ಬೆಂಗಳೂರು: ನಟ ಪುನೀತ್ ರಾಜ್ಕುಮಾರ್ ಅವರ 11ನೇ ದಿನದ ಪುಣ್ಯಾರಾಧನೆ ಅರಮನೆ ಮೈದಾನದಲ್ಲಿ ನಡೆಯುತ್ತದೆ ಎನ್ನುವ ವದಂತಿಗೆ ತೆರೆ ಬಿದ್ದಿದೆ. ಪುನೀತ್ ಪುಣ್ಯಾರಾಧನೆ ಕಾರ್ಯ ಮನೆಯಲ್ಲೇ ನಡೆಯುತ್ತದೆ ಎಂದು ಕುಟುಂಬಸ್ಥರು ಸ್ಪಷ್ಟಪಡಿಸಿದ್ದಾರೆ.
ಪುಣ್ಯಾರಾಧನೆ ದಿನ ಪುನೀತ್ ಅವರ ಸಮಾಧಿಗೆ ತೆರಳಿ ಪೂಜೆ ಸಲ್ಲಿಸುತ್ತೇವೆ. ಇಷ್ಟದ ಖಾದ್ಯವನ್ನು ಎಡೆ ಇಡುತ್ತೇವೆ. ಬಳಿಕೆ ಮನೆಗೆ ವಾಪಸ್ಸಾಗಿ ಬಂಧುಗಳು, ಸಂಬಂಧಿಕರಿಗೆ ಅನ್ನ ಸಂತರ್ಪಣೆ ಮಾಡಲಾಗುವುದು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಪುನೀತ್ ಭೇಟಿಯಾಗುವ ಸೌಭಾಗ್ಯ ನನಗೆ ಸಿಕ್ಕಿಲ್ಲ: ವಿಜಯ್ ಸೇತುಪತಿ
ಇದು ಖಾಸಗಿಯಾಗಿ ನಡೆಯುವ ಕಾರ್ಯವಾಗಿದೆ. ಹೀಗಾಗಿ 11 ನೇ ದಿನದ ಪುಣ್ಯ ಆರಾಧನೆ ಮನೆಯಲ್ಲಿ ಜರುಗುತ್ತದೆ. ಬದಲಾವಣೆಗಳಿದ್ದಲ್ಲಿ ನಾವೇ ತಿಳಿಸುತ್ತೇವೆ. ಅಭಿಮಾನಿಗಳಲ್ಲಿ ಸುಳ್ಳು ವದಂತಿಗಳು ಹಬ್ಬಬಾರದು ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಇದನ್ನೂ ಓದಿ: ದೇವಸ್ಥಾನದ ಆವರಣದಲ್ಲಿ ಚಪ್ಪಲಿ ಧರಿಸಿ ವಿಕೃತಿ ಮೆರೆದಿದ್ದ ಪುಂಡರು ಅರೆಸ್ಟ್
ನಟ ಪುನೀತ್ ರಾಜ್ಕುಮಾರ್ ಅವರು ಹೃದಯ ಸ್ತಂಭನದಿಂದಾಗಿ ಅ.29ರಂದು ವಿಕ್ರಂ ಆಸ್ಪತ್ರೆಯಲ್ಲಿ ನಿಧನರಾದರು.