ತಿರುವನಂತಪುರಂ: 4 ರಿಂದ 5 ದಿನ ತಿರುಪತಿ ಭೇಟಿಯನ್ನು ಮುಂದೂಡಿ ಎಂದು ಭಕ್ತರಲ್ಲಿ ಟಿಟಿಡಿ ಮನವಿ ಮಾಡಿದೆ.
ವೈಕುಂಠನ ದರ್ಶನ ಪಡೆಯಲು ಭಕ್ತದಿಗಳು 2 ಕಿ.ಮೀ.ವರೆಗೆ ಕ್ಯೂ ನಿಂತಿದ್ದು, 48 ಗಂಟೆಗಳ ಬಳಿಕ ದೇವರ ದರ್ಶನವಾಗಿದೆ. ಈ ಹಿನ್ನೆಲೆ ಟಿಟಿಡಿ ಸಿಬ್ಬಂದಿ ವರ್ಗಕ್ಕೆ ಭಕ್ತರನ್ನು ನಿಯಂತ್ರಣ ಮಾಡುವುದೇ ಹರಸಾಹಸವಾಗಿದೆ. ಇದನ್ನೂ ಓದಿ: ಝೂನಲ್ಲಿ ಹಾಕಿದ ತಕ್ಷಣ ಹುಲಿ ತನ್ನ ಪ್ರವೃತ್ತಿ ಮೆರೆಯಲ್ಲ: ತಂದೆಯನ್ನು ಹೊಗಳಿದ ವಿಜಯೇಂದ್ರ
ತಿರುಪತಿಯ ಲಗೇಜ್ ಕೌಂಟರ್, ಲಡ್ಡು ಕೌಂಟರ್, ಬಸ್ ನಿಲ್ದಾಣ, ಅನ್ನಪ್ರಸಾದ ಕಾಂಪ್ಲೆಕ್ಸ್ನಲ್ಲೂ ಭಕ್ತ ಸಾಗರ ತುಂಬಿ ಹರಿಯುತ್ತಿದೆ. ತಿರುಮಲ ರಸ್ತೆಗಳಲ್ಲೂ ಕಿ.ಮೀಟರ್ಗಟ್ಟಲೇ ಭಕ್ತರು ಕ್ಯೂ ನಿಂತಿದ್ದಾರೆ. ಭಾರೀ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಟಿಟಿಡಿ ತಿರುಪತಿ ಭೇಟಿಯನ್ನು ಮುಂದೂಡಿ ಎಂದು ಮನವಿ ಮಾಡಿಕೊಂಡಿದೆ.