ಕರಾವಳಿಯಲ್ಲಿ ಕಂಬಳ ಶುರು ಮಾಡಲು ಸಜ್ಜಾಗ್ತಿದೆ ವೇದಿಕೆ

Public TV
1 Min Read
KAMBALA

ಮಂಗಳೂರು: ಕರಾವಳಿಯ ಜಾನಪದ ಕ್ರೀಡೆ ಕಂಬಳಕ್ಕೆ ಅತ್ತ ರಾಷ್ಟ್ರಪತಿ ಅಂಕಿತ ಸಿಗುತ್ತಿದ್ದಂತೆಯೇ ಈ ಋತುವಿನ ಮೊದಲ ಕಂಬಳಕ್ಕೆ ಸಿದ್ಧತೆ ನಡೆದಿದೆ.

ನವೆಂಬರ್ 11 ಮತ್ತು 12 ರಂದು ಮೂಡುಬಿದಿರೆಯ ಕಡಲಕೆರೆ ನಿಸರ್ಗಧಾಮದಲ್ಲಿ ಕೋಟಿ ಚೆನ್ನಯ್ಯ ಜೋಡುಕರೆ ಕಂಬಳ ನಡೆಯಲಿದ್ದು ಕರೆ ನಿರ್ಮಾಣದ ಕೆಲಸ ಪ್ರಗತಿಯಲ್ಲಿದೆ.

ಶಾಸಕ ಅಭಯಚಂದ್ರ ಜೈನ್ ನೇತೃತ್ವದಲ್ಲಿ ಈ ಕಂಬಳ ನಡೆಯಲಿದ್ದು ಕಂಬಳದ ವಿಚಾರ ಕೋರ್ಟ್ ಮೆಟ್ಟಿಲೇರಿದ ಎರಡು ವರ್ಷದ ಬಳಿಕ ಅಧಿಕೃತವಾಗಿ ನಡೆಯುತ್ತಿದೆ. ಇದೇ ವೇಳೆ, ರಾಜ್ಯ ಸರಕಾರ ಕಂಬಳದ ಕುರಿತು ಹೊರಡಿಸಿದ್ದ ಸುಗ್ರೀವಾಜ್ಞೆಗೆ ರಾಷ್ಟ್ರಪತಿ ಅಂಕಿತವೂ ಲಭಿಸಿದ್ದು ಕಂಬಳ ಪ್ರಿಯರಿಗೆ ವರದಾನವಾಗಿ ಪರಿಣಮಿಸಿದೆ. ಈ ಬಾರಿ ದಕ್ಷಿಣ ಕನ್ನಡ ಜಿಲ್ಲಾ ಕಂಬಳ ಸಮಿತಿಯಿಂದ ಕಂಬಳದ ವೇಳಾಪಟ್ಟಿ ನಿಗದಿಯಾಗಿದ್ದು ಪ್ರತಿ ಶನಿವಾರ ಕಂಬಳ ನಡೆಯುತ್ತೆ ಎಂಬುದಾಗಿ ತಿಳಿದುಬಂದಿದೆ.

vlcsnap 2017 11 10 07h26m50s83

vlcsnap 2017 11 10 07h27m03s229 Copy

ABHAYACHANDRA JAIN

vlcsnap 2017 11 10 07h27m12s18

vlcsnap 2017 11 10 07h27m18s120

vlcsnap 2017 11 10 07h27m22s162

vlcsnap 2017 11 10 07h27m45s132

vlcsnap 2017 11 10 07h27m51s198

vlcsnap 2017 11 10 07h28m00s25

vlcsnap 2017 11 10 07h30m15s92

 

Share This Article
Leave a Comment

Leave a Reply

Your email address will not be published. Required fields are marked *