ಚಿಕ್ಕಬಳ್ಳಾಪುರ: ಜಿಲ್ಲಾಸ್ಪತ್ರೆ ಕಟ್ಟಡ ಕುಸಿತ ಆತಂಕ ಪ್ರಕರಣ ಸಂಬಂಧಪಟ್ಟಂತೆ ಪಬ್ಲಿಕ್ ಟಿವಿ ವರದಿಯಿಂದ ಆರೋಗ್ಯ ಇಲಾಖೆ ಎಚ್ಚೆತ್ತುಕೊಂಡಿದ್ದು, ಇಂದು ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ಆರೋಗ್ಯ ಇಲಾಖೆಯ ಎಂಜಿನಿಯರಿಂಗ್ ವಿಭಾಗದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.
AEE ಶಿವಕುಮಾರ್ ನೇತೃತ್ವದ ಆರು ಮಂದಿ ಎಂಜಿನಯರ್ ಗಳ ತಂಡ ನೆಲಮಹಡಿಗೆ ಭೇಟಿ ನೀಡಿ ಪಿಲ್ಲರ್ ಗಳ ಪರಿಶೀಲನೆ ನಡೆಸಿತು. ಆಸ್ಪತ್ರೆಯ ನೆಲಮಹಡಿಯ ಪಿಲ್ಲರ್ ಗಳು ಹಾಗೂ ಗೋಡೆಗಳು ಸಂದುಗಳಿಂದ ಅಂರ್ತಜಲ ಹೆಚ್ಚಾಗಿ ನೀರು ಉಕ್ಕುತ್ತಿದ್ದು, ಡ್ರೈನೇಜ್ ಸಿಸ್ಟಂ ಸರಿಯಿಲ್ಲ. ಹೀಗಾಗಿ ಸಮಸ್ಯೆ ಆಗಿದ್ದು, ಸಮಸ್ಯೆಗೆ ತಾತ್ಕಾಲಿಕ ಪರಿಹಾರ ಎಂಬಂತೆ ತತ್ ಕ್ಷಣ ಎಂಬಂತೆ ಕ್ರಮಗಳನ್ನ ಕೈಗೊಳ್ಳಲಾಗುವುದು. ಇದನ್ನೂ ಓದಿ: ಚಿಕ್ಕಬಳ್ಳಾಪುರ ಆಸ್ಪತ್ರೆ ಕಟ್ಟಡಕ್ಕೆ ಕಾದಿದೆ ಬಹುದೊಡ್ಡ ಅಪಾಯ-ಉರುಳಲಿದೆಯಾ ಜಿಲ್ಲಾಸ್ಪತ್ರೆ..!
ಅಲ್ಲದೆ ಶಾಶ್ವತ ಪರಿಹಾರಕ್ಕಾಗಿ ಇಲಾಖೆಗೆ ಹಣದ ಅನುಮೋದನೆಗಾಗಿ ಪತ್ರ ರವಾನೆ ಮಾಡಿದ್ದು, ಅದಷ್ಟು ಬೇಗ ಶಾಶ್ವತ ಪರಿಹಾರ ಕಾರ್ಯ ಮಾಡುವುದಾಗಿ ಎಇಇ ಶಿವಕುಮಾರ್ ತಿಳಿಸಿದ್ದಾರೆ. ಇದೇ ವೇಳೆ ಅಸ್ಪತ್ರೆಯ ನಿವಾಸಿ ವೈದ್ಯಾಧಿಕಾರಿ ರಮೇಶ್ ಮಾತನಾಡಿ, ಸಮಸ್ಯೆ ಬಗ್ಗೆ ಗಮನ ಹರಿಸಿದ್ದು ಆದಷ್ಟು ಬೇಗ ಬಗೆಹರಿಸುವ ಭರವಸೆ ನೀಡಿದ್ರು.