Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಆರೋಗ್ಯವಾಗಿದ್ದರೂ ಹೃದಯ ಸ್ತಂಭನ ಯಾಕೆ ಆಗುತ್ತೆ? – ಎಲ್ಲ ಪ್ರಶ್ನೆಗಳಿಗೆ ಡಾ. ಮಂಜುನಾಥ್ ಉತ್ತರ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Health | ಆರೋಗ್ಯವಾಗಿದ್ದರೂ ಹೃದಯ ಸ್ತಂಭನ ಯಾಕೆ ಆಗುತ್ತೆ? – ಎಲ್ಲ ಪ್ರಶ್ನೆಗಳಿಗೆ ಡಾ. ಮಂಜುನಾಥ್ ಉತ್ತರ

Health

ಆರೋಗ್ಯವಾಗಿದ್ದರೂ ಹೃದಯ ಸ್ತಂಭನ ಯಾಕೆ ಆಗುತ್ತೆ? – ಎಲ್ಲ ಪ್ರಶ್ನೆಗಳಿಗೆ ಡಾ. ಮಂಜುನಾಥ್ ಉತ್ತರ

Public TV
Last updated: October 31, 2021 6:09 pm
Public TV
Share
3 Min Read
PUNEET-C.N.MANJUNATH
SHARE

ಬೆಂಗಳೂರು: ನಟ ಪುನೀತ್ ರಾಜ್‍ಕುಮಾರ್ ಹಠಾತ್ ನಿಧನ ನಂತರ ಹೃದಯಾಘಾತ ಮತ್ತು ಹೃದಯ ಸ್ತಂಭನ ಬಗ್ಗೆ ರಾಜ್ಯಾದ್ಯಂತ ವ್ಯಾಪಕ ಚರ್ಚೆಯಾಗುತ್ತಿದೆ. ಹೃದಯಾಘಾತದ ಬಗ್ಗೆ ವೈದ್ಯರು ಸಾಕಷ್ಟು ವಿಶ್ಲೇಷಣೆ ಮಾಡುತ್ತಿದ್ದಾರೆ. ಈ ಕುರಿತು ಜಯದೇವ ಹೃದ್ರೋಗ ಆಸ್ಪತ್ರೆಯ ಡಾ. ಸಿ.ಎನ್.ಮಂಜುನಾಥ್ ಅವರು ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

puneeth rajkumar 1 7

ಡಾ. ಸಿ.ಎನ್.ಮಂಜುನಾಥ್ ಅವರು ಹೇಳಿದ್ದೇನು..?
ಪುನೀತ್ ರಾಜ್‍ಕುಮಾರ್ ಅವರು ಒಳ್ಳೆಯ ಆರೋಗ್ಯ ಕಾಪಾಡಿಕೊಂಡಿದ್ದರು. ದೈಹಿಕ ಫಿಟ್‍ನೆಸ್ ಕೂಡ ಚೆನ್ನಾಗಿತ್ತು. ಜೀವನಶೈಲಿ, ಆಹಾರ ಪದ್ಧತಿ ಉತ್ತಮವಾಗಿತ್ತು. ಅವರಿಗೆ ಹೀಗಾಗಿದ್ದು ಶಾಕ್ ಎನಿಸುತ್ತಿದೆ. ಇದನ್ನೂ ಓದಿ: ಪುನೀತ್ ನಿಧನ- ಶೀಘ್ರವೇ ಜಿಮ್, ಫಿಟ್‌ನೆಸ್‌ ಸೆಂಟರ್‌ಗಳಿಗೆ ಗೈಡ್ ಲೈನ್ಸ್

ದೇಶದಲ್ಲಿ ಸಾವಿರಾರು ಜನರಿಗೆ ಹೃದಯಾಘಾತವಾಗುತ್ತೆ. ಅವರಲ್ಲಿ ಶೇ. 99 ಮಂದಿ ಆಸ್ಪತ್ರೆಗಳಿಗೆ ದಾಖಲಾಗಿ ಚಿಕಿತ್ಸೆ ಪಡೆದು ಗುಣಮುಖರಾಗಿ ಹೋಗುತ್ತಾರೆ. ಆದರೆ ಪುನೀತ್ ಅವರಿಗೆ ಆ ಅವಕಾಶ ಸಿಗಲಿಲ್ಲ. ಅದು ಬಹಳ ನೋವಿನ ಸಂಗತಿ.

