ನಾಳೆ ವಿದ್ಯಾಪೀಠಕ್ಕೆ ಚಾಲನೆ – ಯಾರೆಲ್ಲ ಭಾಗವಹಿಸುತ್ತಿದ್ದಾರೆ?

Public TV
3 Min Read
Vidhyapeetha 2022

ಬೆಂಗಳೂರು: ಪಬ್ಲಿಕ್‌ ಟಿವಿ ಆಯೋಜಿಸುತ್ತಿರುವ 5ನೇ ವರ್ಷದ ಮೆಗಾ ಶೈಕ್ಷಣಿಕ ಉತ್ಸವ ʼವಿದ್ಯಾಪೀಠʼಕ್ಕೆ ನಾಳೆ ಚಾಲನೆ ಸಿಗಲಿದೆ. ಮೂರು ದಿನಗಳ ಕಾಲ ನಡೆಯಲಿರುವ ವಿದ್ಯಾಪೀಠದಲ್ಲಿ ತಜ್ಞರ ಉಪನ್ಯಾಸ, ಸಂವಾದವನ್ನು ಸಹ ಆಯೋಜಿಸಲಾಗಿದೆ.

ಯಾರೆಲ್ಲ ಭಾಗವಹಿಸುತ್ತಾರೆ?
ಅನಿಮೇಷನ್, ಮೀಡಿಯಾ ಮತ್ತು ಗೇಮಿಂಗ್, ಆರ್ಕಿಟೆಕ್ಚರ್, ಕಾಮರ್ಸ್ ಮತ್ತು ಬ್ಯಾಂಕಿಂಗ್ ಸಂಸ್ಥೆಗಳು, ಎಂಜಿನಿಯರಿಂಗ್ ಮತ್ತು ಮೆಡಿಕಲ್ ಕಾಲೇಜ್‍ಗಳು, ಫ್ಯಾಷನ್ ಮತ್ತು ಹೋಟೆಲ್ ಮ್ಯಾನೇಜ್‍ಮೆಂಟ್, ಕಾನೂನು ವಿಶ್ವವಿದ್ಯಾಲಯಗಳು ಮತ್ತು ಕಾಲೇಜ್‍ಗಳು, ಸಮೂಹ ಸಂವಹನ, ಎಂಬಿಎ ಇನ್‍ಸ್ಟಿಟ್ಯೂಷನ್, ವಿದೇಶದಲ್ಲಿರುವ ಶಿಕ್ಷಣ ಸಂಸ್ಥೆಗಳು.

Vidhyapeetha 2022 program

ಯಾರೆಲ್ಲ ಆಗಮಿಸಬಹುದು?
ಕೌನ್ಸೆಲರ್‍ಗಳು, ಶಿಕ್ಷಣ ತಜ್ಞರು, ಹಣಕಾಸು ಸಲಹೆಗಾರರು, ಪೋಷಕರು, ಪಿಯುಸಿ ವಿದ್ಯಾರ್ಥಿಗಳು, ಪದವಿ ಓದುತ್ತಿರುವ ವಿದ್ಯಾರ್ಥಿಗಳು, ಉದ್ಯೋಗದಲ್ಲಿರುವ ಉದ್ಯೋಗಿಗಳು.

ದಿನಾಂಕ: ಜೂನ್ 24, 25, 26
ಸ್ಥಳ: ಗೇಟ್‌ ನಂಬರ್‌ 4, ಗಾಯತ್ರಿ ವಿಹಾರ್, ಅರಮನೆ ಮೈದಾನ, ಬೆಂಗಳೂರು
ಸಮಯ: ಬೆಳಗ್ಗೆ 10 ರಿಂದ ಸಂಜೆ 7 ಗಂಟೆಯವರೆಗೆ

