ಪಬ್ಲಿಕ್ ಟಿವಿಯ ಪಬ್ಲಿಕ್ ಹೀರೋಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ

Public TV
2 Min Read
Shivaji Public Hero 1

– ಸಗಣಿ ನೀರು ಎರಚಿದ್ರೂ ಬಿಡದ ಸಮಾಜ ಸೇವೆ
– ರಾತ್ರಿ ಶಾಲೆ ಮುಖಾಂತರ 10 ಸಾವಿರ ಮಂದಿಗೆ ಅಕ್ಷರ ಜ್ಞಾನ
– ಶ್ರಮದಾನದ ಮೂಲಕ ಕೆರೆಗಳ ನಿರ್ಮಾಣ

ಬೆಂಗಳೂರು: ಈ ವರ್ಷದ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಪಬ್ಲಿಕ್ ಟಿವಿಯ ಪಬ್ಲಿಕ್ ಹೀರೋ ಶಿವಾಜಿ ಚತ್ರಪ್ಪ ಕಾಗಣಿಕರ್ ಸಹ ಪಾತ್ರರಾಗಿದ್ದಾರೆ.

ಶಿವಾಜಿ ಕಾಗಣಿಕರ್ ಅವರನ್ನು ಪಬ್ಲಿಕ್ ಹೀರೋ ವೇದಿಕೆಯಲ್ಲಿ ನಾಡಿನ ಜನತೆಗೆ ಮೇ 26, 2015ರಂದು ಪರಿಚಯಿಸಿತ್ತು. ಯಾವುದೇ ಪ್ರಚಾರದ ಆಸೆ ಇಲ್ಲದ ಶಿವಾಜಿಯವರು ಪರಿಸರ ಸೇವೆ ಮಾಡುತ್ತಾ ಬಂದಿದ್ದಾರೆ. ಪರಿಸರ ಉಳಿವಿಗಾಗಿ ಸ್ಥಳೀಯರಿಂದಲೇ ಸುಮಾರು 4 ಲಕ್ಷ ಗಿಡಗಳನ್ನು ಹೆಚ್ಚಿಸಿ ಅವರಿಂದಲೇ ಆರೈಕೆ ಮಾಡಿಸುವಲ್ಲಿ ಶಿವಾಜಿಯವರು ಯಶಸ್ವಿಯಾಗಿದ್ದಾರೆ.

Shivaji Public Hero

ಪ್ರಶಸ್ತಿ ಬಂದ ಬಳಿಕ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಶಿವಾಜಿ ಕಾಗಣಿಕರ್, ರಾಜ್ಯೋತ್ಸವ ಪ್ರಶಸ್ತಿ ಬಂದಿರುವುದು ನನಗೆ ದುಃಖ ಆಗಿದೆ. ನೆರೆ ಹಾವಳಿಯಿಂದಾಗಿ ಜಿಲ್ಲೆಯ ಬಹುತೇಕ ಗ್ರಾಮಗಳು ತೇಲಿ ಹೋಗಿವೆ. ಬದುಕಿರುವ ಜನರು ನಾವು ಸಹ ಪ್ರವಾಹದಲ್ಲಿ ತೇಲಿ ಹೋಗಿದ್ದರೆ ಚೆನ್ನಾಗಿರುತ್ತಿತ್ತು ಎಂದು ಸಂತ್ರಸ್ತರು ಹೇಳುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ನನಗೆ ಪ್ರಶಸ್ತಿ ಬಂದಿರೋದು ಸಂತಸ ತಂದಿಲ್ಲ ಎಂದರು. ಇದನ್ನೂಓದಿ: ದಾವಣಗೆರೆಯ ಪಬ್ಲಿಕ್ ಹೀರೋ ಸಾಲು ಮರದ ವೀರಾಚಾರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ 

ಭೂಮಿ, ಜಲ, ವಾಯು ಮಲೀನದಿಂದಾಗಿ ನಾವೆಲ್ಲರೂ ವಿಷಾಹಾರ ಸೇವನೆ ಮಾಡುತ್ತಿದ್ದೇವೆ. ನನ್ನ ಪ್ರಕಾರ ಸರ್ಕಾರ ಅಂದ್ರೆ ತಂದೆ-ತಾಯಿ. ಅಂತಹ ಸ್ಥಾನದಲ್ಲಿರುವ ಸರ್ಕಾರಗಳು ತಮ್ಮ ಮಕ್ಕಳ ಭವಿಷ್ಯಕ್ಕಾಗಿ ಒಳ್ಳೆಯ ನಿರ್ಣಯಗಳನ್ನು ತೆಗೆದುಕೊಳ್ಳಬೇಕಿದೆ. ಸರ್ಕಾರ ಮನಸ್ಸು ಮಾಡಿದ್ರೆ ರೈತರ ಆತ್ಮಹತ್ಯೆಯನ್ನು ತಡೆಯಬಹುದು ಎಂದು ಶಿವಾಜಿ ಅವರು ಸಲಹೆ ನೀಡಿದರು. ಇದನ್ನೂಓದಿ: ಕನ್ನಡ ರಾಜ್ಯೋತ್ಸವ ಪ್ರಶಸ್ತಿ 2019- 64 ಸಾಧಕರ ಪಟ್ಟಿ ಇಲ್ಲಿದೆ

Shivaji Public Hero 2

ಯಾರು ಈ ಶಿವಾಜಿ?
ಬೆಳಗಾವಿ ಜಿಲ್ಲೆಯ ಕಟ್ಟಣಬಾವಿಯ ನಿವಾಸಿಯಾಗಿರುವ ಶಿವಾಜಿ ಕಾಗಣಿಕರ್ ಮೊಬೈಲ್ ಸಹ ಬಳಸಲ್ಲ. ಖಾದಿ ಶರ್ಟ್ ಶಿವಾಜಿಯವರ ಟ್ರೇಡ್ ಮಾರ್ಕ್. ಸದಾ ಕಾಡಂಚಿನ ಗ್ರಾಮಗಳಲ್ಲಿ ಸಂಚರಿಸುವ ಶಿವಾಜಿ ಅವರು ಯಾವುದೇ ಸ್ವಾರ್ಥವಿಲ್ಲದೇ ಪರಿಸರ ಸೇವೆಯಲ್ಲಿ ತಮ್ಮನ್ನು ತೊಡಗಿಕೊಂಡಿದ್ದಾರೆ. 1972ರಲ್ಲಿಯೇ ಬಿಎಸ್‍ಸಿ ಪದವಿ ಪಡೆದ ಶಿವಾಜಿ ಅವರಿಗೆ ಮಹಾತ್ಮ ಗಾಂಧೀಜಿ ಮತ್ತು ವಿನೋದ ಭಾವೆ ರೋಲ್ ಮಾಡೆಲ್.

https://www.youtube.com/watch?v=lKIAFdcxLkk

ಕೇವಲ ಪರಿಸರ ಪ್ರೇಮ ಅಲ್ಲದೇ ಬೆಳಗಾವಿ ಕಾಡಂಚಿನ ಗ್ರಾಮಗಳಲ್ಲಿ ವಾಸವಾಗಿರುವ ಜನರನ್ನು ಸಾಕ್ಷರಗೊಳಿಸಲು ನಿರಂತರವಾಗಿ ಪ್ರಯತ್ನಿಸುತ್ತಿದ್ದಾರೆ. ರಾತ್ರಿ ಶಾಲೆಯ ಮುಖಾಂತರವೇ ಸುಮಾರು 10 ಸಾವಿರ ಜನರಿಗೆ ಅಕ್ಷರ ಜ್ಞಾನ ನೀಡಿದ್ದಾರೆ. ಗ್ರಾಮೀಣ ಭಾಗದ ರೈತರಿಗೆ ಸಾವಯವ ಗೊಬ್ಬರ, ಗೋಬರ್ ಗ್ಯಾಸ್ ಬಳಕೆಯ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ಆರಂಭದ ದಿನಗಳಲ್ಲಿ ಗೋಬರ್ ಗ್ಯಾಸ್ ಬಳಕೆ ಬಗ್ಗೆ ತಿಳಿಸಲು ಹೋದಾಗ ಜನರು ಇವರ ಮೇಲೆಯೇ ಸಗಣಿ ನೀರು ಎರಚಿದ್ದರಂತೆ. ಯಾವುದನ್ನು ಲೆಕ್ಕಿಸದೇ ಇಂದು ಸಹ ಜಾಗೃತಿ ಮೂಡಿಸುತ್ತಿದ್ದಾರೆ. ಶ್ರಮದಾನದ ಮೂಲಕ 26 ಗ್ರಾಮಗಳಲ್ಲಿ ಕೆರೆ ನಿರ್ಮಾಣ ಮಾಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *