟ್ಟರು.
Advertisement
ಈ ವೇಳೆ ಮಧ್ಯಪ್ರವೇಶಿಸಿ ಸಚಿವ ಹೆಚ್.ಸಿ.ಮಹದೇವಪ್ಪ ಮಾತನಾಡಿ, ನಾನು ರಾಜಕೀಯ ಮಾಡುವುದಿಲ್ಲ. ಗಂಗಾ ಕಲ್ಯಾಣ ಯೋಜನೆಯಡಿ ಫಲಾನುಭವಿಗಳಿಗೆ ಹೆಚ್ಚಿನ ಬೇಡಿಕೆಯಿದ್ದು, ಸರ್ಕಾರ ಪರಿಶೀಲಿಸಿ ಕ್ರಮ ತೆಗೆದುಕೊಳ್ಳಲಿದೆ ಎಂದು ಭರವಸೆ ನೀಡಿದರು. ಬಳಿಕ ಸುನೀಲ್ ಕುಮಾರ್ ಪ್ರತಿಕ್ರಿಯಿಸಿ, ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅನುದಾನ ಕಡಿತ ವಿಚಾರವಾಗಿ, ನನ್ನನ್ನು ಮನವೊಲಿಸುವುದನ್ನ ಬಿಟ್ಟು ಅನುದಾನ ಬಿಡುಗಡೆ ಮಾಡಿ. ಮುಖ್ಯಮಂತ್ರಿಗಳಿಗೆ ಹತ್ತಿರವಾಗಿ ಇರೋದು ನೀವು, ಕಿಚನ್ ಕ್ಯಾಬಿನೆಟ್ ನಿಮ್ಮ ಬಳಿ ಇದೆ. ಹೀಗಿರುವಾಗ ಅನುದಾನ ಇಲ್ಲ ಅಂದರೆ ಹೇಗೆ ಎಂದು ಕಾಲೆಳೆದರು.ಇದನ್ನೂ ಓದಿ: ಅನುಮತಿ ಇಲ್ಲದೇ ಅರಣ್ಯ ಭೂಮಿಯಲ್ಲಿ ಶೂಟಿಂಗ್ ಮಾಡಿದ್ರಾ?: ತರುಣ್ ಸುಧೀರ್ ಸ್ಪಷ್ಟನೆ
Advertisement