heart attack

ಕೆಲವರಿಗೆ ಹೃದಯಾಘಾತ ಆದ ಸಂದರ್ಭದಲ್ಲಿ ಕೆಲವೇ ನಿಮಿಷಗಳಲ್ಲಿ ಹೃದಯದ ಬಡಿತ ನಿಂತು ಹೋಗುತ್ತೆ. ಸಾಮಾನ್ಯವಾಗಿ ಎಲ್ಲರಿಗೂ ಒಂದು ನಿಮಿಷದಲ್ಲಿ 70-80 ಬಾರಿ ಹೃದಯ ಬಡಿದುಕೊಳ್ಳುತ್ತೆ. ಸ್ವಲ್ಪ ಗಾಬರಿಯಾದರೆ 90-95 ಬಾರಿ ಬಡಿದುಕೊಳ್ಳಬಹುದು. ಹಠಾತ್ ಹೃದಯಾಘಾತ ಆದಾಗ ಕೆಲವರಿಗೆ 300, 400, 500 ತನಕವೂ ಹೃದಯ ಬಡಿದುಕೊಳ್ಳುತ್ತೆ. ಆಗ ಹೃದಯ ಅಲುಗಾಡುತ್ತೆ. ಹೃದಯದಿಂದ ಹೊರಗಡೆ ರಕ್ತವೇ ಬರುವುದಿಲ್ಲ. ಅದನ್ನು ನಾವು ವೈದ್ಯಕೀಯ ಪರಿಭಾಷೆಯಲ್ಲಿ ‘ವೆಂಟ್ರಿಕ್ಯುಲರ್ ಫಿಬ್ರಿಲೇಷನ್’ ಅಂತ ಕರೆಯುತ್ತೇವೆ. ಆಗ ಹೃದಯದ ಬಡಿತ ನಿಂತು ಹೋದಾಗ ‘ಡಿಸಿ ಶಾಕ್’ ಎಂಬ ಉಪಕರಣವನ್ನು ಎದೆಯ ಮೇಲಿಟ್ಟು ಶಾಕ್ ಕೊಟ್ಟರೆ, ಹೃದಯ ಮತ್ತೆ ಚಲನೆ ಆರಂಭಿಸುತ್ತೆ. ಅದಕ್ಕಾಗಿ ರೋಗಿ ತುರ್ತು ನಿಗಾ ಘಟಕದಲ್ಲೇ ಇರಬೇಕು. ಇದನ್ನೂ ಓದಿ: ನನಗೆ ಇಂಡಸ್ಟ್ರಿಯಲ್ಲಿ ಮೊದಲು ಕರೆ ಮಾಡಿದ ಸ್ಟಾರ್ ನಟ ಪುನೀತ್: ವಸಿಷ್ಠ ಸಿಂಹ

ಕೆಲವರಿಗೆ ಆಸ್ಪತ್ರೆಗೆ ಹೋಗುವಷ್ಟು ಸಮಯ ಕೂಡ ಇರುವುದಿಲ್ಲ. ಶೇ. 5ರಷ್ಟು ಮಂದಿಗೆ ಹೃದಯಾಘಾತವಾದ ಕೆಲವೇ ನಿಮಿಷಗಳಲ್ಲಿ (5-10 ನಿಮಿಷ) ಹೃದಯದ ಬಡಿತವೇ ನಿಂತು ಹೋಗುತ್ತೆ. ಹೃದಯದೊಳಗಡೆಯೂ ಕರೆಂಟ್ ಇದೆ. ಅದು ಆಫ್ ಆಗಿಬಿಡುತ್ತೆ. ಇದನ್ನೇ ನಾವು ದಿಢೀರ್ ಕಾರ್ಡಿಯಾಕ್ ಅರೆಸ್ಟ್(ಹೃದಯ ಸ್ತಂಭನ) ಎನ್ನುತ್ತೇವೆ. ಪುನೀತ್ ರಾಜ್‍ಕುಮಾರ್ ಅವರಿಗೆ ಹೃದಯಾಘಾತವಾಗಿರುವುದು ನಿಜ. ಆಸ್ಪತ್ರೆಗೆ ಬರುವಷ್ಟರಲ್ಲಿ ಅವರ ಹೃದಯದ ಬಡಿತ ನಿಂತು ಹೋಗಿತ್ತು, ಜೀವ ಇರಲಿಲ್ಲ.

fitbeat heart rate

ಎಷ್ಟೋ ಮಂದಿ ಹೃದಯಾಘಾತವಾಗಿ ನಮ್ಮ ಆಸ್ಪತ್ರೆಗೆ ದಾಖಲಾದಾಗ ಆಂಜಿಯೋಪ್ಲಾಸ್ಟಿಯಂತಹ ಸೂಕ್ತ ಚಿಕಿತ್ಸೆ ನೀಡುತ್ತೇವೆ. ಅವರು ನಮ್ಮೊಟ್ಟಿಗೆ ಚೆನ್ನಾಗಿಯೇ ಮಾತನಾಡಿರುತ್ತಾರೆ. ಇನ್ನೆರಡು ಮೂರು ದಿನದಲ್ಲಿ ಡಿಸ್ಚಾರ್ಜ್ ಮಾಡುತ್ತೇವೆ ಎಂದು ಕೂಡ ಹೇಳಿರುತ್ತೇವೆ. ಇದಾದ ನಂತರ ಒಂದೆರಡು ನಿಮಿಷ ನಾವು ಕೊಠಡಿಗೆ ಹೋಗಿ ಬರುವಷ್ಟರಲ್ಲಿ ಮತ್ತೆ ಅವರಿಗೆ ಹೃದಯಾಘಾತವಾಗಿ ಮೃತಪಟ್ಟಿರುತ್ತಾರೆ. ಇದನ್ನು ನಾವು “ಎಲೆಕ್ಟ್ರಿಕಲ್ ಇನ್‍ಸ್ಟೆಬಿಲಿಟಿ” ಎಂದು ಕರೆಯುತ್ತೇವೆ.

ಹೃದಯ ರಕ್ತನಾಳದಿಂದ ಹೃದಯಕ್ಕೆ ರಕ್ತ ಸರಬರಾಜಾಗುತ್ತಿರುತ್ತೆ. ಹೃದಯಾಘಾತವಾದಾಗ ರಕ್ತನಾಳ ಶೇ. 100 ರಷ್ಟು ಬ್ಲಾಕ್ ಆಗಿರಬೇಕು. ಶೇ. 60-70ರಷ್ಟು ಬ್ಲಾಕ್ ಆದಾಗ ಹೃದಯಾಘಾತವಾಗುವುದಿಲ್ಲ. ಆದರೆ ನಡೆಯುವಾಗ, ಊಟ ಮಾಡಿ ಎತ್ತರ ಪ್ರದೇಶದಲ್ಲಿ ಓಡಾಡುವಾಗ ಎದೆಯುರಿ, ಎದೆ ನೋವು ಕಾಣಿಸಿಕೊಳ್ಳಬಹುದು. ಇನ್ನೂ ಕೆಲವರಿಗೆ ಗಂಟಲು, ದವಡೆಯಲ್ಲಿ ನೋವು ಬರಬಹುದು. ಅದು ಹೃದಯಾಘಾತದ ಮುನ್ಸೂಚನೆ. ಆದರೆ ಎಲ್ಲರಿಗೂ ಈ ಮುನ್ಸೂಚನೆ ಸಿಗುವುದಿಲ್ಲ. ಶೇ. 10, 30, 50 ಹೀಗೆ.. ಕ್ರಮೇಣ ರಕ್ತನಾಳಗಳು ಬ್ಲಾಕ್ ಆಗುತ್ತಾ ಹೋದಾಗ ಹೃದಯಾಘಾತಕ್ಕೂ ಮುನ್ನ 3 ವಾರ ಅಥವಾ 3, 6 ತಿಂಗಳ ಅವಧಿಯಲ್ಲಿ ಈ ಮೇಲಿನ ಲಕ್ಷಣಗಳು ಕಾಣಿಸಿಕೊಂಡು ಮುನ್ಸೂಚನೆ ಸಿಗುತ್ತದೆ.

PUNEETH 3 3

ಕೆಲವರಿಗೆ ಹೃದಯಾಘಾತ ಆಗುವ 2 ನಿಮಿಷ ಮುಂಚೆಯೂ ಚೆನ್ನಾಗಿರುತ್ತಾರೆ. ಆಗ ರಕ್ತನಾಳ ಬ್ಲಾಕೇಜ್ ಆಗಿರುವುದಿಲ್ಲ. ಆದರೆ ರಕ್ತನಾಳದ ಒಳಗಡೆ ಕೊಲೆಸ್ಟ್ರಾಲ್ ಅಲ್ಸರ್ಸ್ ಅಂತ ಇರುತ್ತದೆ. ಅದು ಒಡೆದು ಹೋದರೆ, ಶೇ. 0 ಬ್ಲಾಕೇಜ್ ಇರುವುದು ಶೇ. 100 ಆಗಿಬಿಡುತ್ತದೆ. ಅದು ಯುವಕರಲ್ಲಿ ಹೆಚ್ಚಾಗಿ ಕಂಡುಬರುತ್ತಿದೆ ಎಂದು ಡಾ. ಸಿ.ಎನ್.ಮಂಜುನಾಥ್ ಹೇಳುತ್ತಾರೆ.

TAGGED:DR. C.N.MANJUNATHheart attackPublic TVPuneet Rajkumarಡಾ. ಸಿ.ಎನ್. ಮಂಜುನಾಥ್ಪಬ್ಲಿಕ್ ಟಿವಿಪುನೀತ್ ರಾಜ್‍ಕುಮಾರ್ಹೃದಯಾಘಾತ
Share This Article
Facebook Whatsapp Whatsapp Telegram

Cinema news

darshan ex manager mallikarjun 2 1
ದರ್ಶನ್‌, ಧ್ರುವ ಸರ್ಜಾ ನಡುವೆ ಮನಸ್ತಾಪಕ್ಕೆ ಕಾರಣ ಯಾರು? – ಮಲ್ಲಿಕಾರ್ಜುನ್‌ ಹೇಳಿದ್ದೇನು?
Bengaluru City Cinema Latest Sandalwood Top Stories
darshan ex manager mallikarjun 2
ಕೇಸ್‌ ಒಂದ್ರಲ್ಲಿ ದರ್ಶನ್‌ ಸರ್‌ ಸಿಕ್ಕಾಕೊಂಡಾಗ ಬಹಳ ಬೇಜಾರಾಯ್ತು: ಮಾಜಿ ಮ್ಯಾನೇಜರ್‌ ಮಲ್ಲಿಕಾರ್ಜುನ್‌ ಮಾತು
Bengaluru City Cinema Latest Sandalwood Top Stories
darshan ex manager mallikarjun
8 ವರ್ಷ ನಾಪತ್ತೆಯಾಗಿದ್ದ ದರ್ಶನ್‌ ಮಾಜಿ ಮ್ಯಾನೇಜರ್‌ ದಿಢೀರ್‌ ಪ್ರತ್ಯಕ್ಷ – ನಡೆದಿದ್ದೇನು ಅಂತ ಎಳೆಎಳೆಯಾಗಿ ಬಿಚ್ಚಿಟ್ಟ ಮಲ್ಲಿ
Bengaluru City Cinema Latest Main Post Sandalwood
Udupi Rishab Shetty Home Bhajane Kunitha Yakshagana Harake
ನಟ ರಿಷಬ್ ಶೆಟ್ಟಿ ಮನೆಯಲ್ಲಿ ಕುಣಿತ ಭಜನೆ, ಯಕ್ಷಗಾನ ಹರಕೆ ಪ್ರದರ್ಶನ
Cinema Districts Karnataka Latest Sandalwood Top Stories Udupi

You Might Also Like

ice cream shop
Bellary

ಗೃಹಲಕ್ಷ್ಮಿ ಹಣ ಕೂಡಿಟ್ಟು ಐಸ್‌ಕ್ರೀಮ್ ಅಂಗಡಿ ತೆರೆದ ಮಹಿಳೆ

Public TV
By Public TV
51 seconds ago
donald trump iran parliament speaker
Latest

ಅಮೆರಿಕ ನೌಕಾ ದಿಗ್ಬಂಧನ ತೆಗೆಯದಿದ್ರೆ, ಹಾರ್ಮುಜ್‌ ಜಲಸಂಧಿಯನ್ನ ಮತ್ತೆ ಮುಚ್ಚುತ್ತೇವೆ: ಇರಾನ್‌ ವಾರ್ನಿಂಗ್‌

Public TV
By Public TV
20 minutes ago
Vachananand Shri 1
Davanagere

ಹರಿಹರ ಪಂಚಮಸಾಲಿ ಪೀಠದ ವಿವಾದ – ವಚನಾನಂದ ಶ್ರೀ ಮೇಲೆ ಪೋಕ್ಸೋ ಕೇಸ್ ತೂಗುಗತ್ತಿ

Public TV
By Public TV
33 minutes ago
shivangi cheetah
Bengaluru Rural

ಮಧ್ಯರಾತ್ರಿ ಆಫ್ರಿಕಾದಿಂದ ಬೆಂಗಳೂರಿಗೆ ಬಂದ ಹೊಸ ಅತಿಥಿಗಳು – ಬನ್ನೇರುಘಟ್ಟ ಮೃಗಾಲಯಕ್ಕೆ ಗಂಡು, ಹೆಣ್ಣು ಚೀತಾ

Public TV
By Public TV
1 hour ago
RCB Green Jersey
Bengaluru City

ಡೆಲ್ಲಿ ವಿರುದ್ಧ ಹಸಿರು ಜೆರ್ಸಿಯಲ್ಲಿ ಕಣಕ್ಕಿಳಿಯಲಿದೆ RCB

Public TV
By Public TV
1 hour ago
daily horoscope dina bhavishya
Astrology

ದಿನ ಭವಿಷ್ಯ 18-04-2026

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?