ರಾಂಚಿ: ಪ್ರಧಾನಿ ನರೇಂದ್ರ ಮೋದಿ ಅವರಿಗೆ ರಾಖಿ ಕಟ್ಟಿದ್ದ ಶರ್ಬತಿ ದೇವಿ(103) ಅವರು ಜಾರ್ಖಂಡ್ ರಾಜ್ಯದ ಧನಬಾದ್ ನಲ್ಲಿ ನಿಧನರಾಗಿದ್ದಾರೆ.
ಕಳೆದ ವರ್ಷ ಶರ್ಬತಿ ದೇವಿ ಅವರ ಮಗ ಪ್ರಧಾನಿ ಮೋದಿ ಅವರಿಗೆ ತನ್ನ ತಾಯಿ ಆಶಯವನ್ನು ಪತ್ರದಲ್ಲಿ ವ್ಯಕ್ತಪಡಿಸಿದ್ದಕ್ಕೆ ಮಣಿದು ಮೋದಿ ಅವರು ಶರ್ಬತಿ ದೇವಿಯವರನ್ನು ಭೇಟಿ ಮಾಡಿ ರಾಖಿ ಕಟ್ಟಿಸಿ ಕೊಂಡಿದ್ದರು.
ಶರ್ಬತಿ ದೇವಿ ತಮ್ಮ 50 ವರ್ಷದ ಸಹೋದರನನ್ನು ಕಳೆದುಕೊಂಡಿದ್ದಕ್ಕೆ ಅವರು ಪ್ರಧಾನಿ ಮೋದಿ ಅವರಿಗೆ ರಾಖಿ ಕಟ್ಟಲು ಬಯಸಿದ್ದರೆಂದು ಅವರ ಮಗ ಪತ್ರದ ಬರೆದಿದ್ದರು. ಈ ಪತ್ರಕ್ಕೆ ಪ್ರತಿಕ್ರಿಸಿದ ಮೋದಿ ರಕ್ಷಣಾ ಸಚಿವ ಲೋಕ ಕಲ್ಯಾಣ್ ಅವರ ನಿವಾಸಕ್ಕೆ ಕರೆಸಿ ಅವರನ್ನು ಭೇಟಿ ಮಾಡಿದ್ದರು. ಈ ವೇಳೆ ಮೋದಿ ಅವರಿಗೆ ಶರ್ಬತಿ ದೇವಿ ರಾಖಿ ಕಟ್ಟಿದ್ದರು.
ಶರ್ಬತಿ ದೇವಿ ಅವರು ಶರ್ಬತಿ ಧನರಾಜ್ ಅಗರ್ವಾಲ್ ಅವರನ್ನು ವಿವಾಹವಾಗಿದ್ದು, ಅವರಿಗೆ ಒಂಬತ್ತು ಮಕ್ಕಳಿದ್ದಾರೆ. ಅವರಿಗೆ ರಾಮಾವ್ತಾರ್ ಅಗರ್ವಾಲ್, ರಾಜೇಂದ್ರ ಅಗರ್ವಾಲ್, ಮೋಹನ್ ಅಗರ್ವಾಲ್ ಮತ್ತು ಮಹೇಂದ್ರ ಅಗರ್ವಾಲ್ ಪುತ್ರರು ಹಾಗೂ ಲಕ್ಷ್ಮಿ ದೇವಿ, ರಾಮ್ಕಲಿ ದೇವಿ ಮತ್ತು ಶಾರದಾ ದೇವಿ ಎಂಬ ಮೂವರು ಪುತ್ರಿಯರಿದ್ದಾರೆ. ಶನಿವಾರ ನಿಧನರಾದ ಶರ್ಬತಿ ದೇವಿ ಅವರ ಅಂತ್ಯಕ್ರಿಯೆ ಭಾನುವಾರ ನಡೆಯಲಿದೆ.