Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Karnataka

ಸಿಎಂ ಗೈರು, ಉಡುಪಿಗೆ ರಾಷ್ಟ್ರಪತಿ ಭೇಟಿ: ಫೋಟೋಗಳಲ್ಲಿ ಐಬಿಯ 40 ಲಕ್ಷ ರೂ. ಸೂಟ್ ರೂಂ ನೋಡಿ

Public TV
Last updated: June 18, 2017 8:12 pm
Public TV
Share
2 Min Read
pranab mukherjee udupi
SHARE

ಉಡುಪಿ: ರಾಷ್ಟ್ರಪತಿ ಪ್ರಣಬ್ ಮುಖರ್ಜಿ ತನ್ನ ಅಧಿಕಾರಾವಧಿಯ ಕರ್ನಾಟಕದ ಕೊನೆಯ ಪ್ರವಾಸ ಕೈಗೊಂಡರು. ದೇವಾಲಯಗಳ ನಗರಿಗೆ ಭೇಟಿಕೊಡುವ ಮೂಲಕ ತಾನೊಬ್ಬ ಪರಮ ದೈವಭಕ್ತ ಎಂಬೂದನ್ನು ತೋರಿಸಿದರು. ಪೇಜಾವರ ಸ್ವಾಮೀಜಿಗಳ ಐತಿಹಾಸಿಕ ಪಂಚಮ ಪರ್ಯಾಯ ಸಂದರ್ಭ ಶ್ರೀಕೃಷ್ಣಮಠಕ್ಕೆ ಭೇಟಿ ನೀಡಿದರು. ಆದ್ರೆ ಶಿಷ್ಟಾಚಾರ ಮುರಿದ ಸಿಎಂ ಸಿದ್ದರಾಮಯ್ಯ ರಾಷ್ಟ್ರಪತಿಗಳ ಕಾರ್ಯಕ್ರಮದಿಂದ ದೂರ ಉಳಿದು ತನ್ನ ಸಿದ್ಧಾಂತವನ್ನು ಕಾಪಾಡುವುದರಲ್ಲಿ ಯಶಸ್ವಿಯಾದರು.

udp PresidentVist kolluru av 8

ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಬೆಂಗಳೂರು ಪ್ರವಾಸ ಮುಗಿಸಿ ಕರಾವಳಿ ಜಿಲ್ಲೆ ಉಡುಪಿಗೆ ಆಗಮಿಸಿದರು. ಆದ್ರೆ ದೇಶದ ಪ್ರಥಮ ಪ್ರಜೆಯ ಜೊತೆ ಸಿಎಂ ಸಿದ್ದರಾಮಯ್ಯ ಕೃಷ್ಣಮಠಕ್ಕೆ ಬರಲೇ ಇಲ್ಲ. ಹಲವು ಬಾರಿ ಆಹ್ವಾನ ನೀಡಿದ ಹೊರತಾಗಿಯೂ ಕೃಷ್ಣಮಠಕ್ಕೆ ಬಾರದ ಸಿಎಂ ಅನಿವಾರ್ಯ ಸಂದರ್ಭದಿಂದಲೂ ನುಣುಚಿಕೊಂಡರು. ಸಚಿವರಾದ ಕೆ.ಜೆ ಜಾರ್ಜ್ ಮತ್ತು ಪ್ರಮೋದ್ ಮಧ್ವರಾಜ್ ಅವರಿಗೆ ಜವಾಬ್ದಾರಿವಹಿಸಿಕೊಟ್ಟು ತಾನು ರಾಜಧಾನಿಯಲ್ಲೇ ಉಳಿದುಬಿಟ್ಟರು. ರಾಷ್ಟ್ರಪತಿಗಳ ಉಡುಪಿ ಪ್ರವಾಸದ ವೇಳೆ ಶಿಷ್ಟಾಚಾರದಂತೆ ಸಿಎಂ ಬರುತ್ತಾರೆ ಎಂದೇ ಭಾವಿಸಲಾಗಿತ್ತು. ಈ ಬಗ್ಗೆ ಮಾಧ್ಯಮಗಳಲ್ಲಿ ಸಾಕಷ್ಟು ಚರ್ಚೆ ನಡೆದರೂ, ತೆಲೆ ಕೆಡಿಸಿಕೊಳ್ಳದ ಸಿಎಂ, ರಾಷ್ಟ್ರಪತಿಗಳ ಎರಡನೇ ದಿನದ ರಾಜ್ಯಪ್ರವಾಸದಿಂದ ಸಂಪೂರ್ಣ ದೂರ ಉಳಿದರು.

udp PresidentVist kolluru av 15

ಬೆಂಗಳೂರಿನಿಂದ ವಿಶೇಷ ಹೆಲಿಕಾಪ್ಟರ್ ಮೂಲಕ ಬಂದ ರಾಷ್ಟ್ರಪತಿಗಳನ್ನು ಆದಿ ಉಡುಪಿ ಹೆಲಿಪ್ಯಾಡ್ ನಲ್ಲಿ ಸಚಿವ ಜಾರ್ಜ್ ಮತ್ತು ಪ್ರಮೋದ್ ಮಧ್ವರಾಜ್ ಬರಮಾಡಿಕೊಂಡರು.

ಪೇಜಾವರ ಶ್ರೀಗಳ ಐದನೇ ಐತಿಹಾಸಿಕ ಪರ್ಯಾಯ ಅವಧಿಯಲ್ಲಿ ರಾಷ್ಟ್ರದ ಪ್ರಥಮ ಪ್ರಜೆ ಮಠಕ್ಕೆ ಭೇಟಿ ನೀಡಿದರು. ಕನಕ ನವಗ್ರಹ ಕಿಂಡಿಯ ಮೂಲಕ ಕೃಷ್ಣ ದರ್ಶನವನ್ನು ಕೈಗೊಂಡ ರಾಷ್ಟ್ರಪತಿಗಳಿಗೆ ಅಷ್ಟಮಠಾಧೀಶರು ಸೇರಿ ಸನ್ಮಾನಿಸಿದ್ದು ವಿಶೇಷವಾಗಿತ್ತು.

udp PresidentVist kolluru av 12

ಹಾಜಿ ಅಬ್ದುಲ್ಲಾ ಸಾಹೇಬ್ ತನ್ನ ಜಮೀನನ್ನು ಸರ್ಕಾರಕ್ಕೆ ದಾನ ಮಾಡಿದ್ದರು. ಸರ್ಕಾರ ಬಿಆರ್ ಶೆಟ್ಟರ ಸದುದ್ದೇಶದ ಆಸ್ಪತ್ರೆಗೆಂದು ಜಮೀನು ನೀಡಿದೆ. ಬಡ, ಅಶಕ್ತ ಜನರ ಸೇವೆ ಈ ಆಸ್ಪತ್ರೆಯಲ್ಲಿ ಆಗಲಿ. ಆ ಕೆಲಸವನ್ನು ಶೆಟ್ಟರ ಆಸ್ಪತ್ರೆಯ ವೈದ್ಯರು- ಆಡಳಿತವರ್ಗ- ಸಿಬ್ಬಂದಿಗಳು ಮಾಡುತ್ತಾರೆಂಬ ನಂಬಿಕೆ ನನಗೆ ಇದೆ ಎಂದು ಪೇಜಾವರ ಮಠಾಧೀಶ ವಿಶ್ವೇಶತೀರ್ಥ ಶ್ರೀಪಾದರು ಹೇಳಿದರು.

UDP PRESIDENT 3

ಇದೇ ವೇಳೆ ಉಡುಪಿಯ ಬಹುಚರ್ಚಿತ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ರಾಜಾಂಗಣದಲ್ಲಿ ರಾಷ್ಟ್ರಪತಿಗಳು ಶಂಕುಸ್ಥಾಪನೆ ಮಾಡಿದರು. ದುಬೈನ ಉದ್ಯಮಿ ಬಿ.ಆರ್. ಶೆಟ್ಟಿ ಸಹಭಾಗಿತ್ವದಲ್ಲಿ ಕರ್ನಾಟಕ ಸರ್ಕಾರ ಈ ಮಹತ್ವಾಕಾಂಕ್ಷಿ ಯೋಜನೆ ಕೈಗೆತ್ತಿಕೊಂಡಿದೆ. ಆದರೆ ಸರ್ಕಾರಿ ಭೂಮಿಯನ್ನು ಖಾಸಗಿ ಕಂಪೆನಿಗೆ ನೀಡಿದ ಬಗ್ಗೆ ಸಾಕಷ್ಟು ಆಕ್ಷೇಪಗಳಿವೆ. ಈ ಬಗ್ಗೆ ಕಾನೂನು ಸಮರವನ್ನೂ ನಡೆಸಲಾಗುತ್ತಿದೆ. ಈ ನಡುವೆ ಇಂದು ರಾಷ್ಟ್ರಪತಿಗಳು ಈ ಆಸ್ಪತ್ರೆಗೆ ಶಂಕುಸ್ಥಾಪನೆ ಮಾಡಿರುವುದು ಹೊಸ ಚರ್ಚೆ ಹುಟ್ಟುಹಾಕಿದೆ.

UDP PRESIDENT 2

ಈ ಸಂದರ್ಭ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಮಾತನಾಡಿ, ರೈತರಿಗೆ ಮತ್ತು ವೈದ್ಯರಿಗೆ ಗೌರವ ಕೊಡುವುದನ್ನು ಸಮಾಜ ಕಲಿತುಕೊಳ್ಳಬೇಕು. ವೈದ್ಯರ ಮೇಲಿನ ಹಲ್ಲೆ ನಾಗರೀಕ ಸಮಾಜದ ಲಕ್ಷಣವಲ್ಲ. ತಪ್ಪುಗಳು ಎಲ್ಲರಿಂದ ಆಗುತ್ತದೆ, ಮನುಷ್ಯ ತಪ್ಪು ಮಡದೆ ಮತ್ಯಾರು ಮಾಡಲು ಸಾಧ್ಯ ಎಂದರು.

UDP PRESIDENT 1

40 ಲಕ್ಷದ ಸೂಟ್ ರೂಂ.: ರಾಷ್ಟ್ರಪತಿಗಳ ಭೇಟಿ ಹಿನ್ನೆಲೆಯಲ್ಲಿ ಉಡುಪಿ ಐಬಿಯ ಕೊಠಡಿಯನ್ನು ಸೂಟ್ ರೂಂ ಆಗಿ ಪರಿವರ್ತಿಸಲಾಗಿತ್ತು. ಸುಮಾರು 40 ಲಕ್ಷ ಖರ್ಚು ಮಾಡಿ ಪ್ರವಾಸಿ ಬಂಗಲೆಯನ್ನು ಪರ್ಮನೆಂಟ್ ಸಿಂಗಾರ ಮಾಡಲಾಗಿತ್ತು. ಉಡುಪಿ ಕ್ಷೇತ್ರ ಸಂದರ್ಶನದ ಬಳಿಕ ರಾಷ್ಟ್ರಪತಿಗಳು ಕೊಲ್ಲೂರು ಮುಕಾಂಬಿಕಾ ಕ್ಷೇತ್ರದ ಸಂದರ್ಶಿಸಿದರು. ರಾಷ್ಟ್ರಪತಿಯಾಗಿ ತಮ್ಮ ಅವಧಿ ಪೂರೈಸುವ ಮುನ್ನ ದಕ್ಷಿಣ ಭಾರತದ ಎರಡು ಪ್ರಸಿದ್ಧ ಕ್ಷೇತ್ರಗಳನ್ನು ಸಂದರ್ಶಿಸಿದ್ದು ವಿಶೇಷವಾಗಿತ್ತು.

UDP PRESIDENT 5

UDP PRESIDENT 7

udp PresidentVist kolluru av 9

udp PresidentVist kolluru av 13

 

TAGGED:Payajar Sripranab mukherjeepresidentPublic TVudupiಉಡುಪಿಪಬ್ಲಿಕ್ ಟಿವಿಪೇಜಾವರ ಶ್ರೀಪ್ರಣಬ್ ಮುಖರ್ಜಿರಾಷ್ಟ್ರಪತಿ
Share This Article
Facebook Whatsapp Whatsapp Telegram

You Might Also Like

DARSHAN 2
Cinema

ಫಾರ್ಮ್‌ ಹೌಸ್‌ನಲ್ಲಿ ಚಾಮುಂಡಿ ಪೂಜೆ ನೆರವೇರಿಸಿದ ದರ್ಶನ್

Public TV
By Public TV
6 minutes ago
Rashmika Mandanna
Cinema

ಕೊಡವ ಕಮ್ಯೂನಿಟಿಯಿಂದ ಇಂಡಸ್ಟ್ರಿಗೆ ಬಂದಿದ್ದು ನಾನೇ ಫಸ್ಟ್ – ರಶ್ಮಿಕಾ ಮತ್ತೊಂದು ಯಡವಟ್ಟು 

Public TV
By Public TV
22 minutes ago
asi on duty at gokak gramdevi fair dies of heart attack
Belgaum

ಗೋಕಾಕ್‌ ಗ್ರಾಮದೇವಿ ಜಾತ್ರೆ ಕರ್ತವ್ಯದಲ್ಲಿದ್ದ ಎಎಸ್ಐ ಹೃದಯಾಘಾತದಿಂದ ಸಾವು

Public TV
By Public TV
39 minutes ago
PM Modi meet india based person Argentina
Latest

ಅರ್ಜೆಂಟೀನಾದಲ್ಲಿ ಪ್ರಧಾನಿ ಮೋದಿಗೆ ಹಲೋ ಹೇಳಲು 400 ಕಿಮೀ ಪ್ರಯಾಣಿಸಿದ ಭಾರತೀಯ

Public TV
By Public TV
41 minutes ago
Bengaluru Lady
Bengaluru City

ಸೊಸೆಯನ್ನು ಮನೆಯಿಂದ ಹೊರಹಾಕಿದ ಅತ್ತೆ, ಮಾವ – 20 ದಿನದಿಂದ ಮನೆಯ ಹೊರಗೆ ಮಹಿಳೆಯ ವಾಸ

Public TV
By Public TV
50 minutes ago
chikkajala extortion case
Bengaluru City

ಪಾರ್ಟಿ ಮಾಡಲು ಪಬ್‌ಗೆ ಕರೆದು ಸ್ನೇಹಿತನಿಂದಲೇ ಸುಲಿಗೆ – ನಾಲ್ವರ ಬಂಧನ

Public TV
By Public TV
1 hour ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?