Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Latest

ವಿದೇಶಕ್ಕೆ ಪ್ರಯಾಣಿಸುವಾಗ ವಿಮಾನದಲ್ಲಿ ಎಷ್ಟು ಚಿನ್ನ, ನಗದು ಕೊಂಡೊಯ್ಯಬಹುದು? ಭಾರತದ ಕಸ್ಟಮ್ಸ್ ನಿಯಮಗಳೇನು?

Public TV
Last updated: March 17, 2025 2:19 pm
Public TV
Share
3 Min Read
Indian Customs
SHARE

ಸಾಮಾನ್ಯವಾಗಿ ವಿಮಾನದಲ್ಲಿ ಪ್ರಯಾಣಿಸುವಾಗ ಇಂತಿಷ್ಟು ಮೌಲ್ಯದ ಹಣ, ಚಿನ್ನ ಕೊಂಡೊಯ್ಯಬೇಕು ಎನ್ನುವ ನಿಯಮವಿರುತ್ತದೆ. ಆದರೆ ಇತ್ತೀಚಿಗಷ್ಟೇ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಟಿ ರನ್ಯಾ ರಾವ್‌ ಚಿನ್ನದ ಕಳ್ಳಸಾಗಣೆ ಕೇಸ್‌ನಲ್ಲಿ ಬಂಧಿಸಲ್ಪಟ್ಟರು. ಈ ಸಮಯದಲ್ಲಿ ಗ್ರೀನ್‌ ಚಾನೆಲ್‌ನಲ್ಲಿ ಬರಲು ಯತ್ನಿಸುತ್ತಿದ್ದ ರನ್ಯಾಳನ್ನು ಡಿಆರ್‌ಐ ಅಧಿಕಾರಿಗಳು ಬಂಧಿಸಿ, ಭಾರೀ ಮೊತ್ತದ ಚಿನ್ನವನ್ನು ವಶಕ್ಕೆ ಪಡೆದರು. ಹಾಗಾದರೆ ವಿಮಾನದಲ್ಲಿ ಪ್ರಯಾಣಿಸುವಾಗ ಎಷ್ಟು ಚಿನ್ನ, ನಗದು ಕೊಂಡೊಯ್ಯಬಹುದು ಹಾಗೂ ಭಾರತದ ಕಸ್ಟಮ್ಸ್ ನಿಯಮಗಳೇನು ಎನ್ನುವ ಸಂಪೂರ್ಣ ಮಾಹಿತಿ ಇಲ್ಲಿದೆ.

ಭಾರತೀಯ ಕಸ್ಟಮ್ಸ್‌ ಎಂದರೇನು?
ದೇಶದಿಂದ ವಿದೇಶಕ್ಕೆ ಹಾಗೂ ವಿದೇಶದಿಂದ ದೇಶಕ್ಕೆ ಸರಕುಗಳ ಆಮದು ಮತ್ತು ರಫ್ತಿಗೆ ವಿಧಿಸುವ ತೆರಿಗೆ ಇದು. ಸರ್ಕಾರವು ಈ ಕಸ್ಟಮ್ಸ್ ಸುಂಕವನ್ನು ತನ್ನ ಆದಾಯವನ್ನು ಹೆಚ್ಚಿಸಲು, ದೇಶೀಯ ಕೈಗಾರಿಕೆಗಳನ್ನು ರಕ್ಷಿಸಲು ಮತ್ತು ಸರಕುಗಳ ಚಲನೆಯನ್ನು ನಿಯಂತ್ರಿಸಲು ಬಳಸುತ್ತದೆ.

