ಜೂನ್ 1 ರಿಂದ ದೇಶಾದ್ಯಂತ ಹಾಲು, ತರಕಾರಿ ಸರಬರಾಜು ಮಾಡದಿರಲು ರೈತರ ನಿರ್ಧಾರ!

Public TV
2 Min Read
vegetable market 1 e1589466985710
Onions displayed at APMC Yard during Lorry strike which entered 10th day in Bengaluru on Saturday. -KPN ### Lorry strike 10th day

ಚಂಡಿಗಢ: ರೈತರು ವಿಧಿಸುವ ದರದಲ್ಲಿ ಹಾಲು ಮತ್ತು ತರಕಾರಿಯನ್ನು ಗ್ರಾಹಕರು ಖರೀದಿಸಬೇಕು ಎನ್ನುವ ನಿಟ್ಟಿನಲ್ಲಿ ವಿಶೇಷ ಪ್ರತಿಭಟನೆಯೊಂದು ಶುಕ್ರವಾರದಿಂದ ದೇಶದಲ್ಲಿ ಕಾಣಿಸಿಕೊಳ್ಳಲಿದೆ. ದೇಶದಲ್ಲಿ ಇಂಧನ ಬೆಲೆ ಹೆಚ್ಚಳವನ್ನು ವಿರೋಧಿಸಿ ರೈತ ಸಂಘಟನೆಗಳು ಈ ಪ್ರತಿಭಟನೆಗೆ ಮುಂದಾಗಿವೆ. ಪಂಜಾಬ್ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ರೈತರು ಜೂನ್ 1ರಿಂದ ಜೂನ್ 10 ರವರೆಗೆ ಪ್ರತಿಭಟನೆ ನಡೆಸಲಿದ್ದಾರೆ.

ಹತ್ತು ದಿನಗಳ ಕಾಲ ರೈತರು ಹಾಲು ಹಾಗೂ ತಾವು ಬೆಳೆದ ತರಕಾರಿಯನ್ನು ಮಾರುಕಟ್ಟೆಗೆ ತರುವುದಿಲ್ಲ. ಹೀಗಾಗಿ ಗ್ರಾಹಕರು ರೈತರ ಬಳಿ ಹೋಗಿ ಅವರು ಹೇಳಿದ ದರ ನೀಡಿ ಖರೀದಿಸಬೇಕು ಎಂದು ರೈತರು ಹೇಳಿದ್ದಾರೆ.

vegetable market 2
ಏನಿದು ಪ್ರತಿಭಟನೆ?

“ಗ್ರಾಮಗಳು ಮುಚ್ಚಿವೆ ಹಾಗೂ ರೈತರು ರಜೆಯಲ್ಲಿದ್ದಾರೆ” ಎನ್ನುವ ಘೋಷಣೆ ಮೇಲೆ ಈ ಪ್ರತಿಭಟನೆ ನಡೆಸಲಾಗುತ್ತಿದೆ. ಭಾರತೀಯ ಕಿಸಾನ್ ಯುನಿಯನ್ (ಬಿಕೆಯು) ಪಂಜಾಬ್ ಘಟಕದ ಅಧ್ಯಕ್ಷ ಬಲ್ಬೀರ್ ಸಿಂಗ್ ರಾಜೇವಾಲ್ ಪ್ರತಿಭಟನೆ ಮುಂದಾಳತ್ವ ವಹಿಸಿದ್ದಾರೆ.

ಕೃಷಿ ಭೂಮಿ ಉಳುಮೆ ಮಾಡಲು, ನೀರಾವರಿಗೆ ಇಂಧನದ ಅಗತ್ಯವಿದೆ. ಆದರೆ, ಕೇಂದ್ರ ಸರ್ಕಾರ ಇಂಧನ ದರ ಕಡಿಮೆ ಮಾಡಲು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಕಳೆದ 15 ದಿನಗಳಲ್ಲಿ ಡೀಸೆಲ್ ದರ ಗಗನಕ್ಕೆರಿದೆ. ಟ್ರ್ಯಾಕ್ಟರ್, ನೀರಾವರಿ ಹಾಗೂ ಯಂತ್ರೋಪಕರಣ ಚಾಲನೆಗೆ ಡೀಸೆಲ್ ಅಗತ್ಯವಾಗಿದೆ. ದಿನದಿಂದ ದಿನಕ್ಕೆ ಕೃಷಿ ಖರ್ಚು ಹೆಚ್ಚಾಗುತ್ತಿದೆ. ಇಂಧನ ದರ ಕಡಿಮೆ ಮಾಡುವಂತೆ ಒತ್ತಾಯಿಸಿ ಪ್ರತಿಭಟನೆ ಮಾಡಬೇಕಾಗಿದೆ ಎಂದು ಬಲ್ಬೀರ್ ಸಿಂಗ್ ರಾಜೆವಾಲ್ ಹೇಳಿದ್ದಾರೆ.

