ತುಮಕೂರು: ಇತ್ತೀಚೆಗಷ್ಟೆ ಕ್ರಷರ್ ಮಾಲೀಕರಿಂದ ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದಿದ್ದ ತುಮಕೂರು ಜಿಲ್ಲೆ ತಿಪಟೂರು ಗ್ರಾಮಾಂತರ ಪಿಎಸ್ಐ ಶ್ರೀಕಾಂತ್ ಅವರ ಇನ್ನೊಂದು ದರ್ಪ ಬಯಲಾಗಿದೆ. ಮಾಮೂಲಿ ಕೊಡ್ಲಿಲ್ಲ ಅಂತಾ ಅಮಾಯಕ, ಬಡ ಟೀ ಅಂಗಡಿ ಮಾಲೀಕನ ಮೇಲೆ ಪಿಎಸ್ಐ ದರ್ಪ ತೋರಿದ್ದಾರೆ.
ಬಿದರೆಗುಡಿಯ ಅಂಗಡಿ ಮಾಲೀಕ ನಾರಾಯಣ್ ಕುಮಾರ್ಗೆ ಥಳಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಇವರ ಜೊತೆ ಟೀ ಕುಡಿಯುತ್ತಿದ್ದ ಇಬ್ಬರು ಗ್ರಾಹಕರಿಗೂ ಥಳಿಸಿದ್ದಾರೆ. ಈ ಹಲ್ಲೆ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಕಳೆದ 15 ವರ್ಷಗಳಿಂದ ನಾರಾಯಣ ಕುಮಾರ್ ರಾತ್ರಿ ವೇಳೆ ಟೀ ಅಂಗಡಿ ನಡೆಸಿಕೊಂಡು ಬಂದಿದ್ದಾರೆ. ಇನ್ಮುಂದೆ ರಾತ್ರಿ ವ್ಯಾಪಾರ ಮಾಡೋದಾದ್ರೆ ತಿಂಗಳಿಗೆ ಐದು ಸಾವಿರ ರೂಪಾಯಿ ಲಂಚ ಕೊಡಬೇಕು ಎಂದು ಪಿಎಸ್ಐ ಬೇಡಿಕೆ ಇಟ್ಟಿದ್ರು ಎನ್ನಲಾಗಿದೆ. ಲಂಚ ನೀಡಲು ನಿರಾಕರಿಸಿದಾಗ ಸಿಬ್ಬಂದಿಯೊಂದಿಗೆ ಬಂದು ದರ್ಪ ತೋರಿದ್ದಾರೆ.
https://www.youtube.com/watch?v=MZF1PSuVnDA&feature=youtu.be