ಮಂಗಳೂರು: ಬೆಂಗಳೂರಿನ ಪರಪ್ಪನ ಅಗ್ರಹಾರದ ಜೈಲಿನ ಕರ್ಮಕಾಂಡ ಹೊರಬಿದ್ದ ಬೆನ್ನಲ್ಲೇ ಮಂಗಳೂರಿನ ಜಿಲ್ಲಾ ಕಾರಾಗೃಹದಲ್ಲಿಯೂ ವಿಚಾರಣಾಧೀನ ಕೈದಿಗಳು ಜೈಲಿನಲ್ಲೇ ಬಾಡೂಟ ನಡೆಸಿರುವುದು ಬೆಳಕಿಗೆ ಬಂದಿದೆ.
ಕೈದಿಗಳ ಬಾಡೂಟದ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಜೈಲಿನ ವಾಸ್ತವ ಚಿತ್ರಣಕ್ಕೆ ಕನ್ನಡಿ ಹಿಡಿಯುತ್ತಿದೆ. ಫೋಟೋದಲ್ಲಿರುವ ಕೈದಿಗಳು ಆರು ತಿಂಗಳ ಹಿಂದೆ ನಡೆದ ನಟೋರಿಯಸ್ ರೌಡಿ ಕಾಲಿಯಾ ರಫೀಕ್ ಕೊಲೆ ಪ್ರಕರಣದ ಆರೋಪಿಗಳು.
ಇದನ್ನೂ ಓದಿ: ಎಲ್ಇಡಿ ಟಿವಿ,ಕುಷನ್ ಬೆಡ್, ಮಿನರಲ್ ವಾಟರ್- ಪರಪ್ಪನ ಅಗ್ರಹಾರದಲ್ಲಿ ವಂಚಕ ತೆಲಗಿಗೆ ರಾಜಮರ್ಯಾದೆ
ಹೊರಗಿನಿಂದ ಪಾರ್ಸೆಲ್ ತರಿಸಿ, ಜೈಲಿನ ಸೆಲ್ ಒಳಗೇ ಗುಂಡು-ತುಂಡಿನ ಪಾರ್ಟಿ ನಡೆಸಿದ್ದಾರೆ. ಗ್ಲಾಸ್, ಮದ್ಯದ ಬಾಟಲಿ ಎದುರಿಟ್ಟುಕೊಂಡು ಕೈದಿಗಳೇ ಫೋಟೋ ತೆಗೆದಿದ್ದಾರೆ. ಅಷ್ಟೇ ಅಲ್ಲ, ಸೆಲ್ ಒಳಗೆ ವಿಭಿನ್ನ ಭಂಗಿಯಲ್ಲಿ ನಿಂತು ಫೋಟೊ ತೆಗೆದು ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ. ಹೀಗಾಗಿ ಕೈದಿಗಳು ಮೊಬೈಲ್ ಬಳಸುತ್ತಿರುವುದೂ ಇದರಿಂದ ಸಾಬೀತಾಗಿದೆ.
ಇಷ್ಟೆಲ್ಲ ನಡೆದಿರಬೇಕಾದರೆ ಜೈಲು ಸಿಬಂದಿ ಕೈವಾಡ ಇಲ್ಲದೆ ಸಾಧ್ಯವಿಲ್ಲ. ಹಣ ಇದ್ದವರು ಜೈಲಿನಲ್ಲೂ ಐಷಾರಾಮಿ ಜೀವನ ನಡೆಸುತ್ತಾರೆ ಎಂಬುದಕ್ಕೆ ಇದು ಸಾಕ್ಷಿ ನೀಡುವಂತಿದೆ.
ಇದನ್ನೂ ಓದಿ: ಬಗೆದಷ್ಟೂ ಪರಪ್ಪನ ಅಗ್ರಹಾರದ ಕರ್ಮಕಾಂಡ ಬಯಲು: ಇಲ್ಲಿ ಎಣ್ಣೆ ಪಾರ್ಟಿ ಖುಲ್ಲಂಖುಲ್ಲಾ, ಜೈಲು ವಾರ್ಡನ್ ಎದುರೇ ಇಸ್ಪೀಟ್ ಆಟ
ಇದನ್ನೂ ಓದಿ: ಪರಪ್ಪನ ಅಗ್ರಹಾರದಲ್ಲಿ ತಿಂಗಳಿಗೆ 20 ಲಕ್ಷ ರೂ. ಕಲೆಕ್ಷನ್ – ಇಡೀ ಜೈಲನ್ನು ಮೇಂಟೇನ್ ಮಾಡೋದು ಪ್ರತಿಭಾ ಹಂತಕ
ಇದನ್ನೂ ಓದಿ: ಪರಪ್ಪನ ಅಗ್ರಹಾರದಲ್ಲಿ ನಡೇತಿದೆ ಬಿಂದಾಸ್ ಹುಟ್ಟುಹಬ್ಬದ ಪಾರ್ಟಿ!
ಇದನ್ನೂ ಓದಿ: ಶಶಿಕಲಾಗೆ ಸೆಂಟ್ರಲ್ ಜೈಲಲ್ಲಿ ಹೈಫೈ ಸೌಲಭ್ಯ: ರೂಪಾ ಆರೋಪಕ್ಕೆ ಇಲ್ಲಿದೆ ದೃಶ್ಯ `ರೂಪ’ಕ
ಇದನ್ನೂ ಓದಿ: ಜೈಲು ರಹಸ್ಯ ಬೇಧಿಸಿದ ರೂಪಾಗೆ ಎತ್ತಂಗಡಿ ಭಾಗ್ಯ