HALಗೆ ಈಗ ಮತ್ತೊಮ್ಮೆ ತನ್ನ ಸಾಮರ್ಥ್ಯ ತೋರಿಸುವ ಸಮಯ ಬಂದಿದೆ: ದ್ರೌಪದಿ ಮುರ್ಮು

Public TV
2 Min Read
HAL Draupadi Murmu

ಬೆಂಗಳೂರು: ಹಿಂದೂಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್ (HAL)ಗೆ ಈಗ ಮತ್ತೊಮ್ಮೆ ತನ್ನ ಸಾಮರ್ಥ್ಯ ತೋರಿಸುವ ಸಮಯ ಬಂದಿದೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು (Draupadi Murmu) ತಿಳಿಸಿದರು.

ಬೆಂಗಳೂರಿನಲ್ಲಿ (Bengaluru) ಇಸ್ರೋ (Isro) ಮತ್ತು ಎಚ್‌ಎಎಲ್ ಸಹಯೋದಲ್ಲಿ ನಿರ್ಮಾಣವಾದ 208 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾದ ಏಕೀಕೃತ ಕ್ರಯೋಜನಿಕ್ ಇಂಜಿನ್ ಉತ್ಪಾದಕ ವಿಭಾಗ ಉದ್ಘಾಟಿಸಿದ ಅವರು, ಕ್ರಯೋಜನಿಕ್ ಇಂಜಿನ್ ಬಾಹ್ಯಾಕಾಶ ಉಪಗ್ರಹ ವಾಹಕಗಳಿಗೆ ಅತ್ಯಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ ಎಚ್‌ಎಎಲ್ 1993 ರಿಂದಲೂ ಇಸ್ರೋದ ಬಾಹ್ಯಾಕಾಶ ಸಂಶೋಧನೆಗಳಿಗೆ ಒತ್ತಾಸೆಯಾಗಿ ನಿಂತಿದೆ. ಅತ್ಯಾಧುನಿಕ ತಂತ್ರಜ್ಞಾನದಡಿ ಕ್ರಯೋಜನಿಕ್ ಇಂಜಿನ್ ಉತ್ಪಾದನೆ ಕಾರ್ಯವು ಒಂದು ದೊಡ್ಡ ಮೈಲಿಗಲ್ಲಾಗಿದೆ. ಕ್ರಯೋಜನಿಕ್ ಇಂಜಿನ್ ಉತ್ಪಾದಿಸುತ್ತಿರುವ ಜಗತ್ತಿನ ಆರು ದೇಶಗಳಲ್ಲಿ ಭಾರತವೂ ಒಂದಾಗಿದೆ ಎಂದು ಹೇಳಿದರು.

draupadi murmu 3

ದೇಶದ ಸೇವೆ ಮಾಡುವಲ್ಲಿ ಎಚ್‌ಎಎಲ್‌ನ ಪಾತ್ರ ದೊಡ್ಡದು. ಡಾ. ಎಪಿಜೆ ಅಬ್ದುಲ್ ಕಲಾಂ ಮಿಸೈಲ್ ಮ್ಯಾನ್ ಎಂದೇ ಖ್ಯಾತಿ ಪಡೆದಿದ್ದರು. ವಿಜ್ಞಾನ, ತಂತ್ರಜ್ಞಾನ ಕ್ಷೇತ್ರದಲ್ಲಿ ಅವರ ಕೊಡುಗೆ ಅಜರಾಮರವಾಗಿದೆ. ಇಂಥ ವಿಜ್ಞಾನಿಗಳ ಸೇವೆಯೇ ನಮ್ಮನ್ನು ಹಲವು ಅಪಾಯಗಳಿಂದ ಕಾಪಾಡುತ್ತಿದೆ ಎಂದರು.

ಭಾರತ ಕೋವಿಡ್‌ನ ವಿಷಮ ಸಂದರ್ಭ ದಾಟಿ ಬಂದಿದೆ. ದೇಶಾದ್ಯಂತ ದೊಡ್ಡ ಲಸಿಕಾ ಅಭಿಯಾನ ನಡೆಯಿತು. ಕೊವಿಡ್ ಲಸಿಕೆ ತಯಾರಿಸುವ ಮೂಲಕ ವಿಜ್ಞಾನಿಗಳು ದೇಶದ ಜನರ ಪ್ರಾಣರಕ್ಷಕರಾಗಿದ್ದಾರೆ. ವಿಜ್ಞಾನಿಗಳು, ವೈದ್ಯರು, ನರ್ಸ್‌ಗಳು ಕೋವಿಡ್ ನಿಯಂತ್ರಣಕ್ಕೆ ಕೊಟ್ಟ ಕೊಡುಗೆ ಸಣ್ಣದಲ್ಲ ಎಂದು ಭಾರತದ ವಿಜ್ಞಾನಿಗಳನ್ನು ಕೊಂಡಾಡಿದರು. ಇದನ್ನೂ ಓದಿ:  2024 ಸಂಕ್ರಾಂತಿ ವೇಳೆಗೆ ಅಯೋಧ್ಯೆಯಲ್ಲಿ ಬಾಲ ರಾಮನ ಪ್ರತಿಷ್ಠಾಪನೆ: ಗೋಪಾಲ್ ಜೀ

