ಬೆಂಗಳೂರು: ಇಂದು ಪಬ್ಲಿಕ್ ಟಿವಿಯಲ್ಲಿ ಪ್ರಸಾರವಾದ ‘ಕಾಮಿಡಿಗೆ ಅಣ್ಣ ಜಗ್ಗಣ್ಣ’ ಕಾರ್ಯಕ್ರಮ ನೋಡಿದ ನವರಸನ ನಾಯಕ, ಕಿಲಾಡಿಗಳ ಕಿಲಾಡಿ ಜಗ್ಗೇಶ್ ಸವಿ ನೆನಪನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ.
ಜನರನ್ನು ನಗೆ ಗಡಲಿನಲ್ಲಿ ತೇಲುವಂತೆ ಮಾಡಲು ಪಬ್ಲಿಕ್ ಟಿವಿ ಇಂದು ಮಧ್ಯಾಹ್ನ ನವರಸನಾಯಕ ಅಭಿನಯಿಸಿದ ಸಿನಿಮಾದ ಆಯ್ದ ಕೆಲವು ಹಾಸ್ಯ ದೃಶ್ಯಗಳನ್ನು ಪ್ರಸಾರ ಮಾಡಿತ್ತು. ಕಾರ್ಯಕ್ರಮ ನೋಡುತ್ತಿದ್ದ ಜಗ್ಗೇಶ್ ಅವರ ಅಭಿಮಾನಿ, ಕಾಮಿಡಿಗೆ ಅಣ್ಣ ಜಗ್ಗಣ್ಣ, ಪ್ರೋಗ್ರಾಂ ನೋಡುತ್ತಾ ನಕ್ಕು, ನಕ್ಕು ಹೊಟ್ಟೆ ಹುಣ್ಣಾಗುತ್ತಿದೆ. ತಡೆಯಲು ಆಗುತ್ತಿಲ್ಲ ಎಂದು ಬರೆದುಕೊಂಡು ಟ್ವೀಟ್ ಮಾಡಿದ್ದರು.
ಇದು ನಾನು ಕಣ್ಣಾರೆ ಕಂಡದ್ದು ಸಿನಿಮಾದಲ್ಲಿ ಬಳಸಿದೆ!
ಹೀಗೆ ಮಾಡಿದವ ನಮ್ಮಶಾಲೆ ಹುಡುಗ!
ಆಗ ನಾನು 7ನೆ ಕ್ಲಾಸ್!ಅರವಿಂದ ಎನ್ನುವ ಸ್ನೇಹಿತನ ತಟ್ಟೆಯಲ್ಲಿ ವೇಣುಗೋಪಾಲ ಎನ್ನುವವ ಕದ್ದುತಿಂದ!ಆಗ ಅರವಿಂದ ಪೆದ್ದನಂತೆ ಅನ್ನ ಎಲ್ಲಿಹೋಯಿತು ನೋಡುತ್ತಿದ್ದ!ವೇಣು ಮಳ್ಳನಂತೆ ಕೂತಿದ್ದ!
ಇದೆ ಈ sceneಗೆ ಪ್ರೇರಣೆ..my favorite scene..enjoy… https://t.co/K962G4jB7N
— ನವರಸನಾಯಕ ಜಗ್ಗೇಶ್ (@Jaggesh2) March 28, 2020
ಈ ಟ್ವೀಟಿಗೆ ಪ್ರತಿಕ್ರಿಯಿಸಿರುವ ಕಾಳಿದಾಸ ಕನ್ನಡ ಮೇಷ್ಟ್ರು, ಇದು ನಾನು ಕಣ್ಣಾರೆ ಕಂಡ ದೃಶ್ಯವನ್ನು ಸಿನಿಮಾದಲ್ಲಿ ಬಳಸಿದೆ. ನಾನು ಏಳನೇ ತರಗತಿಯಲ್ಲಿ ಓದುತ್ತಿದ್ದಾಗ ಸ್ನೇಹಿತ ಅರವಿಂದ್ ತಟ್ಟೆಯಲ್ಲಿದ್ದ ಊಟವನ್ನು ವೇಣುಗೋಪಾಲ್ ಕದ್ದು ತಿನ್ನುತ್ತಿದ್ದನು. ಅರವಿಂದ್ ಪೆದ್ದನಂತೆ ನನ್ನ ಅನ್ನ ಎಲ್ಲಿ ಹೋಯ್ತು ಎಂದು ನೋಡುತ್ತಿದ್ದನು. ಇತ್ತ ವೇಣುಗೋಪಾಲ್ ತನಗೆ ಏನು ಗೊತ್ತೆ ಇಲ್ಲದಂತೆ ಮಳ್ಳನಂತೆ ಕುಳಿತಿರುತ್ತಿದ್ದನು. ಬಾಲ್ಯದ ದಿನಗಳನ್ನೇ ಪ್ರೇರಣೆಯಾಗಿ ಚಿತ್ರದಲ್ಲಿ ಬಳಸಿಕೊಳ್ಳಲಾಗಿತ್ತು.
On spot created scene by me!
20ನಿಮಿಷದಲ್ಲಿ ಯೋಚಿಸಿ ಚಿತ್ರಿಸಿದ ದೃಶ್ಯ!
ಅದೆ ರೀತಿ ನಾನು ಯೋಚಿಸಿ ಬರೆದು ನಟಿಸಿದ ದಶ್ಯ ವಿಧಾನಸೌಧದವರೆಗು ಹೋದದ್ದು #ಭೌಭೌಬಿರಿಯಾನಿ #ಯಾರದೋದುಡ್ಡುಎಲ್ಲಮನಜಾತ್ರೆ https://t.co/PfkW7OuaAc
— ನವರಸನಾಯಕ ಜಗ್ಗೇಶ್ (@Jaggesh2) March 28, 2020
ಮತ್ತೋರ್ವ ಅಭಿಮಾನಿ ಸರ್ವರ್ ಸೋಮಣ್ಣ ಚಿತ್ರದ ದೃಶ್ಯದ ಫೋಟೋ ಟ್ವಿಟ್ಟರ್ ನಲ್ಲಿ ಹಂಚಿಕೊಂಡು, ಸದ್ಯ ನಾನು ನಂಬರ್ ಒನ್ ಪ್ರೋಗ್ರಾಂ ನೋಡುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ.