ದಾವಣಗೆರೆ: ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಚಿರನಿದ್ರೆಗೆ ಜಾರಿದ್ದಾರೆ. ಸದಾ ಸಹಾಯದ ಹಸ್ತ ಚಾಚುವ ಗುಣವನ್ನು ಹೊಂದಿದ್ದ ಪುನೀತ್ ಕಷ್ಟ ಎಂದು ಬಂದವರಿಗೆ ಸಹಾಯ ಮಾಡುತ್ತಿದ್ದರು. ಇದಕ್ಕೆ ಉದಾಹರಣೆ ಎಂಬಂತೆ ದಾವಣಗೆರೆ ಮೂಲದ ಬಾಲಕಿಯ ಶಸ್ತ್ರಚಿಕಿತ್ಸೆಗೆ ಆಸರೆಯಾಗಿ ಆರ್ಥಿಕ ಸಹಾಯ ಮಾಡಿ ಮರು ಜೀವ ನೀಡಿದ್ದರು.
ಚನ್ನಗಿರಿಯ ಕುಮಾರ್ ಹಾಗೂ ಮಂಜುಳ ಎನ್ನುವರ ಪುತ್ರಿ ಪ್ರೀತಿ ಅಪ್ಪಟ ಅಪ್ಪು ಅಭಿಮಾನಿಯಾಗಿದ್ದಳು. 2017 ರಲ್ಲಿ ಬಾಲಕಿ ಪ್ರೀತಿಗೆ ಎರಡು ಕಿಡ್ನಿಗಳು ನಿಷ್ಕ್ರಿಯಗೊಂಡಿದ್ದವು, ಆಗ ಬಾಲಕಿ ವೀಡಿಯೋ ಮೂಲಕ ಸಾಯುವುದಕ್ಕೂ ಮೊದಲು ಪುನೀತ್ ರಾಜ್ ಕುಮಾರ್ರನ್ನು ನೋಡಬೇಕು ಎಂದು ಅಂಬಲಿಸುತ್ತಿದ್ದು, ಅದನ್ನು ಪಬ್ಲಿಕ್ ಟಿವಿ ವರದಿ ಮಾಡಿತ್ತು. ಪಬ್ಲಿಕ್ ಟಿವಿ ವರದಿಯನ್ನು ನೋಡಿದ ಪುನೀತ್ ರಾಜ್ಕುಮಾರ್ ಬಾಲಕಿ ಪ್ರೀತಿಯ ಆಸೆಯನ್ನು ಪೂರೈಸಿದ್ದರು. ಬಾಲಕಿ ಪ್ರೀತಿಯನ್ನು ಭೇಟಿಯಾಗಿ ಆಪರೇಷನ್ ಗೆ ಬೇಕಾಗುವ ಆರ್ಥಿಕ ಸಹಾಯ ಮಾಡಿದ್ದ ಪುನೀತ್ 15 ಲಕ್ಷ ರೂ ಶಸ್ತ್ರಚಿಕಿತ್ಸೆಗೆ ನೀಡಿ ಸಹಾಯ ಹಸ್ತ ಚಾಚಿದ್ದರು. ಅಲ್ಲದೆ ಆ ಬಾಲಕಿಗೆ ಒಂದು ಬ್ಯಾಗ್ ಅನ್ನು ಉಡುಗೊರೆಯಾಗಿ ನೀಡಿದ್ದು, ಯಾವುದೇ ಸಮಸ್ಯೆ ಆದರು ನನ್ನ ಬಳಿ ಬಾ ಎಂದು ಬಾಲಕಿಗೆ ಭರವಸೆಯನ್ನು ನೀಡಿದ್ದರು. ಇದನ್ನೂ ಓದಿ: ಚಿಕ್ಕಮಗಳೂರಿನ ನೇಚರ್, ಕಾಫಿ ಅಂದ್ರೆ ಪುನೀತ್ಗೆ ತುಂಬಾ ಇಷ್ಟ: ಭರತ್
ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಪ್ರೀತಿ, ಅಂದು ಭೇಟಿ ನೀಡಿ ಉಡುಗೊರೆಯಾಗಿ ನೀಡಿದ್ದ ಬ್ಯಾಗ್ ಹಿಡಿದು ಅಪ್ಪು ಅಗಲಿಕೆಗೆ ಕಣ್ಣಿರಿಟ್ಟಳು. ಅಪ್ಪು ಸರ್ ಅಗಲಿಕೆ ನಮಗೆ ನಂಬಲಾಗುತ್ತಿಲ್ಲ. ಆದರೆ ಈಗ ನಮ್ಮನ್ನು ಅಗಲಿರುವುದು ಮಾತ್ರ ನೋವು ತಡೆಯಲಾಗುತ್ತಿಲ್ಲ ಎಂದು ದುಖಃದಿಂದ ಉತ್ತರಿಸಿದಳು. ಇದನ್ನೂ ಓದಿ: ಪುನೀತ್ ಸಾವಿನ ಸುದ್ದಿ ನೋಡಿ ಹೃದಯಾಘಾತದಿಂದ ಅಭಿಮಾನಿ ಸಾವು