ಇದೇ ವೇಳೆ ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡಿ, ವಿಜ್ಞಾನದ ಅಂತಿಮ ಗುರಿ ಮಾನವನ, ಜೀವಿ ಸಂಕುಲದ ಹಿತ ಕಾಪಾಡವುದೇ ಆಗಿದೆ. ಬಾಹ್ಯಾಕಾಶ ಸಂಶೋಧನೆಯಲ್ಲಿ ಭಾರತ ಶತಮಾನಗಳಿಂದ ಹೆಜ್ಜೆ ಗುರುತು ಉಳಿಸಿಕೊಂಡು ಬಂದಿದೆ. ಕ್ರಯೋಜನಿಕ್ ಇಂಜಿನ್ ಉತ್ಪಾದನೆ ಬಗ್ಗೆ ಕಳೆದ ನಾಲ್ಕೈದು ದಶಕಗಳಿಂದಲೂ ಚರ್ಚೆ ನಡೆಯುತ್ತಿದೆ. ಕ್ರಯೋಜನಿಕ್ ಇಂಜಿನ್ ಉತ್ಪಾದಿಸುವ ಜಗತ್ತಿನ ಕೆಲವೇ ದೇಶಗಳಲ್ಲಿ ಭಾರತವೂ ಒಂದಾಗಿದ್ದು, ನಮ್ಮ ರಾಜ್ಯ ಕ್ರಯೋಜನಿಕ್ ಇಂಜಿನ್ ಉತ್ಪಾದಿಸುತ್ತಿರುವುದು ಹೆಮ್ಮೆ ತಂದಿದೆ ಎಂದು ಸಂತಸ ವ್ಯಕ್ತಪಡಿಸಿದರು.

basavaraj bommai 6

ಎಚ್‌ಎಎಲ್ ವಿಜ್ಞಾನಿಗಳಿಗೆ ಇದರ ಯಶಸ್ಸು ಸಲ್ಲಲಿದೆ. ಬೆಂಗಳೂರು ಭಾರತ ಬಾಹ್ಯಾಕಾಶ ನಗರ ಅಂದರೆ ತಪ್ಪಿಲ್ಲ. 25% ಏರೋಸ್ಪೇಸ್ ಬಿಡಿಭಾಗಗಳು ಬೆಂಗಳೂರಿನಲ್ಲಿ ಉತ್ಪಾದಿಸಲಾಗುತ್ತದೆ. ಮುಂದಿನ ದಿನಗಳಲ್ಲಿ ಇಸ್ರೋದಿಂದ ಹೈಬ್ರಿಡ್ ಇಂಜಿನ್ ಉತ್ಪಾದಿಸುವ ಗುರಿ ಇಟ್ಟುಕೊಂಡಿದೆ. ಹೈಬ್ರಿಡ್ ಇಂಜಿನ್ ಅನ್ನು ಬೆಂಗಳೂರಿನಲ್ಲೇ ಉತ್ಪಾದಿಸುವ ನಿರೀಕ್ಷೆ ಇಟ್ಟುಕೊಂಡಿದ್ದೇವೆ ಎಂದರು.

ಕೋವಿಡ್ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ 200 ಆರ್‌ಟಿಪಿಸಿಆರ್ ಲ್ಯಾಬ್ ತೆರೆಯಲಾಗಿದೆ. ರಾಜ್ಯದಲ್ಲಿ ಆರ್ ಅಂಡ್ ಡಿ ನೀತಿ ಜಾರಿಗೊಳಿಸಲಾಗಿದೆ. ರಕ್ಷಣಾ ಸಂಶೋಧನೆಗೆ ಈ ನೀತಿ ಪೂರಕವಾಗಲಿದೆ ಎಂದು ತಿಳಿಸಿದರು. ಇದನ್ನೂ ಓದಿ: SIMI ಸಂಘಟನೆ ಹುಟ್ಟಿಕೊಂಡಿದ್ದೇ ವಿಜಯಪುರದಿಂದ: ಯತ್ನಾಳ್

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *