ಬಳ್ಳಾರಿ: ರಾಜ್ಯದಲ್ಲಿ ಎಷ್ಟೋ ಮಂದಿ ಎಲೆಮರೆ ಕಾಯಿಯಂತೆ ಕಲಾವಿದರಿದ್ದಾರೆ. ಈ ರೀತಿಯಿದ್ದ ನೂರಾರು ಕಲಾವಿದರನ್ನ ಪ್ರವರ್ಧಮಾನಕ್ಕೆ ಕರೆ ತಂದಿದ್ದು, ಅದಕ್ಕಾಗಿ ಸರ್ಕಾರಿ ಸೇವೆಗೆ ಗುಡ್ಬೈ ಹೇಳಿದ್ದಾರೆ ನಮ್ಮ ಪಬ್ಲಿಕ್ ಹೀರೋ.
ಹಗರಿಬೊಮ್ಮನಹಳ್ಳಿ ನಿವಾಸಿ ತಟ್ಟಿ ರಾಜಾರಾವ್ ಅವರು ಬಳ್ಳಾರಿಯ ಬಹುತೇಕ ಕಲಾವಿದರಿಗೆ ಚಿರಪರಿಚಿತರು. ಗ್ರಾಮೀಣ ಕಲೆ-ಕಲಾವಿದರ ಉಳಿಸಿಲು ಪಣತೊಟ್ಟು, ಸರ್ಕಾರಿ ನೌಕರಿಗೆ ಗುಡ್ಬೈ ಹೇಳಿದ್ದಾರೆ. ಪಿಯುಸಿ ಓದಿರುವ ಇವರಿಗೆ 1976ರಲ್ಲಿ ಕೃಷಿ ಇಲಾಖೆಯಲ್ಲಿ ಕೃಷಿ ಸಹಾಯಕರ ಕೆಲಸ ಸಿಕ್ಕಿತ್ತು. ಆದರೆ ವಿಆರ್ಎಸ್ ಪಡೆದಿದ್ದಾರೆ. ಕುಕನೂರ ರಹೀಮಾನವ್ವ ನಾಟಕ ಕಂಪನಿ, ಗುಡಿಗೇರಿ ಎನ್ ಬಸವರಾಜರ ನಾಟಕ ಕಂಪನಿ, ಸುಳ್ಳ ದೇಸಾಯಿಯವರ ನಾಟಕ ಕಂಪನಿಗಳಲ್ಲಿ ರಂಗಗೀತೆ, ಜಾನಪದ ಹಾಡುಗಳನ್ನ ಹಾಡುತ್ತಿದ್ದ ಇವರಿಗೆ ಕಲೆಯೇ ಜಗತ್ತು ಆಗಿದೆ.
ಹಳ್ಳಿ ಹಳ್ಳಿಗಳಲ್ಲಿ ಕಲಾವಿದರನ್ನು ಗುರುತಿಸಿ, ಅವರ ಪ್ರತಿಭೆಯ ಅನಾವರಣಕ್ಕೆ ವೇದಿಕೆ ನಿರ್ಮಿಸಿಕೊಡ್ತಿದ್ದಾರೆ. ಸೋಬಾನೆ ಪದದ ಹಾಡುಗಾರರು, ಸುಡುಗಾಡು ಸಿದ್ದರು, ಡೊಳ್ಳು ಕುಣಿತ, ಬಯಲಾಟ, ದೊಡ್ಡಾಟ, ಕೋಲಾಟ, ಸುಗ್ಗಿ ಹಾಡುಗಳು ಸೇರಿದಂತೆ ಹಳ್ಳಿ ಸೊಗಡಿನ ಕಲಾವಿದರನ್ನು ಕಲಾ ಜಗತ್ತಿಗೆ ಪರಿಚಯಿಸುತ್ತಿದ್ದಾರೆ.
ಇವರಿಂದ ತರಬೇತಿ ಪಡೆದ ನೂರಾರು ಕಲಾವಿದರು ರಾಜ್ಯದೆಲ್ಲೆಡೆ ಕಲಾಪ್ರದರ್ಶನ ನೀಡುತ್ತಿದ್ದಾರೆ. ಜೊತೆಗೆ ಮಾಸಾಶನವೂ ಸಿಗುವಂತೆ ಮಾಡಿದ್ದಾರೆ. ರಾಜಾರಾವ್ರ ಕಲಾಸೇವೆಗೆ ಪತ್ನಿ ಜ್ಯೋತಿ ಸಹ ಸಾಥ್ ನೀಡಿದ್ದಾರೆ.
https://www.youtube.com/watch?v=3cSjfiSR810
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ: www.instagram.com/publictvnews