Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ನಾಗ ಸಾಧುಗಳು ಯಾರು? ನೇಮಕಾತಿ ಹೇಗೆ ನಡೆಯುತ್ತೆ? ದೀಕ್ಷೆ ಪೂರ್ಣಗೊಳ್ಳುವುದು ಯಾವಾಗ?
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Latest | ನಾಗ ಸಾಧುಗಳು ಯಾರು? ನೇಮಕಾತಿ ಹೇಗೆ ನಡೆಯುತ್ತೆ? ದೀಕ್ಷೆ ಪೂರ್ಣಗೊಳ್ಳುವುದು ಯಾವಾಗ?

Latest

ನಾಗ ಸಾಧುಗಳು ಯಾರು? ನೇಮಕಾತಿ ಹೇಗೆ ನಡೆಯುತ್ತೆ? ದೀಕ್ಷೆ ಪೂರ್ಣಗೊಳ್ಳುವುದು ಯಾವಾಗ?

Public TV
Last updated: January 19, 2025 12:22 pm
Public TV
Share
3 Min Read
Naga Sadhus 4
SHARE

ಪ್ರಯಾಗರಾಜ್: ಮಹಾ ಕುಂಭಮೇಳದಲ್ಲಿ (Maha Kumbh Mela) ನಾಗ ಸಾಧುಗಳ (Naga Sadhus) ದೀಕ್ಷೆಗಾಗಿ ಅಭ್ಯರ್ಥಿಗಳ ವಿಶಿಷ್ಟ ನೇಮಕಾತಿ ಪ್ರಕ್ರಿಯೆ ಪ್ರಾರಂಭವಾಗಿದೆ.

ಸನಾತನ ಧರ್ಮಕ್ಕಾಗಿ ಎಲ್ಲವನ್ನೂ ತ್ಯಾಗ ಮಾಡುವ ಉದ್ದೇಶದಿಂದ ವಿವಿಧ ಅಖಾರಗಳಲ್ಲಿ ನಾಗಗಳು ಸಿದ್ಧರಾಗಿರುವ ಸಾವಿರಾರು ಯುವ ಸನ್ಯಾಸಿಗಳು ಈಗಾಗಲೇ ಅರ್ಜಿ ಸಲ್ಲಿಸಿದ್ದು ಅಖಾರಗಳು ಈಗಾಗಲೇ ನೇಮಕಾತಿ ಪ್ರಕ್ರಿಯೆಯನ್ನು ಆರಂಭಿಸಿವೆ.

ನಾಗಗಳು ಅಂದರೆ ಯಾರು?
‘ನಾಗ’ ಎಂಬ ಪದವು ಪ್ರಾಚೀನ ಕಾಲದಲ್ಲಿ ಭಾರತದ ಕಾಡುಗಳು ಮತ್ತು ಬೆಟ್ಟಗಳಲ್ಲಿ ಅಲೆದಾಡುತ್ತಿದ್ದ ಹಾವಿನ ಆರಾಧಕರ ಪ್ರಾಚೀನ ಬುಡಕಟ್ಟು ಜನಾಂಗವನ್ನು ಸೂಚಿಸುತ್ತದೆ. ನಾಗ ಸಾಧುಗಳು ಶಿವನೇ (Shiva) ದೇವರೆಂದು ನಂಬುತ್ತಾರೆ.

ನಾಗಾ ಸಾಧುಗಳಾಗುವ ಮೊದಲ ಹೆಜ್ಜೆ ಯಾವುದೆಂದರೆ ಮಾರ್ಗದರ್ಶನ ಮಾಡುವ ಗುರುವನ್ನು ಹುಡುಕಬೇಕಾಗುತ್ತದೆ. ಗುರು ಸಿಕ್ಕಿದ ಬಳಿಕ ಕಠಿಣ ತರಬೇತಿ ಮತ್ತು ಶಿಸ್ತಿನ ಅವಧಿಗೆ ಒಳಗಾಗಬೇಕಾಗುತ್ತದೆ. ಇದರಲ್ಲಿ ಧ್ಯಾನ, ಯೋಗ ಮತ್ತು ಇತರ ಆಧ್ಯಾತ್ಮಿಕ ಅಭ್ಯಾಸಗಳು ಸೇರಿವೆ. ಕಟ್ಟುನಿಟ್ಟಾದ ಬ್ರಹ್ಮಚರ್ಯ ನಿಯಮಗಳನ್ನು ಪಾಲಿಸಬೇಕು ಮತ್ತು ಲೌಕಿಕ ಸುಖಗಳಿಂದ ದೂರವಿರಬೇಕಾಗುತ್ತದೆ.

Naga Sadhus 1

ರಹಸ್ಯ ಸಂದರ್ಶನ:
ಅಖಾರ ಸೇರಲು ನೋಂದಣಿ ಫಾರಂ ನೀಡಲಾಗುತ್ತದೆ. ನಾಗ ಸಾಧುಗಳಾಲು ಇಚ್ಛಿಸಿದ ವ್ಯಕ್ತಿಗಳನ್ನು ರಹಸ್ಯವಾಗಿ ಸಂದರ್ಶಿಸಲಾಗುತ್ತಿದೆ. ಜುನಾ, ಶ್ರೀ ನಿರಂಜನಿ, ಶ್ರೀ ಮಹಾನಿರ್ವಾಣಿ, ಆವಾಹನ್, ಅಟಲ್ ಮತ್ತು ಆನಂದ್ ಅಖಾರಗಳಲ್ಲಿನ ಎಲ್ಲಾ ಮಾನದಂಡಗಳನ್ನು ಪೂರೈಸಿದವರನ್ನು ನಾಗ ಸನ್ಯಾಸದ ದೀಕ್ಷೆ ನೀಡಲಾಗುತ್ತದೆ. ಇದನ್ನೂ ಓದಿ: ನನ್ನ ಹಲವು ಪ್ರಶ್ನೆಗಳಿಗೆ ಸನಾತನ ಧರ್ಮದಲ್ಲಿ ಉತ್ತರ ಸಿಕ್ಕಿತು – ಕುಂಭಮೇಳದಲ್ಲಿ ಆಫ್ರಿಕಾದ ಸಾಧು

Naga Sadhus 3

ಪಿಂಡ ಪ್ರದಾನ ಮಾಡುತ್ತಾರೆ ಯಾಕೆ?
ನಾಗ ಸಾಧುಗಳ ದೀಕ್ಷೆ ಪಡೆಯುತ್ತಿರುವ ಮೊದಲ ಬ್ಯಾಚ್‌ ಸದಸ್ಯರಿಗೆ ಗಂಗಾ ನದಿಯ ದಡದಲ್ಲಿ ಆಚರಣೆಯನ್ನು ನಡೆಸಲಾಗಿದೆ. ಪ್ರತಿ ಅಖಾರದಲ್ಲಿ ವಿಭಿನ್ನ ದಿನಗಳಲ್ಲಿ ದೀಕ್ಷೆ ಪ್ರಕ್ರಿಯೆಯನ್ನು ಕೈಗೊಳ್ಳಲಾಗುತ್ತದೆ. ಶನಿವಾರ ಜುನಾ ಅಖಾರದಲ್ಲಿ ಸನ್ಯಾಸಿಗಳಿಗೆ ಕೇಶ ಮುಂಡನ ಮಾಡಲಾಗಿದೆ. ಈ ಸನ್ಯಾಸಿಗಳು ತಮ್ಮ ಪಿಂಡ ಪ್ರದಾನ ಮಾಡಬೇಕಾಗುತ್ತದೆ. ಹಿಂದೂ ಧರ್ಮದದಲ್ಲಿ ತಮ್ಮ ಮನೆಯವರು, ಕುಟುಂಬಸ್ಥರು ಅಗಲಿದಾಗ ಅವರಿಗೆ ಗೌರವ ಸಲ್ಲಿಸುವ ಪರಿಯನ್ನು ಪಿಂಡ ಪ್ರದಾನ ಎನ್ನಲಾಗುತ್ತದೆ. ಆದರೆ ನಾಗಗಳಾದವರು ಜೀವಂತವಾಗಿದ್ದರೂ, ಭೌತಿಕ ಪ್ರಪಂಚದೊಂದಿನ ಸಂಬಂಧವನ್ನು ಕಡಿತಗೊಳಿಸಬೇಕಾಗುತ್ತದೆ. ಸಂಬಂಧ ಕಡಿತಗೊಳಿಸುವ ಸಲುವಾಗಿ ತಮ್ಮ ಪಿಂಡವನ್ನೇ ಪ್ರದಾನ ಮಾಡುತ್ತಾರೆ.

ನಾಗಾದೀಕ್ಷೆ ಪೂರ್ಣಗೊಳ್ಳುವುದು ಯಾವಾಗ?
ಕೇಶ ಮುಂಡನ ಮತ್ತು ಪಿಂಡ ದಾನದ ನಂತರ ಮೌನಿ ಅಮಾವಾಸ್ಯೆಯ ಅಮೃತ ಸ್ನಾನ ಹಬ್ಬದ ರಾತ್ರಿ ನಾಗ ಸಾಧುವಾಗಲು ಸಂಪೂರ್ಣ ದೀಕ್ಷೆಯನ್ನು ನಡೆಸಲಾಗುತ್ತದೆ. ಎಲ್ಲಾ ಅಭ್ಯರ್ಥಿಗಳು ಧರ್ಮದ ಧ್ವಜದ ಅಡಿಯಲ್ಲಿ ವಿವಸ್ತ್ರವಾಗಿ ನಿಲ್ಲುತ್ತಾರೆ. ಆಚಾರ್ಯ ಮಹಾಮಂಡಲೇಶ್ವರರು ಅವರನ್ನು ವಿಧಿವಿಧಾನಗಳೊಂದಿಗೆ ನಾಗರಾಗಲು ದೀಕ್ಷೆ ನೀಡುತ್ತಾರೆ. ಸಭಾಪತಿ (ಸಮಾರಂಭದ ಅಧ್ಯಕ್ಷತೆ ವಹಿಸುವ ವ್ಯಕ್ತಿ) ಅವರಿಗೆ ಅಖಾರದ ನಿಯಮಗಳು ಮತ್ತು ನಿಯಮಗಳ ಬಗ್ಗೆ ತಿಳಿಸುತ್ತಾರೆ ಮತ್ತು ಪ್ರತಿಜ್ಞೆಯನ್ನು ಬೋಧಿಸುತ್ತಾರೆ. ಪ್ರಕ್ರಿಯೆ ಪೂರ್ಣಗೊಂಡ ನಂತರ ಎಲ್ಲರನ್ನೂ ಅಮೃತ ಸ್ನಾನಕ್ಕೆ ಕಳುಹಿಸಲಾಗುತ್ತದೆ. ಅಮೃತ ಸ್ನಾನದ ರಾತ್ರಿಯಂದು ಇವರ ನಾಗಾದೀಕ್ಷೆ ಪೂರ್ಣಗೊಳ್ಳುತ್ತದೆ. ಇದನ್ನೂ ಓದಿ: ಕುಂಭಮೇಳದಲ್ಲಿ 7 ಅಡಿ ಎತ್ತರದ ರಷ್ಯಾದ ಬಾಬಾ – ‘ಪರಶುರಾಮನ ಅವತಾರ’ ಎಂದ ಭಕ್ತರು

Naga Sadhus 2

ಮೂರು ಹಂತಗಳಲ್ಲಿ ಪರಿಶೀಲನೆ:
ಜುನಾ ಅಖಾರದಲ್ಲಿ ಸುಮಾರು 2,000 ಜನರಿಗೆ ನಾಗ ಸನ್ಯಾಸಕ್ಕೆ ದೀಕ್ಷೆ ನೀಡಿದರೆ ಶ್ರೀ ನಿರಂಜನಿ ಅಖಾರದಲ್ಲಿ ಸುಮಾರು 1,100 ಮಂದಿಯನ್ನು ನಾಗಾ ಸನ್ಯಾಸಿಗಳನ್ನಾಗಿ ಮಾಡಲಾಗುತ್ತದೆ. ಅದೇ ರೀತಿಯಾಗಿ ಶ್ರೀ ಮಹಾನಿರ್ವಾಣಿ, ಅಟಲ್, ಆನಂದ್ ಮತ್ತು ಆವಾಹನ ಅಖಾರಗಳಲ್ಲಿ ಈ ಪ್ರಕ್ರಿಯೆ ಪ್ರಾರಂಭವಾಗಿದೆ.

ಅರ್ಜಿದಾರರನ್ನು ಮೂರು ಹಂತಗಳಲ್ಲಿ ಸಂಪೂರ್ಣವಾಗಿ ಅವರ ವಿವರವನ್ನು ಪರಿಶೀಲಿಸಲಾಗುತ್ತದೆ. ಈ ಪರಿಶೀಲನಾ ಪ್ರಕ್ರಿಯೆ ಆರು ತಿಂಗಳ ಮೊದಲೇ ಆರಂಭವಾಗುತ್ತದೆ. ಅಖಾರದ ಠಾಣಾಪತಿ ಅಷ್ಟಕೋಶಲ್ ಮಹಂತ್, ಅಭ್ಯರ್ಥಿಯ ವಿವರ ಮತ್ತು ಆತನ ಚಟುವಟಿಕೆಗಳನ್ನು ಸಂಪೂರ್ಣವಾಗಿ ಪರಿಶೀಲನೆ ನಡೆಸುತ್ತಾರೆ. ಪರಿಶೀಲನೆ ನಡೆಸಿದ ಬಳಿಕ ವರದಿಯನ್ನು ಅಖಾರದ ಆಚಾರ್ಯ ಮಹಾಮಂಡಲೇಶ್ವರರಿಗೆ ನೀಡಲಾಗುತ್ತದೆ. ಆಚಾರ್ಯ ಮಹಾಮಂಡಲೇಶ್ವರರು ಅಖಾರದ ಪಂಚರಿಂದ ಮತ್ತೆ ಪರಿಶೀಲನೆ ನಡೆಸುತ್ತಾರೆ.

ಅರ್ಜಿಗಳ ಪರಿಶೀಲನೆಯ ಸಮಯದಲ್ಲಿ ಜುನಾ ಅಖಾರ 53 ಮಂದಿಯನ್ನು ಮತ್ತು ನಿರಂಜನಿ ಅಖಾರ 22 ಜನರನ್ನು ಅನರ್ಹಗೊಳಿಸಿದೆ.

TAGGED:maha kumbh melaNaga SadhuSadhuuttar pradeshಉತ್ತರ ಪ್ರದೇಶನಾಗ ಸಾಧುಪ್ರಯಾಗ್ರಾಜ್ಮಹಾ ಕುಂಭಮೇಳ
Share This Article
Facebook Whatsapp Whatsapp Telegram

Cinema news

Yash Radhika
ನನ್ನೆಲ್ಲ ಪ್ರಶ್ನೆಗೂ ನೀನೇ ಉತ್ತರ – ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿ ರಾಕಿಂಗ್‌ ಜೋಡಿ
Cinema Latest Sandalwood Top Stories
Rajinikanth Padayappa 2
ಪಡೆಯಪ್ಪ ಪಾರ್ಟ್-2 ಬಗ್ಗೆ ತಲೈವಾ ಹೇಳಿದ್ದೇನು?
Cinema Latest Top Stories
V. Shantaram Biopic Tamannaah Bhatia
ನಟಿ ಜಯಶ್ರೀಯಾದ ತಮನ್ನಾ ಭಾಟಿಯಾ
Cinema Latest Top Stories
Toxic teaser yash
ಟಾಕ್ಸಿಕ್‌ ಬಿಡುಗಡೆಯಾಗುವ ಸಮಯದಲ್ಲೇ ಬರಲಿದೆ ಐದು ಬಿಗ್‌ ಬಜೆಟ್‌ ಸಿನಿಮಾಗಳು!
Cinema Latest Sandalwood

You Might Also Like

Fire in maize pile crop damage worth lakhs of rupees
Districts

ಮೆಕ್ಕೆಜೋಳದ ರಾಶಿಗೆ ಬೆಂಕಿ – ಲಕ್ಷಾಂತರ ರೂ. ಬೆಳೆ ಹಾನಿ

Public TV
By Public TV
14 minutes ago
New Year
Bengaluru City

ಬೆಂಗಳೂರಿನಲ್ಲಿ ಹೊಸ ವರ್ಷಕ್ಕೆ ಟೈಟ್ ರೂಲ್ಸ್ – ಗೈಡ್‌ಲೈನ್ಸ್ ಬಿಡುಗಡೆ

Public TV
By Public TV
28 minutes ago
BJP MP Nishikant Dubey
Latest

ಮತಕಳ್ಳತನ ಮಾಡಿದ್ದು ಇಂದಿರಾ ಗಾಂಧಿ, ಚುನಾವಣಾ ಆಯುಕ್ತರಿಗೆ ಕಾಂಗ್ರೆಸ್‌ನಿಂದ ರಾಜ್ಯಪಾಲ ಹುದ್ದೆ: ನಿಶಿಕಾಂತ್‌ ದುಬೆ

Public TV
By Public TV
1 hour ago
Vijayapura Office
Districts

ರಾ.ಹೆದ್ದಾರಿ ಅಗಲೀಕರಣಕ್ಕಾಗಿ ಜಮೀನು ವಶಕ್ಕೆ ಪಡೆದು ಅನ್ಯಾಯ – 3 ವರ್ಷ ಕಳೆದ್ರೂ ಪರಿಹಾರ ನೀಡದ್ದಕ್ಕೆ ಎಸಿ ಕಚೇರಿ ಜಪ್ತಿ

Public TV
By Public TV
2 hours ago
Mantralaya Hundi Counting
Districts

ಕೋಟಿ ಒಡೆಯರಾದ ರಾಯರು – 21 ದಿನದಲ್ಲಿ 3.06 ಕೋಟಿ ಕಾಣಿಕೆ ಸಂಗ್ರಹ

Public TV
By Public TV
3 hours ago
Manish Tewari
Latest

ಲೋಕಸಭೆಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಬಗ್ಗೆ ಚರ್ಚೆ – ಬ್ಯಾಲೆಟ್ ಪೇಪರ್ ವ್ಯವಸ್ಥೆಗೆ ಮರಳಲು ವಿಪಕ್ಷಗಳ ಪಟ್ಟು

Public TV
By Public TV
3 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?