Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Cinema

ಅಪ್ಪು ಅಗಲಿಕೆ ಬಗ್ಗೆ ಶಿವಣ್ಣ ಸುದೀಪ್‍ಗೆ ಹೇಳಿದ್ದೇನು?

Public TV
Last updated: October 30, 2021 3:45 pm
Public TV
Share
3 Min Read
kichcha
SHARE

ಬೆಂಗಳೂರು: ನಟ ಪುನೀತ್ ರಾಜ್‍ಕುಮಾರ್ ನಿಧನಕ್ಕೆ ನಾಡಿನ ಖ್ಯಾತ ನಟ-ನಟಿಯರು, ಗಣ್ಯರು ಸಂತಾಪ ಸೂಚಿಸಿದ್ದಾರೆ. ತಾವು ಕಂಡಂತೆ ಅಪ್ಪು, ನಟನೊಂದಿಗಿನ ಒಡನಾಟವನ್ನೂ ಸ್ಮರಿಸಿದ್ದಾರೆ. ನಟ ಸುದೀಪ್, ಬಾಲ್ಯದಿಂದಲೂ ನಾನೊಬ್ಬ ಸ್ಟಾರ್ ನಟನನ್ನು ನೋಡಿದ್ದೇನೆ. ಹುಟ್ಟುತ್ತಲೇ ಸ್ಟಾರ್ ಆಗಿದ್ದ ಅಪ್ಪು. ಇಂದು ಆತನಿಲ್ಲದಿರುವುದು ಭರಿಸಲಾಗದ ಶೂನ್ಯ ಎಂದು ಭಾವುಕವಾಗಿ ಟ್ವೀಟ್ ಮಾಡಿದ್ದಾರೆ.

PUNEET RAJKUMAR

ಸುದೀಪ್ ಟ್ವೀಟ್‍ನಲ್ಲೇನಿದೆ..?;

ಅದು ಬಾಲ್ಯಜೀವನದ ಪಯಣ. ನಾನು ಅಪ್ಪುನನ್ನು ಮೊದಲು ಭೇಟಿಯಾಗಿದ್ದು ಶಿವಮೊಗ್ಗದಲ್ಲಿ. ಆಗಲೇ ಅಪ್ಪು ಸ್ಟಾರ್ ಆಗಿದ್ದರು. ಬಾಲನಟನಾಗಿ ಅಭಿನಯಿಸಿದ್ದ “ಭಾಗ್ಯವಂತರು” ಸಿನಿಮಾ ಹಿಟ್ ಆಗಿದ್ದ ಸಂಭ್ರಮಕ್ಕೆ ಪುನೀತ್ ಪ್ರವಾಸ ಕೈಗೊಂಡಿದ್ದರು. ಆಗ ಸಿನಿಮಾರಂಗದಲ್ಲಿ ನಮ್ಮ ತಂದೆಯ ಹೆಸರೂ ಚಿರಪರಿಚಿತ. ಈ ವೇಳೆ ಪುನೀತ್‍ರನ್ನು ಪೋಸ್ಟರ್ ಬಿಡುಗಡೆ ಮಾಡಲು ಮನೆಗೆ ಕರೆತರಲಾಗಿತ್ತು. ಅದೇ ಮೊದಲು ನಾನು ಅವರನ್ನು ಭೇಟಿಯಾಗಿದ್ದು. ಆ ವೇಳೆ ನನ್ನ ಆಟಿಕೆಗಳನ್ನು ಕಂಡ ಪುನೀತ್‍ಗೆ ಬಹಳ ಕುತೂಹಲ ಮೂಡಿತ್ತು. ಇದನ್ನೂ ಓದಿ: ಮೂರು ವಾರಗಳ ಹಿಂದೆ ಅಪ್ಪು ಜೊತೆ ಮಾತನಾಡಿದ್ದೆ: ರಮ್ಯಾ

PUNEET RAJKUMAR

ನಾವಿಬ್ಬರೂ (ಪುನೀತ್-ಸುದೀಪ್) ಆಟವಾಡುತ್ತಿದ್ದಾಗ ಮಹಿಳೆಯೊಬ್ಬರು ತಟ್ಟೆಯಲ್ಲಿ ಊಟ ಹಾಕಿಕೊಂಡು ಪುನೀತ್ ತಿನ್ನಿಸಲು ಓಡಿಬಂದ ಪ್ರಸಂಗ ನನಗೀಗಲೂ ನೆನಪಿದೆ. ಆತನನ್ನು ನೋಡಿ ಅವರು ತುಂಬಾ ಭಾವುಕರಾದರು. ಈ ಚಿತ್ರಣವನ್ನು ಕಂಡು ನಾನು ಕೂತು ಭಾವುಕನಾಗಿದ್ದೆ.

PUNEET

ಆ ದಿನ ನೆರೆಹೊರೆಯವರು, ಮಕ್ಕಳೆಲ್ಲ ನಮ್ಮ ಮನೆಯಲ್ಲಿ ದಂಡುದಂಡಾಗಿ ನೆರೆದಿದ್ದರು. ಬೇರೆ ಮಕ್ಕಳಿದ್ದಾರೆಂದಲ್ಲ, ಚಿತ್ರರಂಗದ ದಂತಕಥೆ ಡಾ. ರಾಜ್‍ಕುಮಾರ್ ಅವರ ಪುತ್ರ ಬಾಲಕ ಸ್ಟಾರ್ ಪುನೀತ್ ಬಂದಿದ್ದಾರೆಂಬ ಕಾರಣಕ್ಕೆ ಹೆಚ್ಚಿನ ಮಂದಿ ಅಂದು ಮನೆಯಲ್ಲಿ ನೆರೆದಿದ್ದರು.

An irreplaceable Void. pic.twitter.com/fjqhvyahZZ

— Kichcha Sudeepa (@KicchaSudeep) October 30, 2021

ಅದಾದ ಬಳಿಕ ಸಿನಿಮಾರಂಗದಲ್ಲಿ ಗುರುತಿಸಿಕೊಂಡಿದ್ದ ಕಾರಣ ನಾವಿಬ್ಬರೂ ಹಲವು ಬಾರಿ ಭೇಟಿಯಾಗಿದ್ದೇವೆ. ಪುನೀತ್ ನನಗೆ ಸ್ನೇಹಿತ ಮಾತ್ರವಲ್ಲ, ಅತ್ಯುತ್ತಮ ಸ್ಪರ್ಧಿಯೂ ಹೌದು. ಅಪ್ಪು ಒಬ್ಬ ಅದ್ಭುತ ನಟ, ಡ್ಯಾನ್ಸರ್, ಫೈಟರ್, ಅತ್ಯುತ್ತಮ ವ್ಯಕ್ತಿ ಕೂಡ ಹೌದು. ನನ್ನ ನಟನೆಯನ್ನೂ ಉತ್ತಮಗೊಳಿಸಿಕೊಳ್ಳುವ ಉದ್ದೇಶದಿಂದ ಪುನೀತ್ ಅವರ ನಟನಾ ಸ್ಪರ್ಧೆಯನ್ನು ನಾನು ಸಂತೋಷದಿಂದಲೇ ಸ್ವೀಕರಿಸಿದ್ದೆ. ಅಂತಹ ಅದ್ಭುತ ನಟನ ಪರಂಪರೆಯಲ್ಲಿ ಜೊತೆಗಾರನಾಗಿ ಗುರುತಿಸಿಕೊಂಡಿದ್ದಕ್ಕೆ ನನಗೆ ಹೆಮ್ಮೆಯಿದೆ ಎಂದು ನಟ ಕಿಚ್ಚ ಸುದೀಪ್ ಅವರು ಪುನೀತ್ ಅವರೊಂದಿಗೆ ಕಳೆದ ಮಧುರ ಕ್ಷಣಗಳನ್ನು ಸ್ಮರಿಸಿದ್ದಾರೆ.

SUDEEP

ಚಿತ್ರರಂಗ ಇಂದು ಅಪೂರ್ಣವಾಗಿದೆ. ಕತ್ತಲಾವರಿಸಿದೆ. ಕಾಲ ನಿಜಕ್ಕೂ ಕ್ರೂರಿ. ಈ ನೆಲ ದುಃಖದಿಂದ ಆವರಿಸಿದೆ. ಪ್ರಕೃತಿಯೇ ದುಃಖಿಸುತ್ತಿರುವಂತೆ ನಿನ್ನೆಯ ಸಂದರ್ಭ ಭಾಸವಾಯಿತು. ಮಂಕಾದ ದಿನವದು. ಕಾರ್ಮೋಡ ಕವಿದಂತಹ ಅನುಭವ. ನಾನು ಬೆಂಗಳೂರಿಗೆ ಬಂದ ತಕ್ಷಣ ಪುನೀತ್‍ನನ್ನು ಇರಿಸಿದ್ದ ಜಾಗಕ್ಕೆ ತಕ್ಷಣ ಹೊರಟೆ. ನನ್ನ ಉಸಿರಿನ ಏರಿಳಿತ ಹೆಚ್ಚಾಗಿತ್ತು. ಆ ಸಂದರ್ಭ ವಾಸ್ತವವಾಗಿದ್ದರೂ ಅದನ್ನು ಅರಗಿಸಿಕೊಳ್ಳಲು ನನ್ನಿಂದಾಗಲಿಲ್ಲ.

