ಬೆಂಗಳೂರು: ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ (Pollution Board) ಪೊಲಿಟಿಕಲ್ ಡ್ರಾಮಾ ನಡೆದಿರುವುದು ಬಯಲಾಗಿದೆ. ಅರ್ಹತೆ ಇಲ್ಲದವರಿಗೆ ಅತ್ಯುನ್ನತ ಹುದ್ದೆ ನೀಡಲಾಗಿದೆ ಎಂದು ಆರೋಪಿಸಿ ಅಧ್ಯಕ್ಷರು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.
ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ ಸೂರಿ ಪಾಯಲ್ ಅನ್ನೋ ಐಟಿ ವ್ಯವಸ್ಥಾಪಕರಿಗೆ ಸದಸ್ಯ ಕಾರ್ಯದರ್ಶಿಯ ಹುದ್ದೆಗೆ ಬಡ್ತಿ ಸಿಕ್ಕಿದೆ. ಹುದ್ದೆಯ ವಿದ್ಯಾರ್ಹತೆಯನ್ನೂ ಮೀರಿ ಸೂರಿ ಪಾಯಲ್ಗೆ 4 ತಿಂಗಳ ಹಿಂದೆ ಸದಸ್ಯ ಕಾರ್ಯದರ್ಶಿ ಹುದ್ದೆ ನೀಡಲಾಗಿದೆ. ಈ ಹಿಂದೆಯೂ ಸೂರಿ ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ ಹುದ್ದೆ ಗಿಟ್ಟಿಸಿಕೊಂಡಿದ್ದ. ಈ ಬಗ್ಗೆ ಪಬ್ಲಿಕ್ ಟಿವಿಯಲ್ಲಿ ವರದಿ ಪ್ರಸಾರವಾದ ಬಳಿಕ ಮಾತಾನಾಡದೇ ಇಡೀ ರಸ್ತೆಯಲ್ಲಿ ಓಡಿ ಹೋಗಿದ್ದ.
ಇದೀಗ ಹೆಚ್ಸಿ ಗಿರೀಶ್ ಅವ್ರ ವರ್ಗಾವಣೆಯ ಬಳಿಕ ಸೂರಿಗೆ ಹುದ್ದೆ ನೀಡಲಾಗಿದೆ. ಸೂರಿ ಪಾಯಲ್ ಅಧಿಕಾರ ವಹಿಸಿಕೊಂಡ ಬಳಿಕ ಅಧ್ಯಕ್ಷರ ಅಧಿಕಾರದಲ್ಲಿಯೂ ಕೈಯಾಡಿಸಿದ್ದನು. ಅಧ್ಯಕ್ಷರ ಅಧಿಕಾರದಲ್ಲಿಯೂ ಮೂಗು ತೂರಿಸಿದ್ರಿಂದ ಶಾಂತ್ ಎ ತಿಮ್ಮಯ್ಯ ಸಿಟ್ಟಿಗೆದ್ದಿದ್ದಾರೆ. ಎಲ್ಲಾ ಫೈಲ್ ಗಳನ್ನು ತಮ್ಮ ಬಳಿಯೇ ಬರಬೇಕು ಅಂತಾ ಸೂರಿ ಸೂಚನೆ ನೀಡಿದ್ದಾನೆಂದು ಆರೋಪಿಸಿ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳಿಗೆ ಅಧ್ಯಕ್ಷರು ಪತ್ರ ಬರೆದಿದ್ದಾರೆ. ಇದನ್ನೂ ಓದಿ: ಲೋಕಸಮರಕ್ಕಾಗಿ BJP- JDS ದೋಸ್ತಿ- NDA ಸಭೆಯಲ್ಲಿ ಭಾಗಿಯಾಗ್ತಾರಾ ಹೆಚ್ಡಿಕೆ?
ಸೂರಿ ಪಾಯಲ್ ಹುದ್ದೆ ರದ್ದುಗೊಳಿಸಿದ ಆದೇಶ ನೀಡಿದ ಅಧ್ಯಕ್ಷರು, ಈಗ ಈ ಸ್ಥಾನಕ್ಕೆ ಬೇರೆ ಅರ್ಹ ಸಿಬ್ಬಂದಿಯನ್ನು ನೇಮಕ ಮಾಡಿ ಅಂತಾ ಸರ್ಕಾರಕ್ಕೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
Web Stories