ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ‘ಮನ್ ಕಿ ಬಾತ್’ (Mann Ki Baat) ನೂರರ ಕಂತು ತಲುಪಿದೆ. ಇದೇ ಏಪ್ರಿಲ್ 30 ರಂದು ನೂರನೇ ಸಂಚಿಕೆ ಪ್ರಸಾರವಾಗಲಿದ್ದು, ಅದಕ್ಕೂ ಮುನ್ನ ದೇಶದ ಗಣ್ಯರನ್ನು ಒಟ್ಟಾಗಿಸಿ ಸ್ಮರಣೀಯ ಸಮಾವೇಶವನ್ನು ಆಯೋಜನೆ ಮಾಡಲಾಗಿತ್ತು. ಈ ಸಮಾವೇಶದಲ್ಲಿ ಬಾಲಿವುಡ್ ನಟರಾದ ಆಮೀರ್ ಖಾನ್ (Aamir Khan), ರವೀನಾ ಟಂಡನ್ ಸೇರಿದಂತೆ ಹಲವರು ಭಾಗಿಯಾಗಿದ್ದರು.
ಈ ಸಮಾವೇಶದಲ್ಲಿ ಮಾತನಾಡಿದ ಆಮೀರ್ ಖಾನ್, ಮನ್ ಕಿ ಬಾತ್ ಕಾರ್ಯಕ್ರಮವನ್ನು ಹಾಡಿಹೊಗಳಿದರು. ‘ದೇಶದ ಜನರೊಂದಿಗೆ ದೇಶದ ನಾಯಕ ಸಂವಹನ ಮಾಡುವ ಶಕ್ತಿಯುತ ವೇದಿಕೆ ಇದು. ಅನೇಕ ವಿಷಯಗಳನ್ನು ಮೋದಿ ಅವರು ಇದೇ ವೇದಿಕೆಯಲ್ಲೇ ಚರ್ಚೆ ಮಾಡಿದ್ದಾರೆ. ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಹಲವಾರು ವಿಚಾರಗಳನ್ನು ಜಗತ್ತಿಗೆ ತಿಳಿಸಿದ್ದಾರೆ’ ಎಂದಿದ್ದಾರೆ. ಇದನ್ನೂ ಓದಿ:ಸಂಪತ್ ಪತ್ನಿ 5 ತಿಂಗಳ ಗರ್ಭಿಣಿ- ಸಹನಟನ ನೆನೆದು ಕಣ್ಣೀರಿಟ್ಟ ವೈಷ್ಣವಿ
ಮನ್ ಕಿ ಬಾತ್ ನೂರನೇ ಸಂಚಿಕೆ ವಿಶೇಷತೆಯಿಂದ ಕೂಡಿರಲಿದ್ದು, ಸ್ಮರಣೀಯ ಕಾರ್ಯಕ್ರಮವಾಗಿಸಲು ಸರ್ವಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಈ ಕಾರ್ಯಕ್ರಮದಲ್ಲಿ ಎರಡು ಪುಸ್ತಕಗಳ ಬಿಡುಗಡೆ, ಸ್ಟಾಂಪ್ ಮತ್ತು ಕಾಯಿನ್ ಕೂಡ ಬಿಡುಗಡೆಗೊಳಿಸಲು ಮಾಹಿತಿ ಮತ್ತು ಪ್ರಸಾರ ಇಲಾಖೆ ಸಿದ್ಧಮಾಡಿಕೊಂಡಿದೆ.
ಹಾಗಾಗಿಯೇ ಪೂರ್ವಭಾವಿಯಾಗಿ ನಡೆದ ಚರ್ಚೆಯಲ್ಲಿ ಆಮೀರ್ ಖಾನ್ ಹಲವು ಸಲಹೆಗಳನ್ನೂ ನೀಡಿದ್ದಾರಂತೆ. ಮನ್ ಕಿ ಬಾತ್ ಕುರಿತಾಗಿ ವಿಶೇಷವಾಗಿ ಅವರು ಮಾತನಾಡಿದ್ದಾರೆ. ಆ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಕೂಡ ಮಾಡಿಕೊಂಡಿದ್ದಾರೆ.