ಕೋಲಾರ: ರಾಜ್ಯದಲ್ಲಿರುವ ಮೈತ್ರಿ ಸರ್ಕಾರ ತಾನಾಗಿಯೇ ಬೀಳುವ ಸರ್ಕಾರ, ನಾವು ಕಲ್ಲು ಹೊಡೆಯಲು ಹೋಗುವುದಿಲ್ಲ. ರಾಜ್ಯದಲ್ಲಿ ಇರುವುದು ಜನಪರ ಸರ್ಕಾರ ಅಲ್ಲ. ಅದೊಂದು ವಾಸ್ತು ಸರ್ಕಾರ ಎಂದು ಮಾಜಿ ಡಿಸಿಎಂ ಆರ್. ಅಶೋಕ್ ವ್ಯಂಗ್ಯ ಮಾಡಿದ್ದಾರೆ.
ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಕೀಲುಕೊಪ್ಪ ಕೆರೆ ಮತ್ತು ನಲ್ಲಗುಟ್ಲಹಳ್ಳಿ ಸೇರಿದಂತೆ ಜಿಲ್ಲೆಯ ವಿವಿಧಡೆ ಬರ ಪ್ರವಾಸ ಕೈಗೊಂಡು ಅವರು ಮಾಧ್ಯಮದವರೊಂದಿಗೆ ಮಾತನಾಡಿ ಅವರು, ರಾಜ್ಯದಲ್ಲಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ನಾನೊಬ್ಬ ಸಾಂದರ್ಭಿಕ ಶಿಶು ಎಂದು ಹೇಳಿಕೊಂಡಿರುವ ಕುಮಾರಸ್ವಾಮಿ ಅವರ ಸರ್ಕಾರ ತಾನಾಗಿಯೇ ಬೀಳಲಿದ್ದು, ಯಾರು ಬೀಳಿಸುವ ಪ್ರಮೇಯ ಇಲ್ಲ. ಸರ್ಕಾರ ಬೀಳುವುದಕ್ಕೆ ಬಿಜೆಪಿ ಕಾರಣ ಆಗುವುದಿಲ್ಲ, ಬದಲಾಗಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಕಾರಣರಾಗಲಿದ್ದಾರೆ ಎಂದು ಆರೋಪಿಸಿದರು.
ಇದೇ ವೇಳೆ ಸರ್ಕಾರದ ಆಡಳಿತ ಬಗ್ಗೆ ವ್ಯಂಗ್ಯವಾಡಿದ ಅಶೋಕ್ ಅವರು, ಕುಮಾರಸ್ವಾಮಿ ಅವರದ್ದು ಜನ ಪರ ಸರ್ಕಾರ ಅಲ್ಲ. ಅದೊಂದು ವಾಸ್ತು ಸರ್ಕಾರ. ವಿಧಾನ ಸಭೆ ನಡೆಯಲು ರಾಹುಕಾಲ ನೋಡುವ ಇಂತಹ ಕೆಟ್ಟ ಸರ್ಕಾರವನ್ನ ನಾನು ನೋಡಿಯೇ ಇಲ್ಲವೆಂದು ದೂರಿದರು. ಅಲ್ಲದೇ ರೇವಣ್ಣನವರು ತಮ್ಮ ಮನೆಗಳಲ್ಲಿ ವಾಸ್ತು, ಪೂಜೆಗಳನ್ನ ಇಟ್ಟುಕೊಳ್ಳಲಿ, ವಿಧಾನ ಸಭೆಗೆ ಇವೆಲ್ಲಾ ತರಬೇಡಿ ಎಂದು ಕಿಡಿಕಾರಿದರು.
ರಾಜ್ಯದಲ್ಲಿ ಬರದಿಂದ ತತ್ತರಿಸುತ್ತಿರುವ ತಾಲೂಕುಗಳಿಗೆ ಸರ್ಕಾರ ಕೂಡಲೇ ನೆರವಿಗೆ ದಾವಿಸಬೇಕು. ಇಲದಿದ್ದರೆ ಬೆಳಗಾವಿಯಲ್ಲಿ ನಡೆಯುವ ಅಧಿವೇಶನ ಹೊರಗೆ ಹಾಗೂ ಒಳಗೆ ಬಿಜೆಪಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv