– ಕೆನಡಾಗೂ ಸೇಲ್ ಆಗ್ತಿವೆ ಅಮರಶ್ರೀ ಫೋಟೋ
ಬೆಂಗಳೂರು: ಪವರ್ ಸ್ಟಾರ್, ಕನ್ನಡಿಗರ ಪ್ರೀತಿಯ ಅಪ್ಪು, ರಾಜಕುಮಾರ ನಮ್ಮನ್ನೆಲ್ಲ ಅಗಲಿ 3 ತಿಂಗಳು ಕಳೆದಿದೆ. ಆದರೆ ಅಪ್ಪು ನೆನಪಿಂದ ಸ್ನೇಹಿತರು, ಚಿತ್ರರಂಗ, ಕುಟುಂಬಸ್ಥರು ಹಾಗೂ ಅವರ ಅಭಿಮಾನಿಗಳು ಇನ್ನೂ ಹೊರ ಬಂದಿಲ್ಲ. ಕರುನಾಡಿಗಂತೂ ಅಪ್ಪು ಅಗಲಿಕೆ ತಮ್ಮ ಕುಟುಂಬದ ಮನೆ ಸದಸ್ಯರನ್ನೇ ಕಳೆದುಕೊಂಡಂತೆ ಆಗಿದೆ.
ದೊಡ್ಮನೆ ತಮ್ಮ ಅಭಿಮಾನಿಗಳನ್ನ ದೇವರು ಅಂತ ಕರೆಯುತ್ತೆ. ಆದರೆ ದೊಡ್ಮನೆ ಮಗನೇ ನಮ್ ದೇವರು ಅಂತ ಅಭಿಮಾನಿಗಳು ಪೂಜಿಸ್ತಿದ್ದಾರೆ. ಅಂಗಡಿ, ಹೋಟೆಲ್, ಮಾಲ್ ಅಷ್ಟೇ ಏಕೆ ತಮ್ಮ ಮನೆಯ ದೇವರ ಕೋಣೆಯಲ್ಲೂ ಅಪ್ಪು ಫೋಟೋ ಇಟ್ಟು ನಿತ್ಯ ಪೂಜೆ ಸಲ್ಲಿಸ್ತಿದ್ದಾರೆ.
ಜಮ್ಮು ಕಾಶ್ಮೀರ, ಹರಿಯಾಣ, ಜಾರ್ಖಂಡ್, ಮಹಾರಾಷ್ಟ್ರ, ಕೆನಡಾ ಸೇರಿದಂತೆ ಹಲವು ಭಾಗಗಳಿಗೆ ಪುನೀತ್ ಫೋಟೋ ಅತೀ ಹೆಚ್ಚು ಮಾರಾಟವಾಗ್ತಿದೆ. ವಿಶೇಷ ಅಂದ್ರೆ ಜಮ್ಮು ಕಾಶ್ಮೀರದ ಇಂಡಿಯನ್ ಆರ್ಮಿ ಸೇನಾನಿಗಳಿಗೂ ಪುನೀತ್ ಫೋಟೋ ಬೆಂಗಳೂರಿನಿಂದ ಪಾರ್ಸೆಲ್ ಆಗಿದೆಯಂತೆ.
ಇತ್ತ ಅಪ್ಪು ಸಮಾಧಿಗೆ ಬಂದವರೆಲ್ಲರೂ ಪುನೀತ್ ಫೋಟೋ ಖರೀದಿಸಲು ಮಿಗಿಬೀಳ್ತಿದ್ದಾರೆ. ಲೋಕೇಶ್ ಎಂಬವರು ಪುನೀತ್ ಸಮಾಧಿ ಬಳಿ ಅಪ್ಪು ಫೋಟೋಗಳನ್ನು ಸೇಲ್ ಮಾಡ್ತಿದ್ದು ನಿತ್ಯ 300ಕ್ಕೂ ಹೆಚ್ಚು ಫೋಟೋಗಳು ಸೇಲ್ ಆಗ್ತಿವೆ. ಅಪ್ಪು ಫೋಟೋ ಖರೀದಿ ಮಾಡ್ತಿರೋ ಅಭಿಮಾನಿಗಳು ಅಪ್ಪು ನೆನೆದು ಕಣ್ಣೀರು ಹಾಕ್ತಿದ್ದಾರೆ.
ಒಟ್ಟಿನಲ್ಲಿ ಅಪ್ಪು ಇಲ್ಲದ ಕೊರಗು ಇನ್ನಿಲ್ಲದಂತೆ ಕಾಡುತ್ತಿದೆ. ಅಪ್ಪು ನೆನಪಲ್ಲೇ ಅವ್ರ ಅಭಿಮಾನಿಗಳು ದಿನದೂಡುತ್ತಿದ್ದಾರೆ. ಇದನ್ನೂ ಓದಿ: ಬೆಳಗಾವಿ ಮಾತ್ರವಲ್ಲ, ಬೆಂಗ್ಳೂರಲ್ಲೂ ಅನ್ಯಭಾಷಿಕರ ದರ್ಬಾರ್ – ಪಬ್ನಲ್ಲಿ ಕನ್ನಡ ಹಾಡು ಕೇಳಿದ್ದಕ್ಕೆ ಹಲ್ಲೆ ಯತ್ನ