ಉಡುಪಿ: ರಾಜಕೀಯ ಒಂದು ಕಬಡ್ಡಿ ಆಟ. ಅಂಕಣದಲ್ಲಿ ಎಲ್ಲರೂ ಕಾಲು ಎಳೆಯುವವರೇ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಮಾರ್ಮಿಕವಾಗಿ ಮಾತನಾಡಿದರು. ನೂತನ ಬಿಜೆಪಿ ರಾಜ್ಯಾಧ್ಯಕ್ಷರ ಕುಯಿಲಾಡಿ ಸುರೇಶ್ ನಾಯಕ್ ಪದಗ್ರಹಣ ಸಂದರ್ಭ ