ಚಿಕ್ಕೋಡಿ(ಬೆಳಗಾವಿ): ಯಪ್ಪಾ.. ಏನ್ ಕಷ್ಟನಪ್ಪಾ.. ಈ ಗಣಿತ. ಅಂತ ಬಹುಪಾಲು ಜನ ಹೇಳ್ತಿರ್ತಾರೆ. ಆದ್ರೆ, ಕಣ್ಣು ಕಾಣದಿದ್ದರೂ ಯಾವುದೇ ಲೆಕ್ಕವನ್ನ ಬಿಡಿಸಿ ಥಟ್ ಅಂತ ಉತ್ತರ ಹೇಳ್ತಾರೆ ಇವತ್ತಿನ ನಮ್ಮ ಪಬ್ಲಿಕ್ಹೀರೋ ಅಥಣಿಯ ಬಸವರಾಜ್.
ಜನ್ಮ ದಿನಾಂಕ ಹೇಳಿದ ತಕ್ಷಣ ಹುಟ್ಟಿದ ವಾರ ಹೇಳ್ತಿರೋ ಬಸವರಾಜ್, ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದವರು. ಹುಟ್ಟಿನಿಂದಲೇ ಅಂಧರಾಗಿರೋ ಬಸವರಾಜ ಅವರಿಗೆ ಸ್ಮರಣಶಕ್ತಿ ಜಾಸ್ತಿ. ಎಷ್ಟರ ಮಟ್ಟಿಗೆ ಅಂದರೆ ಕ್ಷಣಮಾತ್ರದಲ್ಲಿ ಗುಣಾಕಾರ, ಭಾಗಾಕಾರ, ಕೂಡಿಸೋದು, ಕಳೆಯೋದರ ಜೊತೆಗೆ ಗಣಿತದ ಅನೇಕ ಫಾರ್ಮುಲಾಗಳನ್ನ ಹೇಳ್ತಾರೆ.
ಅಂಧನಾಗಿದ್ದರೂ ದಿನದ ಯಾವುದೇ ಸಮಯದಲ್ಲಿ ಟೈಮ್ ಕೇಳಿದ್ರೆ ನಿಖರವಾಗಿ ಹೇಳ್ತಾರೆ. ನೋಟ್ಗಳನ್ನ ಮುಟ್ಟಿ ಇದು ಇಷ್ಟೇ ಮೌಲ್ಯದ್ದು ಅಂತಾರೆ. ಕುಟುಂಬದ ನಿರ್ವಹಣೆಗಾಗಿ ಬೇರೆ ಬೇರೆ ಶಾಲಾ ಕಾಲೇಜುಗಳಿಗೆ ತೆರಳಿ ಉಪನ್ಯಾಸ ನೀಡ್ತಿದ್ದಾರೆ.
ಬಸವರಾಜ್ ಅವರ ಈ ಅದಮ್ಯ ಶಕ್ತಿಗೆ ಪ್ರತಿಷ್ಠಿತ ಅಬ್ದುಲ್ ಕಲಾಂ ಪ್ರಶಸ್ತಿ, ವಿಶ್ವೇಶ್ವರಯ್ಯ ಪ್ರಶಸ್ತಿ ಸೇರಿದಂತೆ ಸಾಕಷ್ಟು ಪ್ರಶಸ್ತಿಗಳು ಸಂದಿವೆ. ಪ್ರಧಾನಿ ಮೋದಿ ಸಹ ಶಹಬ್ಬಾಷ್ ಹೇಳಿದ್ದಾರೆ. ಅಷ್ಟೇ ಅಲ್ಲ, ದುಬೈನ ಸಂಘ ಸಂಸ್ಥೆಗಳೂ ಬೆರಗಾಗಿ ಸನ್ಮಾನ ಮಾಡಿವೆ ಅಂತ ಸ್ಥಳೀಯ ನಿವಾಸಿ ಸಂತೋಷ್ ತಿಳಿಸಿದ್ದಾರೆ.
ಬಸವರಾಜ್ ಅವರು ಇಂಗ್ಲಿಷ್ ಹಾಗೂ ಹಿಂದಿ ಭಾಷೆಯಲ್ಲಿ ಕ್ರಿಕೆಟ್ ಕಾಮೆಂಟರಿ ಹೇಳ್ತಾರೆ.
https://www.youtube.com/watch?v=hJjnI-RA890