ರಾಮನಗರ: ಲೋಕಸಭಾ ಚುನಾವಣೆಯಲ್ಲಿ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಸ್ಪರ್ಧೆ ವಿಚಾರ ಕುರಿತು ರಾಮನಗರದಲ್ಲಿ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ (H.D. Kumaraswamy) ಪ್ರತಿಕ್ರಿಯೆ ನೀಡಿದ್ದಾರೆ.
ನಿಖಿಲ್ ಕುಮಾರಸ್ವಾಮಿಗೆ ಬದುಕಲು ಹಲವು ಮಾರ್ಗಗಳಿವೆ. ಭಗವಂತ ಅವರಿಗೇ ಆದ ಒಂದು ಕಲೆ ಕೊಟ್ಟಿದ್ದಾನೆ. ಅವರು ರಾಜಕೀಯದಿಂದಲೇ ಬದುಕಬೇಕಾ? ಅವರಿಗೆ ರಾಜಕೀಯದಿಂದ ಬದುಕುವ ಅವಶ್ಯಕತೆ ಇಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಕಾವೇರಿ, ಮಹದಾಯಿ ವಿಚಾರವಾಗಿ ಆಗಸ್ಟ್ 23ರಂದು ಸರ್ವಪಕ್ಷ ಸಭೆ: ಡಿಕೆಶಿ
ಈಗ ರಾಜಕೀಯಕ್ಕೆ ಲೂಟಿ ಹೊಡೆಯಲು ಬರುವವರೇ ಹೆಚ್ಚು. ಅಂತಹವರಿಗೆ ಜನರು ಮಣೆ ಹಾಕುತ್ತಿದ್ದಾರೆ. ನಿಖಿಲ್ಗೆ ರಾಜಕೀಯ ಬೇಡ ಅಂತ ಹಲವು ಬಾರಿ ಹೇಳಿದ್ದೇನೆ. ನಿಖಿಲ್ ನೆಮ್ಮದಿಯಿಂದ ಜೀವನ ಮಾಡಲಿ, ಕಷ್ಟಪಟ್ಟು ಬದುಕಲಿ. ಲೋಕಸಭಾ ಚುನಾವಣೆಗೆ ನಮ್ಮ ಕುಟುಂಬದಿಂದ ಯಾವುದೇ ಕಾರಣಕ್ಕೂ ನಿಲ್ಲಲ್ಲ ಎಂದು ಹೇಳಿದ್ದಾರೆ.
ಚುನಾವಣಾ ಪೂರ್ವದಲ್ಲಿ ಕಾಂಗ್ರೆಸ್ ಹಂಚಿದ್ದ ಗಿಫ್ಟ್ ಕಾರ್ಡ್ ವಿರುದ್ಧ ಕಾನೂನು ಹೋರಾಟ ನಡೆಸುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ದೇಶದಲ್ಲಿ ಕಾನೂನು ಇದ್ಯಾ? ದುಡ್ಡಿದ್ದವನಿಗೆ ಮಾತ್ರ ಕಾನೂನು. ಬಡವರಿಗೆ ಕಾನೂನು ಇಲ್ಲ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ನಿಖಿಲ್ ಕುಮಾರ್ ಹೊಸ ಚಿತ್ರಕ್ಕೆ ಆ.23ರಂದು ಮುಹೂರ್ತ
ಸರ್ಕಾರ ಬಡವರಿಗೆ ನೋಟಿಫೈ ಮಾಡಿರುವ ಭೂಮಿಯನ್ನ ಯಾರಾದರೂ ಖರೀದಿ ಮಾಡಲು ಸಾಧ್ಯವೇ? ಅದನ್ನ ಎಂಪಿ ರಿಜಿಸ್ಟರ್ ಮಾಡಿಕೊಂಡಿದ್ದಾರೆ. ಅಂತಹವರಿಗೆ ಈ ದೇಶದ ಕಾನೂನು ಇರೋದು. ಅವರಿಗೆ ರಕ್ಷಣೆ ಕೊಡುವುದಕ್ಕೆ ಕಾನೂನು ಇದೆ ಎಂದು ತಿಳಿಸಿದ್ದಾರೆ.
Web Stories