ಬೆಂಗಳೂರು: ಬಿಗ್ ಬಾಸ್ ಮನೆಗೆ ಪ್ರಿಯಾಂಕಾ ಅವರ ತಾಯಿ ಎಂಟ್ರಿ ಕೊಟ್ಟಿದ್ದು, ಈ ವೇಳೆ ತಮ್ಮ ಮಗಳಿಗೆ ಎಚ್ಚರಿಕೆ ನೀಡಿದ್ದಾರೆ. ಜೊತೆಗೆ ಕುರಿ ಪ್ರತಾಪ್ ಅವರಿಗೆ ಧನ್ಯವಾದ ತಿಳಿಸಿದ್ದಾರೆ.
ಮಂಗಳವಾರ ಮಧ್ಯರಾತ್ರಿ ಪ್ರಿಯಾಂಕಾ ಅವರ ತಾಯಿ ಸುಕನ್ಯ ಬಿಗ್ ಬಾಸ್ ಮನೆಗೆ ಆಗಮಿಸಿದ್ದರು. ಈ ವೇಳೆ ಪ್ರಿಯಾಂಕಾ ಜೊತೆ ಮಾತನಾಡಿದ ಅವರು ಮಗಳಿಗೆ ಭೂಮಿ ಜೊತೆ ಪದೇ ಪದೇ ಜಗಳ ಮಾಡ್ಕೋಬೇಡ ಎಂದು ಸಲಹೆ ನೀಡಿದರು. ಪ್ರಿಯಾಂಕಾ ಹಾಗೂ ಭೂಮಿ ಮೊದಲ ವಾರದಿಂದ ಆತ್ಮೀಯ ಸ್ನೇಹಿತರಾಗಿದ್ದು, ಬಳಿಕ ಇಬ್ಬರ ನಡುವೆ ಅಂತರ ಶುರುವಾಯಿತು. ಇದನ್ನು ಗಮನಿಸಿದ ಸುಕನ್ಯ ಅವರು ನನ್ನ ಮಗಳಿಗೆ ಜಗಳವಾಡಬೇಡ, ಕೋಪ ಕಂಟ್ರೋಲ್ ಮಾಡ್ಕೋ ಎಂದು ಹೇಳಿದ್ದಾರೆ.
ಭೂಮಿ ಜೊತೆ ಮಾತನಾಡಿದ ಬಳಿಕ ಸುಕನ್ಯ ಅವರು ಕುರಿ ಪ್ರತಾಪ್ ಅವರನ್ನು ಹೊಗಳಿದ್ದಾರೆ. ಪ್ರಿಯಾಂಕಾ ಅವರ ತಂದೆ ನಿಧನರಾಗಿ ನಾಲ್ಕು ತಿಂಗಳಾಗಿದೆ. ಈ ಕಾರಣಕ್ಕಾಗಿ ಸುಕನ್ಯ ಅವರು ಪ್ರತಾಪ್ ಅವರ ಬಳಿ ಬಂದು ನಿಮ್ಮಿಂದ ನನ್ನ ಮಗಳು ತನ್ನ ತಂದೆಯನ್ನು ಕಳೆದುಕೊಂಡ ನೋವನ್ನು ಮರೆಯುತ್ತಿದ್ದಾಳೆ ಎಂದು ಅವರಿಗೆ ಧನ್ಯವಾದ ತಿಳಿಸಿದರು. ಸುಕನ್ಯ ಅವರ ಈ ನಡುವಳಿಕೆಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದೆ.