ದಾವಣಗೆರೆ: ದೇಶದಲ್ಲಿ ಕೊರೊನಾ ಮಹಾಮಾರಿ ಸೋಂಕು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ದೇಶವೇ ಲಾಕ್ ಡೌನ್ ಆಗಿದೆ. ಇದು ಬಡವರ ಮೆಲೆ ಸಾಕಷ್ಟು ಪರಿಣಾಮ ಬೀರಿದ್ದು, ಮನೆ ತೊರೆದಿರುವ ವಲಸಿಗರು, ನಿರಾಶ್ರಿತರು ಹಾಗೂ ನಿರ್ಗತಿಕರಿಗೆ ಊಟವಿಲ್ಲದೆ, ಅಡುಗೆ ಮಾಡಲು ಆಹಾರ ಪದಾರ್ಥಗಳು ಇಲ್ಲದೆ ಪರದಾಡುವಂತಾಗಿದೆ. ಇಂತವರ ಕಷ್ಟಕ್ಕೆ ಖಾಕಿ ಪಡೆ ಸಹಾಯಕ್ಕೆ ನಿಂತಿದೆ.
ದಾವಣಗೆರೆ ಜಿಲ್ಲೆಯ ಹರಿಹರ ಗ್ರಾಮಾಂತರ ಠಾಣೆಯ ಪಿಎಸ್ಐ ಡಿ.ರವಿಕುಮಾರ್ ಅಲೆಮಾರಿಗಳಿಗೆ ಹಾಗೂ ನಿರ್ಗತಿಕರಿಗೆ ಊಟ ವಿತರಿಸಿ ಮಾನವೀಯ ಕಾರ್ಯ ಮಾಡುತ್ತಿದ್ದಾರೆ. ತಾಲೂಕಿನ ಗುತ್ತೂರು ಬಳಿಯ ನೂರಾರು ವಲಸಿಗರಿಗೆ ಮತ್ತು ಹನಗವಾಡಿ ಬೈಪಾಸ್ ಬಳಿ ಇರುವ ಹತ್ತಾರು ನಿರ್ಗತಿಕ ಕುಟುಂಬಗಳಿಗೆ ಮದ್ಯಾಹ್ನದ ಊಟದ ಪ್ಯಾಕೇಟ್ಗಳನ್ನು ವಿತರಿಸಿದ್ದಾರೆ.
ಅಲ್ಲದೆ ಮನೆಗಳಿಂದ ಅನಾವಶ್ಯಕವಾಗಿ ಬೇಕಾಗಿರುವ ಆಹಾರ ಸಾಮಗ್ರಿಗಳನ್ನು ವಿತರಣೆ ಮಾಡುತ್ತಿದ್ದಾರೆ.. ಅಲ್ಲದೆ ಹಸಿದವರಿಗೆ ಅನ್ನ ನೀಡುವ, ಅವರ ಕಣ್ಣೀರೊರೆಸುವಲ್ಲಿ ಪಿಎಸ್ಐ ಮುಂದಾಗಿರುವುದಕ್ಕೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿದೆ.