ಬೆಂಗಳೂರು: ನಾವೇ ಪರಿಶ್ರಮ ಹಾಕಿದ ಬಿಜೆಪಿ ಪಕ್ಷ ದಾರಿ ತಪ್ಪಿದೆ. ಕುಡುಕ ಗಂಡನ ಮದುವೆಯಾಗಿದ್ದೇವೆ. ಡಿವೋರ್ಸ್ ಕೊಡೋಕೆ ಆಗ್ತಿಲ್ಲ ಎಂದು ಶ್ರೀರಾಮಸೇನೆಯ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.
ನಗರದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕುಡುಕ ಗಂಡನ ಜೊತೆ ನಾವು ಸುಧಾರಿಸಿಕೊಂಡು ಹೋಗಲು ಸಾಧ್ಯವಾ ಅಂತಾ ನೋಡ್ತೀವಿ. ಎಸ್ಡಿಪಿಐ ಬ್ಯಾನ್ ಇನ್ನೂ ಮಾಡಿಲ್ಲ. ಗೋ ಹತ್ಯೆ ನಿಷೇಧ ಕಾಯ್ದೆ ಇನ್ನೂ ಆಗಿಲ್ಲ. ನಾವು ಲಿಸ್ಟ್ ಕೊಡ್ತೀವಿ. ಅವರಿಗೆ ಸೀಟು ಕೊಡಿ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಕೆಂಪಣ್ಣನನ್ನು ಮೆಂಟಲ್ ಆಸ್ಪತ್ರೆಗೆ ಸೇರಿಸಿ ಚೆಕ್ ಮಾಡಿಸಬೇಕು: ಬಿ.ಸಿ. ಪಾಟೀಲ್
ಬಿಜೆಪಿಯನ್ನು ನಾವೇ ಬೆಳೆಸಿದ್ದು, ಕಾರ್ಯಕರ್ತರು ಅಂದ್ರೆ ಪೋಸ್ಟರ್ ಹಾಕೋಕೆ ಅಲ್ಲ. ನಿಮ್ಮ ಮಕ್ಕಳನ್ನು ನೋಡಿಕೊಳ್ಳೋಕೆ. ಭ್ರಷ್ಟಾಚಾರದ ಹಾದಿಯತ್ತ ಬಿಜೆಪಿ ಹೋಗಿದೆ. ನಾವು ಬಿಜೆಪಿಯವರನ್ನು ದಾರಿಗೆ ತರುತ್ತೇವೆ. ನಾನು ಎಲೆಕ್ಷನ್ಗೆ ನಿಲ್ಲಲ್ಲ. ಈಗಾಗಲೇ ಇದನ್ನು ಹೇಳಿದ್ದೇನೆ ಎಂದು ಮುತಾಲಿಕ್ ಸ್ಪಷ್ಟಪಡಿಸಿದರು.