ಮಟಾಶ್: ಪುನೀತ್ ಹಾಡಿದ ಉತ್ತರ ಕರ್ನಾಟಕದ ಪವರ್ ಫುಲ್ ಹಾಡು!

Public TV
1 Min Read
maatash

ಬೆಂಗಳೂರು: ಎಸ್.ಡಿ ಅರವಿಂದ್ ನಿರ್ದೇಶನದ ಮಟಾಶ್ ಚಿತ್ರದ ಜವಾರಿ ಹಾಡೊಂದು ಈಗ ಟ್ರೆಂಡ್ ಸೆಟ್ ಮಾಡಿದೆ. ಗಾಯಕರಾಗಿ ಪುನೀತ್ ರಾಜ್ ಕುಮಾರ್ ಈ ಹಾಡಿನ ಮೂಲಕ ವಿಶಿಷ್ಟವಾಗಿಯೇ ಜನರನ್ನು ತಲುಪಿದ್ದಾರೆ. ಉತ್ತರ ಕರ್ನಾಟಕ ಭಾಗದ ಜಾನಪದ ಟಚ್ಚಿನ ಸಾಹಿತ್ಯ, ಅದಕ್ಕೊಪ್ಪುವ ಸಂಗೀತ ಮತ್ತು ಪವರ್ ಸ್ಟಾರ್ ಧ್ವನಿಯಲ್ಲಿ ಅನಾವರಣಗೊಂಡಿರೋ ಪವರ್ ಫುಲ್ ಹಾಡು… ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಟ್ರೆಂಡ್ ಸೆಟ್ ಮಾಡಲು ಮತ್ತೇನು ಬೇಕು?

‘ಚಜ್ಜಿರೊಟ್ಟಿ ಚವಳಿಕಾಯ್ ದುಡ್ಡಿಗೆ ಸೇರ್ ಬದನಿಕಾಯ್’ ಎಂಬ ಈ ಹಾಡಿಗೆ ನಿರ್ದೇಶಕ ಅರವಿಂದ್ ಅವರೇ ಸಂಗೀತ ನಿರ್ದೇಶನವನ್ನೂ ಮಾಡಿದ್ದಾರೆ. ಜಾನಪದ ಸೊಗಡು ಮೆತ್ತಿದಂಥಾ ಈ ಹಾಡನ್ನು ಸುನೀಲ ಸುಧಾಕರ ಅವರು ಬರೆದಿದ್ದಾರೆ. ಈ ಹಾಡು ಬಿಡುಗಡೆಯಾಗಿ ಅತ್ಯಂತ ಕಡಿಮೆ ಅವಧಿಯಲ್ಲಿಯೇ ಎಲ್ಲರಿಗೂ ಮತ್ತೇರಿಸಿದೆ!  ಇದನ್ನೂ ಓದಿಮಟಾಶ್ ಅಂದ್ರೆ ಅಂತ್ಯವಷ್ಟೇ ಮುಕ್ತಾಯವಲ್ಲ!

Mataash 1

ಈಗ ಎಲ್ಲೆಡೆ ‘ಚಜ್ಜಿರೊಟ್ಟಿ ಚವಳಿಕಾಯ್ ದುಡ್ಡಿಗೆ ಸೇರ್ ಬದನಿಕಾಯ್’ ಘಮ ಹರಡಿಕೊಂಡಿದೆ. ಒಂದು ವಿಶಿಷ್ಟವಾದ ಕಥಾನಕವನ್ನು ಮಟಾಶ್ ಚಿತ್ರದ ಮೂಲಕ ಹೇಳ ಹೊರಟಿರುವ ಅರವಿಂದ್ ಅವರು ಈ ಹಾಡಿನ ಮೂಲಕ ಮೋಡಿ ಮಾಡಿದ್ದಾರೆ. ಇದು ಪುನೀತ್ ಅವರ ಗಾಯನ ಯಾನದಲ್ಲಿಯೂ ಮಹತ್ವದ ಹಾಡಾಗಿ ದಾಖಲಾಗಿದೆ. ಯಾಕೆಂದರೆ, ಈವರೆಗೆ ಸಾಕಷ್ಟು ಹಾಡುಗಳನ್ನು ಹಾಡಿರೋ ಪುನೀತ್ ಈವರೆಗೂ ಉತ್ತರ ಕರ್ನಾಟಕ ಭಾಷೆಯ ಹಾಡು ಹಾಡಿರಲಿಲ್ಲ. ಇದು ಆ ಶೈಲಿಯಲ್ಲಿ ಪುನೀತ್ ಹಾಡಿರೋ ಮೊದಲ ಹಾಡಾಗಿಯೂ ದಾಖಲಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article