ದಾವಣಗೆರೆ: ಸಾಕು ನಾಯಿಗಳ ಜಗಳಕ್ಕೆ ಎರಡು ಕುಟುಂಬದ ನಡುವೆ ಗಲಾಟೆಯಾಗಿ ಗರ್ಭಿಣಿಯ ಮೇಲೆ ಹಲ್ಲೆ ಮಾಡಿದ ಘಟನೆ ದಾವಣಗೆರೆ ತಾಲೂಕಿನ ಪಾಮೇನಹಳ್ಳಿ ಗ್ರಾಮದಲ್ಲಿ ನಡೆದಿದೆ.
ತಿಮ್ಮವ್ವ ಮತ್ತು ಅದೇ ಗ್ರಾಮದ ನಂಜುಡಪ್ಪ ಎಂಬುವರ ನಾಯಿಗಳು ಜಗಳ ಆಡ್ತಾ ಇದ್ವು. ಈ ಸಂದರ್ಭದಲ್ಲಿ ತಿಮ್ಮವ್ವ ಅವರ ನಾಯಿಗೆ ನಂಜುಂಡಪ್ಪ ಕಲ್ಲಿನಿಂದ ಹೊಡೆದಿದ್ದಾರೆ. ಇದರಿಂದ ಸಿಟ್ಟಿಗೆದ್ದ ತಿಮ್ಮವ್ವ ನಮ್ಮ ನಾಯಿಗೆ ಯಾಕೆ ಹೊಡೀತೀಯ ಎಂದು ಜಗಳಕ್ಕೆ ನಿಂತಿದ್ದಾರೆ. ಅಕ್ರೋಶಗೊಂಡ ನಂಜುಂಡಪ್ಪ ಹಾಗೂ ಅತನ ಸಂಬಂಧಿಕರು ಗರ್ಭಿಣಿ ಕವಿತಾ ಮತ್ತು ಆಕೆಯ ತಾಯಿ ಮೇಲೆ ಹಲ್ಲೆ ನಡೆಸಿದ್ದಾರೆ.
ಹಲ್ಲೆಯಿಂದ ಚರಂಡಿಗೆ ಬಿದ್ದ 8 ತಿಂಗಳ ಗರ್ಭಿಣಿ ಕವಿತ ಅವರ ಹೊಟ್ಟೆಗೆ ಪೆಟ್ಟು ಬಿದ್ದಿದೆ. ಇದರಿಂದ ಹೊಟ್ಟೆಯಲ್ಲಿದ್ದ ಮಗು ಸಾವನ್ನಪ್ಪಿದೆ. ಕೂಡಲೇ ಅಲ್ಲಿದ್ದ ಕವಿತ ಸಂಬಂಧಿಕರು ಜಿಲ್ಲಾಸ್ಪತ್ರೆಗೆ ದಾಖಲು ಮಾಡಿದ್ದಾರೆ. ಅಲ್ಲದೇ ಮಗುವನ್ನು ಕಳೆದುಕೊಂಡ ತಾಯಿ ಅಕ್ರಂದನ ಮುಗಿಲು ಮುಟ್ಟುವಂತಿತ್ತು.
ದಾವಣಗೆರೆ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಹಲ್ಲೆ ನಡೆಸಿದವರ ಮೇಲೆ ಕವಿತ ಕುಟುಂಬಸ್ಥರು ದೂರು ನೀಡಲು ಮುಂದಾಗಿದ್ದಾರೆ.