GO IN PEACE,,
REST IN POWER MY FRIEND. pic.twitter.com/WmB15eQKb8

— Kichcha Sudeepa (@KicchaSudeep) October 30, 2021

ಅಪ್ಪು ಮಲಗಿರುವುದನ್ನು ಕಂಡು ಎಲ್ಲರೆದೆಯ ಮೇಲೆ ಪರ್ವತವೇ ಬಿದ್ದಂತೆ ಭಾಸವಾಯಿತು. ಯಾಕೆ.. ಹೇಗೆ!!!! ಎಂಬಂತಹ ಹಲವು ಪ್ರಶ್ನೆಗಳು, ಮಾತುಗಳು ಹೊರಡುತ್ತಿದ್ದವು. ನಾನು ಸರಿಯಾಗಿ ಉಸಿರಾಡಲು ಸಾಧ್ಯವಾಗದೇ ಹೋದದ್ದು ಅದೇ ಮೊದಲು. ನನ್ನ ಸಹದ್ಯೋಗಿ, ಗೆಳೆಯ, ಬಾರದ ಲೋಕಕ್ಕೆ ಹೋಗಿದ್ದಾನೆ. ಆ ಸ್ಥಿತಿಯಲ್ಲಿ ಆತನನ್ನು ಹೆಚ್ಚು ಸಮಯ ನನ್ನಿಂದ ನೋಡಲಾಗಲಿಲ್ಲ. ಆ ನೋಟ ನನ್ನನ್ನು ಕೊಲ್ಲುತ್ತಿತ್ತು.

PUNEET

ಆ ವೇಳೆ ಶಿವಣ್ಣನ ಕಡೆಗೆ ನೋಡಿದೆ. ಆಗ ಶಿವಣ್ಣ ನನ್ನೊಂದಿಗೆ ಹೇಳಿದ, “ಅಪ್ಪು ನನಗಿಂತ 13 ವರ್ಷ ಚಿಕ್ಕವನು. ನನ್ನ ತೋಳುಗಳಲ್ಲಿ ಆತನನ್ನು ಎತ್ತಿ ಆಡಿಸಿದ್ದೇನೆ. ನಾನು ಇಲ್ಲಿಯವರೆಗೂ ಆತನನ್ನು ನೋಡಿಕೊಂಡು ಬಂದಿದ್ದೇನೆ. ಈಗ ನಾನು ಇನ್ಯಾರನ್ನು ನೋಡಲು ಸಾಧ್ಯ…!. ಇದನ್ನೂ ಓದಿ: ಇಂದಲ್ಲ, ನಾಳೆ ಪುನೀತ್ ಅಂತ್ಯಕ್ರಿಯೆ: ಸಿಎಂ ಬೊಮ್ಮಾಯಿ

ಶಿವಣ್ಣನ ಮಾತುಗಳು ಈಗಲೂ ನನ್ನ ಕಿವಿಯಲ್ಲಿ ಪ್ರತಿಧ್ವನಿಸುತ್ತಿವೆ. ಎಲ್ಲರೂ ದಿಗ್ಭ್ರಾಂತರಾಗಿದ್ದಾರೆ, ನೊಂದಿದ್ದಾರೆ, ಛಿದ್ರರಾಗಿದ್ದಾರೆ. ಇದನ್ನು ಸ್ವೀಕರಿಸಲು ಎಲ್ಲರಿಗೂ ಬಹುಕಾಲ ಬೇಕಾಗುತ್ತದೆ. ಖಾಲಿತನ ನಮ್ಮನ್ನು ಆವರಿಸಿದೆ. ಅಪ್ಪುವಿನ ಜಾಗವನ್ನು ಯಾರಿಂದಲೂ ತುಂಬಲಾಗುವುದಿಲ್ಲ. ಒಬ್ಬ ಮಹಾನ್ ವ್ಯಕ್ತಿಗೆ ಸೇರಿದ ಜಾಗವದು. “ಪುನೀತ್”,,,, ನನ್ನ ಪ್ರೀತಿ “ಅಪ್ಪು”. ಶಾಂತನಾಗಿ ಹೋಗು, ಚಿರಶಕ್ತಿ ದೊರೆಕಲಿ ನನ್ನ ಸ್ನೇಹಿತನೇ.

TAGGED:kiccha sudeepPublic TVPuneet Rajkumartweetಕಿಚ್ಚ ಸುದೀಪ್ಟ್ವೀಟ್ಪಬ್ಲಿಕ್ ಟಿವಿಪುನೀತ್ ರಾಜ್‍ಕುಮಾರ್ಬೆಂಗಳೂರುಸ್ಯಾಂಡಲ್‍ವುಡ್
Share This Article
Facebook Whatsapp Whatsapp Telegram
Leave a Comment

Leave a Reply

Your email address will not be published. Required fields are marked *

Cinema News

Yash Toxic Movie
ಟಾಕ್ಸಿಕ್ ಭರ್ಜರಿ ಆ್ಯಕ್ಷನ್ ಶುರು, ಹಾಲಿವುಡ್‌ನಿಂದ ಬಂದ್ರು ಜೆಜೆ ಪೆರ‍್ರಿ
Cinema Latest Sandalwood Top Stories
Theatre artist and actor Dinesh Mangaluru passes away
ರಂಗಭೂಮಿ ಕಲಾವಿದ ಕೆಜಿಎಫ್‌ ನಟ ದಿನೇಶ್ ಮಂಗಳೂರು ನಿಧನ
Bengaluru City Cinema Districts Latest Main Post Udupi
Radhika Sarathkumar birthday
ರಾಧಿಕಾ ಹುಟ್ಟುಹಬ್ಬದಲ್ಲಿ ಸ್ಟಾರ್ ಗೆಳತಿಯರು, ಒಬ್ರಗಿಂತ ಒಬ್ರು ಸುಂದರಿಯರು
Cinema Latest South cinema Top Stories
Daisy Shah
ಕನ್ನಡ ಸಿನಿಮಾ ಹಾಡಿನಲ್ಲಿ ಹೀರೋಯಿನ್ ಹೊಕ್ಕಳಿನ ಮೇಲೆ ಹಣ್ಣಿನ ಸಲಾಡ್ ಮಾಡಲಾಗುತ್ತಿತ್ತು: `ಆ’ ನಟಿಯ ಹೇಳಿದ್ಯಾರಿಗೆ?
Cinema Latest Sandalwood Top Stories
Chiranjeevi teams up with Bobby Kolli and KVN Productions
ಟಾಲಿವುಡ್‍ಗೂ ಎಂಟ್ರಿ ಕೊಟ್ಟ ಕೆವಿಎನ್ – ಮೆಗಾಸ್ಟಾರ್‌ಗೆ ಸಿನಿಮಾ ನಿರ್ಮಾಣ
Cinema Latest South cinema Top Stories

You Might Also Like

Ramalinga Reddy
Bengaluru City

ಧರ್ಮಸ್ಥಳ ಕೇಸ್ 90% ತನಿಖೆ ಮುಗಿದಿದೆ, ಎನ್‌ಐಎ, ಸಿಬಿಐ ಅಗತ್ಯವಿಲ್ಲ: ರಾಮಲಿಂಗಾ ರೆಡ್ಡಿ

Public TV
By Public TV
3 minutes ago
Amit shah
Latest

ಕೇಜ್ರಿವಾಲ್ ಪ್ರಕರಣ ಉಲ್ಲೇಖಿಸಿ ವಿಪಕ್ಷಗಳಿಗೆ ತಿರುಗೇಟು – ಪಿಎಂ, ಸಿಎಂ ವಜಾ ಮಸೂದೆ ಸಮರ್ಥಿಸಿಕೊಂಡ ಅಮಿತ್ ಶಾ

Public TV
By Public TV
20 minutes ago
Pratap Simha Banu mushtaq
Districts

ಕನ್ನಡ ತಾಯಿ ಭುವನೇಶ್ವರಿಯನ್ನು ಒಪ್ಪದ ಬಾನು ಮುಷ್ತಾಕ್ ನಾಡದೇವತೆಯನ್ನು ಒಪ್ಪುತ್ತಾರಾ: ಪ್ರತಾಪ್ ಸಿಂಹ ಪ್ರಶ್ನೆ

Public TV
By Public TV
20 minutes ago
DK Shivakumar BK Hariprasad
Karnataka

ಕೆಪಿಸಿಸಿ ಅಧ್ಯಕ್ಷರಾಗಿ ಆರ್‌ಎಸ್‌ಎಸ್ ಪ್ರಾರ್ಥನೆ ಹಾಡಿದ್ದು ತಪ್ಪು: ಬಿಕೆ ಹರಿಪ್ರಸಾದ್

Public TV
By Public TV
49 minutes ago
bbmp garbage bengaluru
Bengaluru City

ಬೆಂಗಳೂರಿಗರೇ ಗಮನಿಸಿ, ಮನೆ ಮನೆ ಕಸ ಸಂಗ್ರಹದ ಆಟೋಗಳ ಸಮಯ ಬದಲಾವಣೆ

Public TV
By Public TV
55 minutes ago
Ganesh Chaturthi
Bengaluru City

ಗಣೇಶ ಚತುರ್ಥಿಗೆ ಎರಡೇ ದಿನ ಬಾಕಿ – ಬಿಬಿಎಂಪಿಯಿಂದ 75 ಏಕಗವಾಕ್ಷಿ ಕೇಂದ್ರಗಳ ಸ್ಥಾಪನೆ

Public TV
By Public TV
1 hour ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?