ದಾವಣಗೆರೆ: ಪ್ರಸಿದ್ದ ದಾವಣಗೆರೆಯ ದುಗ್ಗಮ್ಮ ಜಾತ್ರೆಗೆ ತಂದ ಕುರಿಯನ್ನು ಮುಸ್ಲಿಂ ಸಂಪ್ರದಾಯದಂತೆ ಹಲಾಲ್ ಮಾಡುವ ವ್ಯವಸ್ಥೆ ಕೈ ಬಿಡಬೇಕು. ನಮ್ಮ ಹಿಂದು ಧರ್ಮ ಪದ್ದತಿಯಂತೆ ಕಡಿಯಿರಿ ತಿನ್ನಿರಿ ಎಂದು ಶ್ರೀರಾಮ ಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಈ ವಿಚಾರ ಹಂಚಿಕೊಂಡಿರುವ ಅವರು, ದಾವಣಗೆರೆಯಲ್ಲಿ ಅದ್ಧೂರಿಯಾಗಿ ದುಗ್ಗಮ್ಮನ ಜಾತ್ರೆ ನಡೆಯುತ್ತಿದ್ದು, ಕುರಿಗಳನ್ನು ಮುಸ್ಲಿರಿಂದ ಹಲಾಲ್ ಮಾಡಿಸಲಾಗುತ್ತಿದೆ. ಇದು ಹಿಂದು ಧರ್ಮಕ್ಕೆ ಅಪಪ್ರಚಾರ ಮಾಡಿದಂತೆ, ತಾಯಿ ದುಗ್ಗಮ್ಮನಿಗೆ ಅವಮಾನ ಮಾಡಿದಂತೆ, ಗೋ ಹಂತಕ ಮುಸ್ಲಿಂರಿಂದ ಹಲಾಲ್ ಮಾಡಿಸುವುದು ಬೇಡ ಎಂದು ಹೇಳಿದ್ದಾರೆ.
ಇನ್ನು ವಿಜೃಂಭಣೆಯಿಂದ ಶಾಂತಿ ರೀತಿಯಲ್ಲಿ ಹಬ್ಬ ಆಚರಿಸಿ. ತಾಯಿ ದುಗ್ಗಮ್ಮ ಎಲ್ಲರಿಗೂ ಒಳ್ಳೆಯದು ಮಾಡಲಿ ಎಂದು ಪ್ರಮೋದ್ ಮುತಾಲಿಕ್ ಶುಭ ಹಾರೈಸಿದ್ದಾರೆ.