ಸಂಪರ್ಕಿಸಿ: ಪ್ರಭು 99000 60811, ಶಿವಕುಮಾರ್ 99000 60813

Vidhyapeetha

ಯಾವ ದಿನ ಏನು ಕಾರ್ಯಕ್ರಮ?
ಜೂನ್‌ 24
ಬೆಳಗ್ಗೆ 9:50ಕ್ಕೆ ಕಾರ್ಯಕ್ರಮ ಉದ್ಘಾಟನೆಯಾಗಲಿದೆ. ಈ ವೇಳೆ ಪಬ್ಲಿಕ್‌ ಟಿವಿ ಮುಖ್ಯಸ್ಥರಾದ ಎಚ್‌ಆರ್‌ ರಂಗನಾಥ್‌, ಗಾರ್ಡನ್‌ ಸಿಟಿ ವಿಶ್ವವಿದ್ಯಾಲಯದ ಡಾ.ವಿ.ಜಿ. ಜೋಸೆಫ್‌, ರೇವಾ ವಿಶ್ವವಿದ್ಯಾಲಯದ ಕುಲಪತಿ ಶ್ಯಾಮರಾಜು, ಕೇಂಬ್ರಿಡ್ಜ್‌ ಗ್ರೂಪ್‌ ಆಫ್‌ ಇನ್‌ಸ್ಟಿಟ್ಯೂಟ್‌ ಅಧ್ಯಕ್ಷ ಡಿಕೆ ಮೋಹನ್‌ ಉಪಸ್ಥಿತರಿಲಿದ್ದಾರೆ.

ಮಧ್ಯಾಹ್ನ 12 ರಿಂದ 1 ಗಂಟೆಯವರೆಗೆ “ಮೌಲ್ಯ ಆಧಾರಿತ ಶಿಕ್ಷಣದ ಮೂಲಕ ವಿಶ್ವಾಸವನ್ನು ಬೆಳೆಸಿಕೊಳ್ಳಿ” ವಿಷಯದ ಬಗ್ಗೆ ಅಕಾಡೆಮಿ ಆಫ್ ಕ್ರಿಯೇಟಿವ್ ಟೀಚಿಂಗ್ ನಿರ್ದೇಶಕ ಡಾ. ಗುರುರಾಜ ಕರಜಗಿ ಮಾತನಾಡಲಿದ್ದಾರೆ.

ಮಧ್ಯಾಹ್ನ 2 ರಿಂದ 4ರವರೆಗೆ ಐಎಎಸ್‌ ಅಭ್ಯರ್ಥಿಗಳಾದ ರಾಜೇಶ್ ಪೊನ್ನಪ್ಪ ಮತ್ತು ಅರುಣಾ ಸ್ಫೂರ್ತಿದಾಯಕ ಮಾತುಗಳನ್ನು ಆಡಲಿದ್ದಾರೆ. ಸಂಜೆ 5 ಗಂಟೆಯಿಂದ “ಭಾವನಾತ್ಮಕ ಬಂಧದ ಪ್ರಾಮುಖ್ಯತೆ ಮತ್ತು ಪೋಷಕತ್ವ”ದ ಬಗ್ಗೆ ಕ್ಲಿನಿಕಲ್ ಸೈಕಾಲಜಿಸ್ಟ್ ಹರ್ಷಿತಾ ನರೇಂದ್ರ ಮಾತನಾಡಲಿದ್ದಾರೆ.

VIDYAPEETA 2022 1

ಜೂನ್‌ 25
ಬೆಳಗ್ಗೆ 10:30ರಿಂದ 11:30ರವರೆಗೆ “ಭಾರತ ಶಿಕ್ಷಣದ ತಾಣ – ಕರ್ನಾಟಕ ಅವಕಾಶಗಳ ಬೀಡು” ವಿಷಯದ ಬಗ್ಗೆ ಉನ್ನತ ಶಿಕ್ಷಣ ಸಚಿವ ಅಶ್ವಥ್‌ ನಾರಾಯಣ ಭಾಷಣ ಮಾಡಲಿದ್ದಾರೆ.

ಬೆಳಗ್ಗೆ 11:30ರಿಂದ 12:30ರವರೆಗೆ “ಸಿಇಟಿ- ಕಾಮೆಡ್‌ಕೆ ಪರೀಕ್ಷೆಯಲ್ಲಿ ಆಯ್ಕೆ ಸರಿ ಇರಲಿ” ವಿಷಯದ ಬಗ್ಗೆ ರಮ್ಯಾ ಮತ್ತು ಡಾ. ಎಸ್‌ ಕುಮಾರ್‌ ಮಾತನಾಡಲಿದ್ದಾರೆ.

ಮಧ್ಯಾಹ್ನ 2:30ರಿಂದ ಸಂಜೆ 4 ಗಂಟೆಯವರೆಗೆ “ಸ್ಟಾರ್ಟ್‌ಅಪ್‌ಗಳು ಮತ್ತು ಉದ್ಯಮಶೀಲತೆ” ವಿಷಯದ ಬಗ್ಗೆ ಯುವಾ ಬ್ರಿಗೇಡ್ ಸಂಸ್ಥಾಪಕ, ಲೇಖಕ ಚಕ್ರವರ್ತಿ ಸೂಲಿಬೆಲೆ ಅವರು ಪ್ಯಾನಲ್‌ ಡಿಸ್ಕಷನ್‌ನಲ್ಲಿ ಭಾಗಿಯಾಗಲಿದ್ದಾರೆ.

ಸಂಜೆ 4 ರಿಂದ 5 ಗಂಟೆಯವರೆಗೆ “ಪ್ಯಾಶನ್ ಆಧಾರಿತ ವೃತ್ತಿ Vs ಉದ್ದೇಶ ಆಧಾರಿತ ವೃತ್ತಿ” ವಿಷಯದ ಬಗ್ಗೆ ಎರಡು ಬಾರಿ ಗ್ರ್ಯಾಮಿ ಪ್ರಶಸ್ತಿ ವಿಜೇತ ಸಂಗೀತ ಸಂಯೋಜಕ ರಿಕಿ ಕೇಜ್‌ ಮಾತನಾಡಲಿದ್ದಾರೆ.

ಜುಲೈ 26:
ಬೆಳಗ್ಗೆ 10:30 ರಿಂದ ಮಧ್ಯಾಹ್ನ 12 ಗಂಟೆಯವರೆಗೆ “ಸೂಪರ್ ಪವರ್ ಮೆಮೊರಿಯೊಂದಿಗೆ ನಿಮ್ಮ ವೃತ್ತಿ ಜೀವನವನ್ನು ವೇಗಗೊಳಿಸಿ” ವಿಷಯದ ಬಗ್ಗೆ ಕೈಬರಹ ಮತ್ತು ಜ್ಞಾಪಕ ಶಕ್ತಿ ತಜ್ಞ ಡಾ. ರಫಿ ಉಲ್ಲಾ ಬೇಗ್ ಭಾಷಣ ಮಾಡಲಿದ್ದಾರೆ.

ಮಧ್ಯಾಹ್ನ 12 ರಿಂದ 1 ಗಂಟೆಯವರೆಗೆ ಮೆಡಿಕಲ್‌ ಶಿಕ್ಷಣ ನಿರ್ದೇಶಕಿ ಡಾ. ಸುಜತಾ ರಥೋಡ್‌ ನೀಟ್‌ ಬಗ್ಗೆ ಉಪನ್ಯಾಸ ನೀಡಲಿದ್ದಾರೆ.

ಮಧ್ಯಾಹ್ನ 2:30 ರಿಂದ ಸಂಜೆ 4 ಗಂಟೆಯವರೆಗೆ ಮುಂದಿನ ಶಿಕ್ಷಣದ ಕುರಿತಾಗಿ ಶಿಕ್ಷಣ ತಜ್ಞರ ಜೊತೆ ಸಂವಾದ ಕಾರ್ಯಕ್ರಮ ನಡೆಯಲಿದೆ. ಈ ಸಂವಾದದಲ್ಲಿ ಗಾರ್ಡನ್‌ ಸಿಟಿ ಕಾಲೇಜಿನ ಕ್ರಿಸ್ಟೋ ಜೋಸೆಫ್, ಕೇಂಬ್ರಿಡ್ಜ್ ಐಟಿಯ ಅದ್ವಿತೀಯ ಯು ಕುಮಾರ್‌, ಮಾಹೆ ಬೆಂಗಳೂರಿನ ಡಾ. ವಿದ್ಯಾ ಶೆಟ್ಟಿ, ಈಸ್ಟ್ ಪಾಯಿಂಟ್ ಗ್ರೂಪ್ ಆಫ್ ಇನ್‌ಸ್ಟಿಟ್ಯೂಶನ್‌ನ ರಾಜೀವ್ ಗೌಡ, ಎಐಎಂಎಸ್‌ ಸಂಸ್ಥೆಯ ಪ್ರಿಯಾನಂದ ರೆಡ್ಡಿ ಭಾಗವಹಿಸಲಿದ್ದಾರೆ.

Live Tv

Share This Article
Leave a Comment

Leave a Reply

Your email address will not be published. Required fields are marked *