ಪ್ರತಿಭಟನೆಯಿಂದ ರೈತರು ತಾವು ಇರುವಲ್ಲಿಯೇ ತಮ್ಮ ಉತ್ಪನ್ನಗಳಿಗೆ ಬೆಲೆ ನಿಗದಿ ಮಾಡಿ ಮಾರಬಹುದು. ಇದರಿಂದ ರೈತರು ಲಾಭ ಪಡೆಯುತ್ತಾರೆ ಮತ್ತು ನಗರದ ಜನರು ಕಡಿಮೆ ಬೆಲೆಯಲ್ಲಿ ಹಾಲು ಹಾಗೂ ತರಕಾರಿ ಪಡೆಯುತ್ತಾರೆ. ಬೇಸಿಗೆ ಸಮಯದಲ್ಲಿ ಹಾಲಿನ ಉತ್ಪನ್ನ ಕಡಿಮೆಯಾಗುತ್ತದೆ. ಆಗ ಹಾಲಿನ ಬೆಲೆಯಲ್ಲಿ 7 ರೂ. ಕಡಿಮೆ ಮಾಡಲಾಗುತ್ತದೆ. ರೈತರಿಂದ ಪ್ರತಿ ಲೀಟರ್ ಗೆ 22 ರೂ. ನೀಡಿ ಖರೀದಿಸಿದ ಹಾಲನ್ನು 45 ರೂ. ಮಾರುಕಟ್ಟೆ ಮಾಡಲಾಗುತ್ತದೆ ಎಂದು ಅವರು ವಿವರಿಸಿದರು.

ರೈತರು ಟೊಮಾಟೊ ಹಾಗೂ ಕುಂಬಳಕಾಯಿ ಸೇರಿದಂತೆ ಅನೇಕ ತರಕಾರಿಗಳನ್ನು ಪ್ರತಿ ಕೆ.ಜಿಗೆ ಕೇವಲ 1 ರೂ., ಈರುಳ್ಳಿ 50 ಪೈಸೆ, 35 ಕೆ.ಜಿ ಕ್ಯಾಪ್ಸಿಕಂಗೆ 25 ರೂ. ನಂತೆ ಮಾರಾಟ ಮಾಡುತ್ತಿದ್ದಾರೆ. ಕೆಲವು ರೈತರು ಒಂದು ಲಾಟ್ ಮೆಣಸಿನಕಾಯಿಯನ್ನು 1,700 ರೂ. ಮಾರುತ್ತಾರೆ. ಅದರಲ್ಲಿ ಇಂಧನ ದರ ಹೊರತುಪಡೆಸಿ ಕೃಷಿ ಕಾರ್ಮಿಕರ ಕೂಲಿಯೇ 1,450 ರೂ. ಆಗುತ್ತದೆ ಎಂದು ರಾಜೇವಾಲ್ ಹೇಳಿದರು.

ಪ್ರತಿಭಟನೆಯಿಂದ ಸ್ವಾಮಿನಾಥನ್ ಆಯೋಗದ ವರದಿ ಜಾರಿಯಾಗುತ್ತದೆ, ರೈತರ ಸಾಲ ಮನ್ನಾ, ಕನಿಷ್ಠ ಆದಾಯದ ಭದ್ರತೆ ಸಿಗುತ್ತದೆ. ಭಾರತದ ಎಲ್ಲ ರೈತರು ಒಂದೇ ಕುಟುಂಬದವರು ಒಂದೇ ಧ್ವನಿ ಹೊಂದಿದ್ದಾರೆ. ದೇಶದ ವಿವಿಧ ರೈತ ಸಂಘಟನೆಗಳು ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಲಿವೆ ಎಂದು ರಾಜೇವಾಲ್ ವಿಶ್ವಾಸ ವ್ಯಕ್ತಪಡಿಸಿದರು.

Share This Article
Leave a Comment

Leave a Reply

Your email address will not be published. Required fields are marked *