Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಜೆಸಿಬಿ ತಡೆದು ಹೆಬ್ಬಾವು ರಕ್ಷಿಸಿದ ಗುರುರಾಜ್ ಸನಿಲ್- ಸಾರ್ವಜನಿಕರಿಂದ ಮೆಚ್ಚುಗೆ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | ಜೆಸಿಬಿ ತಡೆದು ಹೆಬ್ಬಾವು ರಕ್ಷಿಸಿದ ಗುರುರಾಜ್ ಸನಿಲ್- ಸಾರ್ವಜನಿಕರಿಂದ ಮೆಚ್ಚುಗೆ

Districts

ಜೆಸಿಬಿ ತಡೆದು ಹೆಬ್ಬಾವು ರಕ್ಷಿಸಿದ ಗುರುರಾಜ್ ಸನಿಲ್- ಸಾರ್ವಜನಿಕರಿಂದ ಮೆಚ್ಚುಗೆ

Public TV
Last updated: March 9, 2020 5:02 pm
Public TV
Share
2 Min Read
udp python
SHARE

ಉಡುಪಿ: ಗಿಡಗಂಟಿಗಳಿದ್ದ ಜಮೀನನ್ನು ಸ್ವಚ್ಛತೆ ಮಾಡುವಂತಹ ಸಂದರ್ಭದಲ್ಲಿ ಹೆಬ್ಬಾವೊಂದನ್ನು ರಕ್ಷಿಸಲಾಗಿದೆ. ಉಡುಪಿ ಜಿಲ್ಲೆಯ ಪೆರ್ಡೂರು ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಪೆರ್ಡೂರು ಸ್ಥಳೀಯರೊಬ್ಬರು ಮನೆ ನಿರ್ಮಾಣಕ್ಕಾಗಿ ಜಮೀನನ್ನು ಸಮತಟ್ಟು ಮಾಡುತ್ತಿದ್ದರು. ಜಮೀನಿನಲ್ಲಿ ಹುತ್ತವೊಂದು ಇರುವುದನ್ನು ಮಾಲೀಕರು ನೋಡಿದ್ದಾರೆ. ಅದರೊಳಗೆ ಹಾವು ಇರಬಹುದು ಎಂದು ಸಂಶಯಪಟ್ಟಿದ್ದಾರೆ. ಉಡುಪಿಯ ಉರಗ ತಜ್ಞ ಗುರುರಾಜ್ ಸನಿಲ್ ಅವರಿಗೆ ಜಮೀನಿನ ಮಾಲೀಕರು ತಕ್ಷಣ ಫೋನ್ ಕರೆ ಮಾಡಿದ್ದಾರೆ. ಗುರುರಾಜ್ ಸ್ಥಳಕ್ಕಾಗಮಿಸಿ ಹುತ್ತವನ್ನು ಪರಿಶೀಲನೆ ಮಾಡಿದ್ದಾರೆ.

udp python 1

ಹುತ್ತದ ಒಳಗೆ ಹೆಬ್ಬಾವು ಇರುವುದು ಗುರುರಾಜ್ ಅವರ ಗಮನಕ್ಕೆ ಬಂದಿದೆ. ಜೆಸಿಬಿ ಕಾರ್ಯಾಚರಣೆಯನ್ನು ನಿಲ್ಲಿಸಿದ ಗುರುರಾಜ್ ತನ್ನ ಸಲಕರಣೆಯ ಮೂಲಕ ಹುತ್ತವನ್ನು ಅಗೆದಿದ್ದಾರೆ. ಹುತ್ತದ ಒಳಗೆ ಬೃಹತ್ ಗಾತ್ರದ ಹೆಬ್ಬಾವು ಹೊಂದಿರುವುದು ಗಮನಕ್ಕೆ ಬಂದಿದೆ. ಕೂಡಲೇ ಕಾರ್ಯಪ್ರವೃತ್ತರಾದ ಗುರುರಾಜ್ ಅವರು ಹೆಬ್ಬಾವನ್ನು ಹುತ್ತದಿಂದ ಹೊರಕ್ಕೆ ತೆಗೆದಿದ್ದಾರೆ. ಹುತ್ತದೊಳಗೆ ಬೇರೆ ಹಾವುಗಳು ಇದೆಯಾ ಎಂದು ಪರಿಶೀಲನೆ ಮಾಡಿದ ನಂತರ ಜೆಸಿಬಿ ಕಾರ್ಯಾಚರಣೆ ಮುಂದುವರಿದಿದೆ.

udp python 4

ಮಾರ್ಚ್ ತಿಂಗಳ ಆಸುಪಾಸಿನಲ್ಲಿ ಹೆಬ್ಬಾವುಗಳು ತನ್ನ ಪೊರೆಯನ್ನು ಕಳಚುತ್ತದೆ. ಈ ಪೊರೆ ಕಳಚುವ ಪ್ರಕ್ರಿಯೆ ಮಾಡಲು ಹಾವುಗಳು ಹುತ್ತವನ್ನು, ಜನವಸತಿ ಇಲ್ಲದ ಪ್ರದೇಶಗಳನ್ನು ಹುಡುಕುತ್ತಿರುತ್ತದೆ. ಮಳೆ ಕ್ಷಣೆ ಮಾಡಿದ ಹೆಬ್ಬಾವನ್ನು ಅದೇ ಪರಿಸರದಲ್ಲಿ ಸುರಕ್ಷಿತವಾಗಿ ಬಿಟ್ಟು ಕಳುಹಿಸಲಾಗಿದೆ. ಜಮೀನನ್ನು ಸಮತಟ್ಟು ಮಾಡುವಾಗ ಕಟ್ಟಡಗಳನ್ನು ನಿರ್ಮಿಸುವಾಗ ಪೂಜೆಗಳನ್ನು ನೆರವೇರಿಸುವ ಬದಲು ಹುತ್ತದ ಒಳಗೆ ಹಾವುಗಳಿದ್ದರೆ ಅದನ್ನು ರಕ್ಷಿಸಬೇಕು ಎಂದು ಗುರುರಾಜ್ ಸಾರ್ವಜನಿಕರಿಗೆ ಸಲಹೆ ಕೊಟ್ಟಿದ್ದಾರೆ. ಈ ಬಗ್ಗೆ ಬರೆದುಕೊಂಡಿರುವ ಗುರುರಾಜ್, ಹುತ್ತದಲ್ಲಿ ಹಾವುಗಳ ಸಂಚಾರವಿದ್ದ ಕುರುಹುಗಳು ದೊರೆಯಿತು. ಹಾಗಾಗಿ ಬಹಳ ಜಾಗ್ರತೆಯಿಂದ ಹುತ್ತ ತೆರವುಗೊಳಿಸಿದೆ. ಅರ್ಧ ಬಗೆಯುವಷ್ಟರಲ್ಲಿ ದೊಡ್ಡ ಗಂಡು ಹೆಬ್ಬಾವೊಂದು ಹುತ್ತದ ಆಳದಲ್ಲಿ ಗೋಚರಿಸಿತು.

udp python 3

ತಿಂಗಳ ಹಿಂದೆ ಅದು ಸಂತಾನೋತ್ಪತ್ತಿ ಪ್ರಕ್ರಿಯೆ ಮುಗಿಸಿ, ತನ್ನ ದೇಹದ ಹಳೆಯ ಪೊರೆಯನ್ನು ಕಳಚಿಕೊಳ್ಳಲು ಹುತ್ತದೊಳಗೆ ತಣ್ಣನೆ ಮಲಗಿತ್ತು. ಹೆಬ್ಬಾವಿಗೆ ಪೊರೆ ಕಳಚಲು ಸುಮಾರು 8-10 ದಿನಗಳು ಬೇಕಾಗುತ್ತವೆ. ಅಂಥ ಸಂದರ್ಭದಲ್ಲಿ ಅದು ಹೊರಗಿನ ಆಗುಹೋಗುಗಳನ್ನು ಗ್ರಹಿಸುವ ಶಕ್ತಿಯನ್ನು ಬಹುತೇಕ ಕಳೆದುಕೊಳ್ಳುತ್ತದೆ. ಅಷ್ಟು ದಿನಗಳ ಕಾಲ ತಣ್ಣನೆಯ ಪರಿಸರದಲ್ಲಿ ನಿಸ್ತೇಜವಾಗಿ ಮಲಗಿಬಿಡುತ್ತದೆ. ಹಾಗೆ ಮಲಗಿದ್ದ ಹೆಬ್ಬಾವಿದು. ನಮ್ಮ ಸಮಯಪ್ರಜ್ಞೆಯಿಂದ ಒಂದು ಅಮಾಯಕ ಜೀವಿ ಬದುಕಿ ಉಳಿಯಿತು ಎಂಬೂದು ಸಮಾಧಾನದ ಸಂಗತಿ ಎಂದು ಗುರುರಾಜ್ ವಿವರಿಸಿದ್ದಾರೆ.

udp python 2

ಹುತ್ತವನ್ನು ಬಗೆದಾದ ಮೇಲೆ ಹಾವನ್ನು ಅದರ ಪಾಡಿಗೆ ಹೋಗಲು ಬಿಟ್ಟೆವು. ಡಿಸೆಂಬರಿನಿಂದ ನಾಡಿದ್ದು ಜೂನ್ ಅಂತ್ಯದವರೆಗೆ ಬಹುತೇಕ ಎಲ್ಲಾ ಜಾತಿ, ಪ್ರಭೇದದ ಹಾವುಗಳ ವಂಶೋತ್ಪತ್ತಿ ಕಾಲ. ಮಾರ್ಚ್ ಅಂತ್ಯದಿಂದ ಜೂನ್ ಅಂತ್ಯದವರೆಗೆ ಹಾವುಗಳ ಮೊಟ್ಟೆಗಳೊಡೆದು ಮರಿಗಳು ಜನಿಸುವ ಸಮಯ. ನಾಗರಹಾವಿನಿಂದ ಹಿಡಿದು ಅನೇಕ ಪ್ರಭೇದದ ಹಾವುಗಳು ತಂಪಾದ ಹುತ್ತಗಳೊಳಗೂ ಅವುಗಳ ಆಸುಪಾಸಿನ ಹಸಿರು ಪರಿಸರದೊಳಗೂ ಮೊಟ್ಟೆಗಳನ್ನಿಟ್ಟು ಸುಮಾರು ಎರಡು ತಿಂಗಳುಗಳ ಕಾಲ ತಮ್ಮ ಕರುಳ ಕುಡಿಗಳನ್ನು ಕಾಪಾಡುತ್ತ ಅದೇ ಪ್ರದೇಶದೊಳಗೆ ಸುತ್ತಾಡುತ್ತಿರಬಹುದು. ಇನ್ನೊಂದಷ್ಟು ಕಾಲ ಹುತ್ತ ಮತ್ತು ಹಸಿರು ಪ್ರದೇಶಗಳನ್ನು ತೆರವು ಅಥವಾ ಸಮತಟ್ಟುಗೊಳಿಸುವುದು ಅಷ್ಟು ಸಮಂಜಸವಲ್ಲವೆಂದು ಗುರುರಾಜ್ ಸಲಹೆ ನೀಡಿದ್ದಾರೆ.

TAGGED:landPublic TVpythonRescueudupiಉಡುಪಿಉರಗ ತಜ್ಞಪಬ್ಲಿಕ್ ಟಿವಿರಕ್ಷಣೆಹೆಬ್ಬಾವು
Share This Article
Facebook Whatsapp Whatsapp Telegram

Cinema news

Puneeth Rajakumar
800 ಕೆ.ಜಿ ಕಂಚಿನ ಅಪ್ಪು ಪುತ್ಥಳಿ ಅನಾವರಣ
Bengaluru City Cinema Districts Karnataka Latest Sandalwood Top Stories
Moogathi Malli
ಮೂಗುತಿ ಮಲ್ಲಿ: ಚೂಟಿ ಹುಡುಗಿ, ಘಾಟಿ ಬೆಡಗಿ!
Cinema Latest Sandalwood Top Stories
Dhurandhar 2 ranveer singh
ರಿಲೀಸ್‌ ದಿನವೇ ಎಲ್ಲಾ ಬಾಕ್ಸಾಫೀಸ್‌ ರೆಕಾರ್ಡ್‌ ಉಡೀಸ್‌ ಮಾಡಿದ ಧುರಂಧರ್‌ 2‌ – ಗಳಿಸಿದ್ದೆಷ್ಟು?
Bollywood Cinema Latest Main Post
Singer Mangli
`ಸರ್ಸೆ ಸೆರಗ ಸರ್ಸೆ’ ಹಾಡು ವಿವಾದ | ಉದ್ದೇಶಪೂರ್ವಕವಲ್ಲ, ನಿಮ್ಮ ಭಾವನೆಗಳನ್ನು ಗೌರವಿಸುತ್ತೇವೆ: ಕ್ಷಮೆಯಾಚಿಸಿದ ಗಾಯಕಿ ಮಂಗ್ಲಿ
Cinema Latest Top Stories

You Might Also Like

Oil
Dakshina Kannada

ಚೀನಾಗೆ ತೆರಳುತ್ತಿದ್ದ ಟ್ಯಾಂಕರ್‌ ಯೂಟರ್ನ್‌ – ಮಂಗಳೂರಿಗೆ ಬರ್ತಿದೆ 7.7 ಲಕ್ಷ ಬ್ಯಾರೆಲ್ ಕಚ್ಚಾ ತೈಲವಿರುವ ಹಡಗು

Public TV
By Public TV
8 hours ago
Lamborghini Car
Bengaluru City

ಬೆಂಗ್ಳೂರಲ್ಲಿ ಮುಂದುವರಿದ ಐಷಾರಾಮಿ ಕಾರುಗಳ ದರ್ಬಾರ್ – ರಾಜಾರೋಷವಾಗಿ ಲ್ಯಾಂಬೋರ್ಗಿನಿ ಡ್ರಿಫ್ಟಿಂಗ್

Public TV
By Public TV
8 hours ago
War
Latest

ಮಧ್ಯಪ್ರಾಚ್ಯ ಬಿಕ್ಕಟ್ಟು; ಭಾರತಕ್ಕೆ ʻಕರೆಂಟ್‌ ಶಾಕ್‌ʼ ಎದುರಾಗುತ್ತಾ? – ವಿದ್ಯುತ್ ಕಾರ್ಯದರ್ಶಿ ಹೇಳಿದ್ದೇನು?

Public TV
By Public TV
8 hours ago
Randeep singh surjewala
Bagalkot

ದಾವಣಗೆರೆಯಲ್ಲಿ ಸಮರ್ಥ್‌ ಶಾಮನೂರಿಗೆ ಕಾಂಗ್ರೆಸ್‌ ಟಿಕೆಟ್‌ ಫಿಕ್ಸ್‌..?

Public TV
By Public TV
8 hours ago
01 15
Big Bulletin

ಬಿಗ್‌ ಬುಲೆಟಿನ್‌ 21 March 2026 ಭಾಗ-1

Public TV
By Public TV
9 hours ago
02 15
Big Bulletin

ಬಿಗ್‌ ಬುಲೆಟಿನ್‌ 21 March 2026 ಭಾಗ-2

Public TV
By Public TV
9 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?