gold
ಸಾಂದರ್ಭಿಕ ಚಿತ್ರ

ಕಸ್ಟಮ್ಸ್ ಕಾಯ್ದೆ
ದೇಶದಿಂದ ವಿದೇಶಕ್ಕೆ ಹಾಗೂ ವಿದೇಶದಿಂದ ದೇಶಕ್ಕೆ ಸರಕುಗಳ ಚಲನೆಯನ್ನು ನಿಯಂತ್ರಿಸುವ ನಿರ್ಣಾಯಕ ಕಾನೂನಾಗಿ ಕಾರ್ಯನಿರ್ವಹಿಸುವ ಕಸ್ಟಮ್ಸ್ ಕಾಯ್ದೆ 1962ರಲ್ಲಿ  ಭಾರತದಲ್ಲಿ ಜಾರಿಯಾಯಿತು. 17 ಅಧ್ಯಾಯಗಳಾಗಿ ವಿಂಗಡಿಸಲಾದ ಈ ಕಾಯ್ದೆಯು ಆಮದು ಸುಂಕ, ರಫ್ತು ನಿರ್ಬಂಧ ಮತ್ತು ನಿಯಮ ಉಲ್ಲಂಘನೆಗಳಿಗೆ ದಂಡ ಸೇರಿದಂತೆ ವಿವಿಧ ಕಸ್ಟಮ್ಸ್ ನಿಯಮಗಳನ್ನು ಒಳಗೊಂಡಿದೆ. ಕಾನೂನುಬದ್ಧ ವ್ಯಾಪಾರ ಕಾರ್ಯಾಚರಣೆಗಳನ್ನು ಸುಗಮಗೊಳಿಸುವುದು ಮತ್ತು ಕಳ್ಳಸಾಗಣೆ ಮುಂತಾದ ಕಾನೂನುಬಾಹಿರ ಚಟುವಟಿಕೆಗಳನ್ನು ನಿಯಂತ್ರಿಸುವುದು ಇದರ ಪ್ರಾಥಮಿಕ ಉದ್ದೇಶವಾಗಿದೆ.

ಭಾರತೀಯ ಕಸ್ಟಮ್ಸ್‌ ನಿಯಮಗಳ ಪ್ರಕಾರ, 1967ರ ಪಾಸ್‌ಪೋರ್ಟ್ ಕಾಯ್ದೆಯಡಿಯಲ್ಲಿ, ಭಾರತೀಯ ಪ್ರಯಾಣಿಕರು 1 ಕೆಜಿ ಚಿನ್ನವನ್ನು ಕೊಂಡೊಯ್ಯಲು ಅನುಮತಿಸಲಾಗಿದೆ, ನಿರ್ದಿಷ್ಟ ತೆರಿಗೆಯೊಂದಿಗೆ ಪುರುಷರಿಗೆ 20 ಗ್ರಾಂ ಮತ್ತು ಮಹಿಳೆಯರಿಗೆ 40 ಗ್ರಾಂ ಅನುಮತಿಸಲಾಗಿದೆ. ಜೊತೆಗೆ ಮಕ್ಕಳು 20/40 ಗ್ರಾಂ ಚಿನ್ನವನ್ನು ತರಲು ಅವಕಾಶವಿದ್ದು, ಲಿಂಗದ ಆಧಾರದ ಮೇಲೆ ಮೌಲ್ಯದ ಮಿತಿ ರೂ. 50,000ರೂ ದಿಂದ 1,00,000ಕ್ಕೆ ಅನುಮತಿಸಿದೆ. ಭಾರತೀಯ ಪ್ರಯಾಣಿಕರು ಅಥವಾ ಕನಿಷ್ಠ ಆರು ತಿಂಗಳ ಕಾಲ ವಿದೇಶದಲ್ಲಿ ಉಳಿದು ಭಾರತಕ್ಕೆ ಮರಳುವ ಪಾಸ್‌ಪೋರ್ಟ್ ಹೊಂದಿರುವವರು ತಮ್ಮ ಸಾಮಾನುಗಳ ಪೈಕಿ ಚಿನ್ನವನ್ನು ಆಮದು ಮಾಡಿಕೊಳ್ಳಲು ಅನುಮತಿ ಇದೆ.

Money

ವಿಮಾನ ನಿಲ್ದಾಣದಲ್ಲಿ ಭಾರತೀಯ ಕಸ್ಟಮ್ಸ್‌ ಹೇಗೆ ಕಾರ್ಯನಿರ್ವಹಿಸುತ್ತದೆ?
ಎಲ್ಲಾ ಪ್ರಯಾಣಿಕರು ವಿಮಾನ ನಿಲ್ದಾಣದಿಂದ ಹೊರಬರಲು ಬರಲು ಕಸ್ಟಮ್ಸ್‌ ಅಧಿಕಾರಿಯಿಂದ ಕ್ಲಿಯರೆನ್ಸ್ ಪಡೆದುಕೊಳ್ಳಲೇಬೇಕು. ಕನ್ವೇಯರ್ ಬೆಲ್ಟ್‌ಗಳಿಂದ ತಮ್ಮ ವಸ್ತುಗಳನ್ನು ಮರಳಿ ಪಡೆದ ನಂತರ ಕಸ್ಟಮ್ಸ್ ತಪಾಸಣೆಗೆ ಒಳಗಾಗಬೇಕಾಗುತ್ತದೆ. ಹೌದು, ಇಲ್ಲಿ ಎರಡು ರೀತಿಯ ಕ್ಲಿಯರೆನ್ಸ್ ಚಾನೆಲ್‌ಗಳಿದ್ದು, ಗ್ರೀನ್ ಚಾನೆಲ್ ಮತ್ತು ರೆಡ್ ಚಾನೆಲ್ ಎಂದು ವಿಂಗಡಿಸಲಾಗಿದೆ. ತೆರಿಗೆ ಹಾಗೂ ನಿಷೇಧಿತ ವಸ್ತುಗಳನ್ನು ಹೊಂದಿರದವರಿಗೆ ಗ್ರೀನ್ ಚಾನೆಲ್ ಹಾಗೂ ತೆರಿಗೆ ಹಾಗೂ ನಿಷೇಧಿತ ವಸ್ತುಗಳನ್ನು ಹೊಂದಿರುವವರಿಗೆ ರೆಡ್ ಚಾನೆಲ್‌ನಲ್ಲಿ ಕ್ಲಿಯರೆನ್ಸ್ ನೀಡಲಾಗುತ್ತದೆ. ಪ್ರಯಾಣಿಕರು ಕ್ಲಿಯರೆನ್ಸ್ ಚಾನೆಲ್‌ಗೆ ಹೋಗುವ ಮುಂಚೆ ತಾವು ಯಾವ ಚಾನೆಲ್‌ಗೆ ಹೋಗಬೇಕು ಎಂದು ನಿರ್ಧರಿಸಬೇಕು. ಈ ಮೂಲಕ ತಾವು ಕೊಂಡೊಯ್ಯುತ್ತಿರುವ ಚಿನ್ನ ಅಥವಾ ನಗದು ಮೊತ್ತದ ಪ್ರಮಾಣವನ್ನು ತಿಳಿಸಬೇಕು. ಜೊತೆಗೆ ಚಿನ್ನದ ಖರೀದಿ ಬಿಲ್‌, ಇನ್ನಿತರ ದಾಖಲೆಗಳನ್ನು ಒದಗಿಸಬೇಕು. ಇಲ್ಲದೇ ಹೋದಲ್ಲಿ ಕಸ್ಟಮ್ಸ್ ಕಾಯ್ದೆ 1962ರ ಸೆಕ್ಷನ್ 111ರ ಅಡಿಯಲ್ಲಿ ಚಿನ್ನ ಅಥವಾ ನಗದನ್ನು ವಶಕ್ಕೆ ಪಡೆಯಬಹುದು.

ಇನ್ನೂ ಈ ಕುರಿತು ಹೆಚ್ಚಿನ ಮಾಹಿತಿಗಾಗಿ ATITHI ಮೊಬೈಲ್ ಅಪ್ಲಿಕೇಶನ್ ಬಳಸಿ, ವಿಮಾನದಲ್ಲಿ ಪ್ರಯಾಣಿಸುವ ಮೊದಲು ತೆರಿಗೆ ವಿಧಿಸಬಹುದಾದ ವಸ್ತುಗಳು ಮತ್ತು ಕರೆನ್ಸಿಯ ಬಗ್ಗೆ ಮಾಹಿತಿ ತಿಳಿದುಕೊಳ್ಳಬೇಕು. ವಿದೇಶಿ ಕರೆನ್ಸಿ ನೋಟುಗಳ ಮೌಲ್ಯವು US $5,000 ಮೀರಿದರೆ ಅಥವಾ ಕರೆನ್ಸಿ ಸೇರಿದಂತೆ ಒಟ್ಟು ವಿದೇಶಿ ವಿನಿಮಯವು US $10,000 ಮೀರಿದರೆ ಸಂಬಂಧಪಟ್ಟ ದಾಖಲಾತಿಗಳು ಅವಶ್ಯಕ. ಜೊತೆಗೆ ನಿಷೇಧಿತ ಅಥವಾ ತೆರಿಗೆ ವಿಧಿಸಬಹುದಾದ ವಸ್ತುಗಳನ್ನು ಹೊಂದಿದ್ದರೂ ಕೂಡ ಗ್ರೀನ್ ಚಾನೆಲ್ ಬಳಸುವ ಪ್ರಯಾಣಿಕರಿಗೆ ಕಾನೂನು ಕ್ರಮ, ದಂಡ ಅಥವಾ ವಸ್ತುಗಳನ್ನು ಜಪ್ತಿ ಮಾಡಿಕೊಳ್ಳಬಹುದು.

ಯಾವುದೇ ವ್ಯಕ್ತಿಗೆ ನಿರ್ದಿಷ್ಟ ಮಿತಿಯಿಲ್ಲದೆ ವಿದೇಶದಿಂದ ಭಾರತಕ್ಕೆ ಚಿನ್ನ ಅಥವಾ ನಗದನ್ನು ತರಲು ಅವಕಾಶವಿದೆ. ಆದರೆ ಈ ಕುರಿತು ಮೊದಲೇ ಮಾಹಿತಿ ನೀಡಬೇಕು. ಕಸ್ಟಮ್ಸ್ ಕಾಯ್ದೆಯ ಪ್ರಕಾರ, ಮಾಹಿತಿ ನೀಡದಿರುವುದು, ತಪ್ಪಾದ ಮಾಹಿತಿ ನೀಡುವುದು ಅಥವಾ ಕಳ್ಳ ಸಾಗಾಟ ಮಾಡುವುದರಿಂದ ವಸ್ತುಗಳನ್ನು ವಶಪಡಿಸಿಕೊಳ್ಳಲು ಅವಕಾಶವಿರುತ್ತದೆ. ಇನ್ನೂ ಗ್ರೀನ್ ಚಾನೆಲ್ ಮೂಲಕ ನಿಷೇಧಿತ ಅಥವಾ ತೆರಿಗೆ ವಿಧಿಸಬಹುದಾದ ವಸ್ತುಗಳನ್ನು ಕಳ್ಳಸಾಗಣೆ ಮಾಡಲು ಪ್ರಯತ್ನಿಸಿದರೇ ಅಥವಾ ರೆಡ್ ಚಾನೆಲ್‌ನಲ್ಲಿ ಸುಳ್ಳು ಅಥವಾ ತಪ್ಪು ಮಾಹಿತಿ ನೀಡಿದರೆ ಅಂತಹ ವ್ಯಕ್ತಿಗಳ ವಿರುದ್ಧ ಕಸ್ಟಮ್ಸ್‌ ಕಾನೂನು ಅಡಿಯಲ್ಲಿ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ

TAGGED:cashCustoms Regulations In IndiaCustoms RulesFlightsgoldindiaIndian Customs Act 1962ಕಸ್ಟಮ್ಸ್ ಕಾಯ್ದೆ 1962ಭಾರತೀಯ ಕಸ್ಟಮ್ಸ್‌
Share This Article
Facebook Whatsapp Whatsapp Telegram

Cinema Updates

Vijay Devarakonda
ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ವಿಜಯ್ ದೇವರಕೊಂಡ
Cinema Latest Top Stories
War 2 Hrithik Roshan Jr NTR
ವಾರ್-2 ಟ್ರೇಲರ್‌ ರಿಲೀಸ್‌ಗೆ ಮುಹೂರ್ತ ಫಿಕ್ಸ್
Bollywood Cinema South cinema
Ram Charan Peddi
ಪೆದ್ದಿ ಚಿತ್ರಕ್ಕಾಗಿ ದೇಹ ಹುರಿಗೊಳಿಸಿದ ರಾಮ್ ಚರಣ್ : ಮತ್ತೆ ಶೂಟಿಂಗ್ ಶುರು
Cinema Latest Top Stories
Bhargavi LLB Nandagokula Colors kannada Mahasangama Today 1
ಭಾರ್ಗವಿ LL.B, ನಂದಗೋಕುಲ ಮಹಾ ಸಂಗಮ: ಮನಮಿಡಿಯುವ ಕಥೆ
Cinema TV Shows
darshan and kapil sibal
ದರ್ಶನ್‌ ಕೇಸ್‌ – ಸುಪ್ರೀಂ ಕೋರ್ಟ್‌ಗೆ ಹಿರಿಯ ವಕೀಲ ಕಪಿಲ್ ಸಿಬಲ್ ಗೈರು
Bengaluru City Cinema Court Karnataka Latest Sandalwood States Top Stories

You Might Also Like

Mandya Egg Fight
Districts

ಮಂಡ್ಯದಲ್ಲಿ ಮೊಟ್ಟೆ ವಿವಾದ – ಮೊಟ್ಟೆ ಕೊಟ್ರೆ ಮಕ್ಕಳನ್ನ ಶಾಲೆಗೆ ಕಳ್ಸಲ್ಲ ಎಂದ ಪೋಷಕರು

Public TV
By Public TV
1 minute ago
milk sale bandh
Bengaluru City

ಇಂದು, ನಾಳೆ ಹಾಲು ಮಾರಾಟ ಬಂದ್ – ಟೀ, ಕಾಫಿ ಇಲ್ಲ.. ಓನ್ಲಿ ಲೆಮನ್, ಬ್ಲ್ಯಾಕ್ ಟೀ ಸಿಗುತ್ತೆ ಅಂತ ಬೋರ್ಡ್

Public TV
By Public TV
18 minutes ago
Gadag Road Accident
Crime

ಒಂದೇ ಬೈಕ್‌ನಲ್ಲಿ ನಾಲ್ವರು ಪ್ರಯಾಣ – ಓವರ್ ಸ್ಪೀಡ್‌ನಿಂದ ಡಿವೈಡರ್‌ಗೆ ಡಿಕ್ಕಿ; ಓರ್ವ ಸಾವು

Public TV
By Public TV
50 minutes ago
girl friend cute angry with lover
Latest

ಅವಳ ಮೂಗಿನ ತುದಿ ಕೋಪ ನಂಗಿಷ್ಟ!

Public TV
By Public TV
1 hour ago
WEATHER 1 e1679398614299
Bengaluru City

ರಾಜ್ಯದ ಹವಾಮಾನ ವರದಿ 23-07-2025

Public TV
By Public TV
2 hours ago
Dharmasthala Files 1
Dakshina Kannada

ಧರ್ಮಸ್ಥಳದಲ್ಲಿ ಶವಗಳ ಹೂತಿಟ್ಟ ಪ್ರಕರಣ – ಎಸ್‌ಐಟಿ ತಂಡಕ್ಕೆ ಹೆಚ್ಚುವರಿ 20 ಅಧಿಕಾರಿಗಳ ನೇಮಕ

Public TV
By Public TV
9 hours ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?