ಏಷ್ಯನ್ ಗೇಮ್ಸ್ ನಲ್ಲಿ ಬೆಳ್ಳಿ ಗೆದ್ದ ಉಷಾರಾಣಿಗೆ ಪ್ರಮೋಷನ್!

Public TV
2 Min Read
USHARANI copy

– ಸರ್ಕಾರದಿಂದ ಸನ್ಮಾನ, ಡಿಸಿಎಂ ಅಭಿನಂದನೆ

ಬೆಂಗಳೂರು: ಚಿನ್ನದ ಪದಕ ಗೆಲ್ಲುವ ನೀರಿಕ್ಷೆ ಇತ್ತು ಆದ್ರೆ ಬೆಳ್ಳಿ ಗೆದ್ದಿದ್ದೇವೆ. ಇಂದು ರಾಜ್ಯ ಸರ್ಕಾರ ನನ್ನನ್ನು ಗೌರವಿಸಿ, ಬಿ ದರ್ಜೆಯ ಪ್ರಮೋಷನ್ ನೀಡಿದೆ ಅಂತ ಏಷ್ಯನ್ ಗೇಮ್ಸ್ ನ ಕಬಡ್ಡಿಯಲ್ಲಿ ಬೆಳ್ಳಿ ಪದಕ ಗೆದ್ದಿರುವ ರಾಜ್ಯ ಪೊಲೀಸ್ ಕಾನ್ಸ್ ಸ್ಟೇಬಲ್ ಉಷಾರಾಣಿ ಹೇಳಿದ್ದಾರೆ.

ಉಷಾರಾಣಿ ಅವರು ರಾಷ್ಟ್ರಮಟ್ಟದಲ್ಲಿ ಕಬ್ಬಡಿ ತಂಡವನ್ನು ಪ್ರತಿನಿಧಿಸಿ, ಬೆಳ್ಳಿ ಗೆದ್ದಿದ್ದಾರೆ. ಹೀಗಾಗಿ ಸರ್ಕಾರದಿಂದ 15 ಲಕ್ಷ ಚೆಕ್ ನೊಂದಿಗೆ ಸನ್ಮಾನಿತಗೊಂಡರು. ಸನ್ಮಾನದ ನಂತರ ಗೆಲುವಿನ ಖುಷಿ ಹಂಚಿಕೊಂಡ ಅವರು, ಚಿನ್ನದ ಪದಕ ಗೆಲ್ಲುವ ನೀರಿಕ್ಷೆ ಇತ್ತು. ಆದ್ರೆ ಬೆಳ್ಳಿ ಗೆದ್ದಿದ್ದೇವೆ. ರಾಜ್ಯ ಸರ್ಕಾರ ನನ್ನನ್ನು ಗೌರವಿಸಿದ್ದಕ್ಕೆ ಹೆಮ್ಮೆ ಇದೆ. ಹೀಗಾಗಿ ತುಂಬಾ ಖುಷಿಯಾಗುತ್ತಿದೆ. ಬಿ ದರ್ಜೆಯ ಪ್ರಮೋಷನ್ ನೀಡಿದ್ದಾರೆ. ಇಲಾಖೆಯಲ್ಲಿ ಇದೇ ಮೊದಲಿಗೆ ಮುಂಬಡ್ತಿ ಕೊಡುತ್ತಿರುವುದು. ಅದು ನನಗೆ ಸಿಕ್ಕಿರೋದು ಖುಷಿ ಕೊಟ್ಟಿದೆ. ಮುಂದಿನ ದಿನಗಳಲ್ಲಿ ಚಿನ್ನ ಗೆಲ್ಲುವ ಭರವಸೆ ಇದೆ. ನನ್ನ ಶ್ರಮಕ್ಕೆ ಇಲಾಖೆಯೂ ಸಹಕಾರ ಕೊಟ್ಟಿದೆ ಅಂತ ಅವರು ಹೇಳಿದ್ರು.

Kabaddi Usharani

ಉಷಾರಾಣಿ ಅವರಿಗೆ ಉಪಮುಖ್ಯಮಂತ್ರಿ ಡಾ.ಜಿ ಪರಮೇಶ್ವರ್ ಅವರು ಅಭಿನಂದನೆ ಸಲ್ಲಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಡಿಜಿ ನೀಲಮಣಿರಾಜು, ಎಡಿಜಿಪಿ ಭಾಸ್ಕರ್ ರಾವ್ ಮತ್ತು ಕಮಿಷನರ್ ಸುನೀಲ್ ಕುಮಾರ್ ಭಾಗಿಯಾದ್ದರು.  ಇದನ್ನೂ ಓದಿ: ಸಾಧನೆಯ ಹಾದಿಯನ್ನು ತೆರೆದಿಟ್ಟ ಏಷ್ಯನ್ ಗೇಮ್ಸ್ 2018ರ ಬೆಳ್ಳಿ ಪದಕ ವಿಜೇತೆ ಉಷಾರಾಣಿ

ಡಿಸಿಎಂ ಅಭಿನಂದನೆ:
ಜಕಾರ್ತ ನಲ್ಲಿ ನಡೆದ ಏಷ್ಯನ್ ಗೇಮ್ಸ್ ನಲ್ಲಿ ಭಾರತ ಮಹಿಳಾ ತಂಡ ಬೆಳ್ಳಿ ಪದಕ ಪಡೆದಿದೆ. ಮಹಿಳಾ ಕಬ್ಬಡಿ ತಂಡದಲ್ಲಿ ಬೆಂಗಳೂರಿನ ಉಷಾರಾಣಿ ಭಾಗವಹಿಸಿದ್ದರು. ಇವರು ನಮ್ಮ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದು, ಇದೀಗ ನಮ್ಮ ರಾಜ್ಯಕ್ಕೆ ನಮ್ಮ ಇಲಾಖೆಗೆ ಕೀರ್ತಿ ತಂದಿದ್ದಾರೆ. ನಮ್ಮ ಇಲಾಖೆ ಮತ್ತು ಯುವಜನಾ ಕ್ರೀಡಾ ಇಲಾಖೆಯಿಂದ 15 ಲಕ್ಷ ಚೆಕ್ ನೀಡಿದ್ದೇವೆ. ನಮ್ಮ ಪೊಲೀಸ್ ಇಲಾಖೆ ವಿಶೇಷವಾಗಿ ಅಭಿನಂದನೆ ಸಲ್ಲಿಸಿದ್ದೇವೆ ಅಂತ ಡಿಸಿಎಂ ತಿಳಿಸಿದ್ದಾರೆ. ಇದನ್ನೂ ಓದಿ: ಏಷ್ಯನ್ ಗೇಮ್ಸ್ 2018: ಕಬ್ಬಡ್ಡಿಯಲ್ಲಿ ಬೆಳ್ಳಿ ಪದಕ ಪಡೆದ ಕನ್ನಡತಿ

Usha Rani Kabaddi 1

ಹಿಮಾದಾಸ್ ಗೂ 15 ಲಕ್ಷ ರೂ.:
ಸರ್ಕಾರದಲ್ಲಿ ನಿಯಮಾವಳಿಗಳನ್ನ ಬದಲಾವಣೆ ಮಾಡುತ್ತಿದ್ದೇವೆ. ಉಷಾರಾಣಿ ಅವರಿಗೆ ಬಿ ದರ್ಜೆಗೆ ಪ್ರಮೋಷನ್ ನೀಡುತ್ತೇವೆ. ಮುಂದಿನ ದಿನಗಳಲ್ಲಿ ಚಿನ್ನದ ಪದಕ ಗಳಿಸಬೇಕು ಅಂತಾ ಆಶಿಸುತ್ತೇನೆ. ಅವರ ತಂದೆ ತಾಯಿ ಮತ್ತು ಕೋಚ್ ಜಗದೀಶ್ ಅವರಿಗೂ ಅಭಿನಂದನೆ ಸಲ್ಲಿಸುತ್ತೇವೆ. ನಮ್ಮ ಸರ್ಕಾರ ಕ್ರೀಡೆಗೆ ಉತ್ತೇಜನ ನೀಡುತ್ತಿದೆ. ಬೆಳ್ಳಿ ಪದಕ ಪಡೆದ ಹಿಮಾದಾಸ್ ಅವರಿಗೂ 15 ಲಕ್ಷ ರೂಪಾಯಿ ಬಹುಮಾನ ನೀಡುತ್ತಿದ್ದೇವೆ. ನಮ್ಮ ರಾಜ್ಯದ ಫೋಲ್ಸ್ ಇರ್ಜಾ ಮತ್ತು ರೋಹಣ ಬೋಪಣ್ಣ ಅವ್ರಿಗೂ ಇಲಾಖೆ ವತಿಯಿಂದ ಗೌರವ ಸಮರ್ಪಣೆ ಮಾಡುತ್ತೇವೆ ಅಂತಾ ಪರಮೇಶ್ವರ್ ಅಂದ್ರು. ಇದನ್ನೂ ಓದಿ: 400 ಮೀಟರ್ ರೇಸ್: ಹಿಮಾದಾಸ್, ಅನಾಸ್‍ಗೆ ಬೆಳ್ಳಿ

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

ಇದನ್ನೂ ಓದಿ:  ನಟ ಪುನೀತ್, ಡಿಸಿಪಿ ಚನ್ನಣ್ಣನವರಿಂದ ಹಿಮಾದಾಸ್ ಗೆ ಅಭಿನಂದನೆ

hima das

Share This Article
Leave a Comment

Leave a Reply

Your email address will not be published. Required fields are marked *