ಮುಖ್ಯಮಂತ್ರಿಗಳೇ ಗೂಂಡಾಗಳನ್ನ ನಮ್ಮ ಮನೆಗೆ ಕಳುಹಿಸಿದ್ದು: ಪ್ರೀತಂ ಗೌಡ

Public TV
1 Min Read
preet5ham gowda

ಹಾಸನ: ಜೆಡಿಎಸ್‍ನ ಗೂಂಡಾ ಕಾರ್ಯಕರ್ತರನ್ನು ಕಲ್ಲು ತೂರಾಟ ನಡೆಸಿ, ಗಲಾಟೆ ಮಾಡುವಂತೆ ಸಿಎಂ ಕುಮಾರಸ್ವಾಮಿಯವರೇ ಕಳುಹಿಸಿದ್ದಾರೆ ಎಂದು ಶಾಸಕ ಪ್ರೀತಂ ಗೌಡ ಆರೋಪಿಸಿದ್ದಾರೆ.

ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಾನು ಸದನಕ್ಕೆ ತೆರಳಿದ್ದ ವೇಳೆ ನಮ್ಮ ಮನೆಯ ಮೇಲೆ ಜೆಡಿಎಸ್ ಕಾರ್ಯಕರ್ತರು ಕಲ್ಲು ತೂರಾಟ ನಡೆಸಿದ್ದಾರೆ. ಅಲ್ಲದೆ ನನ್ನನ್ನು ಹುಡುಕಿ ಸಾಯಿಸುವಂತೆ ಸಿಎಂ ಅವರೇ ಹೇಳಿದ್ದಾರೆ ಎಂದು ಗಲಾಟೆ ನಡೆಸಿದ ಕಾರ್ಯಕರ್ತರು ಬಾಯಿಬಿಟ್ಟಿದ್ದಾರೆ. ನೀವು ಪ್ರೀತಂ ಗೌಡನಿಗೆ ಏನಾದರೂ ಮಾಡಿ ನಾವು ನಿಮ್ಮೊಂದಿಗೆ ಇದ್ದೇವೆ ಎಂದು ಸಿಎಂ ಹಾಗೂ ಸಚಿವ ರೇವಣ್ಣ ಆಜ್ಞೆ ನೀಡಿದ್ದಾರೆ ಅಂತ ಗೂಂಡಾ ಕಾರ್ಯಕರ್ತರು ತಿಳಿಸಿದ್ದಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಸಿಎಂ ಎಚ್‍ಡಿಕೆ, ರೇವಣ್ಣ ಗೂಂಡಾ ಪ್ರವೃತ್ತಿಗೆ ಜಗ್ಗಲ್ಲ – ಕೇಂದ್ರದ ಗಮನಕ್ಕೆ ತರುತ್ತೇವೆ: ಬಿಎಸ್‍ವೈ

preetham gowda 875

ಅಷ್ಟೇ ಅಲ್ಲದೆ ನಾನು ಇಲ್ಲದ ಹೊತ್ತಿನಲ್ಲಿ ಜೆಡಿಎಸ್ ಕಾರ್ಯಕರ್ತರು ಮನೆಗೆ ನುಗ್ಗಿ ಕುಟುಂಬಸ್ಥರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ಕೊಲೆ ಮಾಡಲು ಯತ್ನಿಸಿದ್ದಾರೆ. ಈ ವೇಳೆ ನನ್ನ ತಂದೆ ತಾಯಿಯನ್ನು ರಕ್ಷಿಸಲು ಬಂದ ನಮ್ಮ ಪಕ್ಷದ ಕಾರ್ಯಕರ್ತನ ಮೇಲೆ ಕಲ್ಲೂ ತೂರಾಟ ಮಾಡಿದ್ದಾರೆ. ರಕ್ತ ಬರುವ ರೀತಿ ಹಲ್ಲೆ ಮಾಡಿದ್ದಾರೆ. ಇಂತಹ ಗೂಂಡಾ ಪ್ರವೃತ್ತಿಗೆ ನಾನೇನಾದರೂ ಹೆದರುತ್ತೇನೆ ಎಂದು ಅವರು ತಿಳಿದಿದ್ದರೆ ಅದು ಅವರ ಭ್ರಮೆ. ಈ ಪರಿಸ್ಥಿತಿಯನ್ನು ಎದುರಿಸಲು ದೈವ ಶಕ್ತಿ ಹಾಗೂ ಬಿಜೆಪಿ ಪಕ್ಷದ ಬೆಂಬಲ ನನ್ನೊಂದಿಗೆ ಇದೆ. ಇದನ್ನು ನಾನು ಎದುರಿಸುತ್ತೇನೆ ಎಂದು ತಮ್ಮ ವಿರುದ್ಧ ಇರುವವರಿಗೆ ತಿರುಗೇಟು ನೀಡಿದ್ದಾರೆ.

https://www.youtube.com/watch?v=fBzOcNm06cE

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *