ದಾವಣಗೆರೆ: ತಂದೆ ತಾಯಿಯಲ್ಲದೇ ದೊಡ್ಡಮ್ಮನ ಆಶ್ರಯದಲ್ಲಿ ಬೆಳೆಯುತ್ತಿದ್ದ ಅನಾಥ ಬಾಲಕನಿಗೆ ಶಿಕ್ಷಣ ಸಿಗದೇ ಪರದಾಡುತ್ತಿರುವ ಕುರಿತು ಪಬ್ಲಿಕ್ ಟಿವಿ ವರದಿ (PUBLiC TV Report) ಮಾಡಿತ್ತು. ವರದಿ ಬೆನ್ನಲ್ಲೇ ಶಿಕ್ಷಣ ಇಲಾಖೆ ಅಧಿಕಾರಿಗಳು (Education Department) ಎಚ್ಚೆತ್ತಿದ್ದಾರೆ. ಸದ್ಯ ಅನಾಥ ಬಾಲಕನಿಗೆ ಶಿಕ್ಷಣ ಭಾಗ್ಯ ದೊರೆತಿದೆ.
ಆ ಬಾಲಕ ಆರು ತಿಂಗಳು ಇರುವಾಗಲೇ ತಾಯಿಯನ್ನು ಕಳೆದುಕೊಂಡಿದ್ದ. ಹೆಂಡತಿಯನ್ನು ಕೊಂದು ಆ ಬಾಲಕನ ತಂದೆ ಜೈಲು ಸೇರಿದ್ದ. ಅನಾಥವಾಗಿದ್ದ ಬಾಲಕನು ದೊಡ್ಡಮ್ಮನ ಆಶ್ರಯದಲ್ಲಿ ಬೆಳೆಯುತ್ತಿದ್ದ. ಶಾಲೆಗೆ ಸೇರಿಸಲು ಹೋದಾಗ ಶಾಲಾ ಮುಖ್ಯ ಶಿಕ್ಷಕಿ ಆತನನ್ನು ಶಾಲೆಗೆ ಸೇರಿಸಿಕೊಳ್ಳದೇ ಸತಾಯಿಸುತ್ತಿದ್ದರು. ಈ ಸಮಯದಲ್ಲಿ ಈ ಕುರಿತು ಪಬ್ಲಿಕ್ ಟಿವಿ ವರದಿಯೊಂದನ್ನು ಬಿತ್ತರಿಸಿತ್ತು. ಇದರ ಬೆನ್ನಲ್ಲೇ ಅನಾಥ ಬಾಲಕನಿಗೆ ಶಾಲೆಯ ಪ್ರವೇಶಾತಿ ಸಿಗುವುದರ ಜೊತೆಗೆ ವಿದ್ಯಾಭ್ಯಾಸ ಕೂಡ ಸಿಕ್ಕಿದೆ.ಇದನ್ನೂ ಓದಿ: 5 ಲಕ್ಷ ಪಾವತಿಸಿ ಇಲ್ಲವೇ ದುರ್ಗಾ ಪೂಜೆ ಆಚರಿಸಬೇಡಿ: ಬಾಂಗ್ಲಾ ಹಿಂದೂ ದೇವಾಲಯಗಳಿಗೆ ಬೆದರಿಕೆ
ದಾವಣಗೆರೆಯ (Davanagere) ಶಾಮನೂರು ಹೊಸ ಬಡಾವಣೆಯಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಈ ಸನ್ನಿವೇಶ ಕಂಡು ಬಂದಿದೆ. ಕಳೆದ ಎರಡು ದಿನಗಳ ಹಿಂದೆ ಶಾಲೆಗೆ ಸೇರಿಸಿಕೊಳ್ಳದೇ ಇದ್ದಿದ್ದಕ್ಕೆ ಶಾಲೆಯ ಹೊರಗೆ ಕೂತಿದ್ದ ಬಾಲಕ ಇಂದು ಶಾಲೆಯಲ್ಲಿ ಕೂತು ಪಾಠ ಕೇಳುತ್ತಿದ್ದಾನೆ. ಇದಕ್ಕೆ ಪಬ್ಲಿಕ್ ಟಿವಿಯ ವರದಿಯೇ ಕಾರಣ. ಅಕ್ಷಯ್ ಎನ್ನುವ ಬಾಲಕನಿಗೆ ಶಾಲೆಗೆ ಸೇರಿಸಿಕೊಳ್ಳದೇ ಶಾಲಾ ಮುಖ್ಯ ಶಿಕ್ಷಕರು ಸತಾಯಿಸುತ್ತಿದ್ದರು. ಇದಕ್ಕೆ ಕಾರಣ ಅಕ್ಷಯ್ ತಾಯಿಯನ್ನು ಆತನ ತಂದೆ ಕೊಲೆ ಮಾಡಿ ಜೈಲು ಸೇರಿದ್ದ.
ಅನಾಥವಾಗಿದ್ದ ಆ ಬಾಲಕನನ್ನು ದೊಡ್ಡಮ್ಮ ರೂಪ ತನ್ನ ಮಕ್ಕಳಂತೆ ಸಾಕುತ್ತಿದ್ದಳು. ಶಾಲೆಗೆ ಸೇರಿಸಲು ಹೋದಾಗ ತಂದೆ ತಾಯಿಯ ಆಧಾರ್ ಕಾರ್ಡ್ ಬೇಕು ಇಲ್ಲವಾದ್ರೆ ಸೇರಿಸಿಕೊಳ್ಳೋದಿಲ್ಲ ಎಂದು ಸತಾಯಿಸಿದ್ದರು. ಇದರಿಂದ ದಿಕ್ಕು ತೋಚದ ಸ್ಥಿತಿಯಲ್ಲಿ ಕುಟುಂಬವಿದ್ದು, ಆ ಕುಟುಂಬದ ನೆರವಿಗೆ ಪಬ್ಲಿಕ್ ಟಿವಿ ನಿಂತಿದೆ. ಕೂಡಲೇ ಶಿಕ್ಷಣ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದಿದ್ದೇ ತಡ ಆ ಬಾಲಕನನ್ನು ಒಂದನೇ ತರಗತಿಗೆ ದಾಖಲು ಮಾಡಿಕೊಂಡು ವಿದ್ಯಾಭ್ಯಾಸ ಕೊಡಿಸುತ್ತಿದ್ದಾರೆ. ಇದರಿಂದ ಸ್ಥಳೀಯರು ಪಬ್ಲಿಕ್ ಟಿವಿಗೆ ಧನ್ಯವಾದ ತಿಳಿಸಿದರು.
ಇನ್ನು ಯಾವಾಗ ಬಾಲಕನ ಸಮಸ್ಯೆ ಬಗ್ಗೆ ಪಬ್ಲಿಕ್ ಟಿವಿ ವರದಿ ಬಿತ್ತರವಾಯ್ತೋ ಕೂಡಲೇ ಎಚ್ಚೆತ್ತ ಅಧಿಕಾರಿಗಳು, ಅದರಲ್ಲೂ ದಕ್ಷಿಣ ಕ್ಷೇತ್ರ ವಲಯದ ಬಿಇಒ ಪುಷ್ಪಲತಾ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಾಲಕನನ್ನು ಶಾಲೆಗೆ ಸೇರಿಸಿಕೊಂಡಿದ್ದಾರೆ. ಅಲ್ಲದೆ ಶಿಕ್ಷಣ ಇಲಾಖೆಯ ವರದಿಯಲ್ಲಿ ಕೂಡ ಪಬ್ಲಿಕ್ ಟಿವಿ ಬಿತ್ತರಿಸಿದ ಸುದ್ದಿಯ ಬಗ್ಗೆ ಕೂಡ ಉಲ್ಲೇಖವಾಗಿದೆ. ಇದರಿಂದ ಬಿಇಒ ಪುಷ್ಪಲತ ಆ ಬಾಲಕನಿಗೆ ಧೈರ್ಯ ಹೇಳುವ ಮೂಲಕ ಶಾಲೆಗೆ ಸೇರಿಸಿಕೊಂಡಿದ್ದಾರೆ. ಈಗ ಬಾಲಕ ತರಗತಿಯಲ್ಲಿ ಕೂತು ಮಕ್ಕಳ ಜೊತೆ ವಿದ್ಯಾಭ್ಯಾಸ ಕಲಿಯುವಂತಾಗಿದೆ. ಇನ್ನು ಇದಕ್ಕೆ ಸಹಕಾರಿಯಾದ ಪಬ್ಲಿಕ್ ಟಿವಿಗೆ ಬಾಲಕನ ಕುಟುಂಬಸ್ಥರು ಧನ್ಯವಾದ ತಿಳಿಸಿದ್ದಾರೆ.ಇದನ್ನೂ ಓದಿ: ಯಾದಗಿರಿಯಲ್ಲಿ ಗುಡುಗು ಸಹಿತ ಬಾರಿ ಮಳೆ : ಸಿಡಿಲು ಬಡಿದು ನಾಲ್ವರು ಸಾವು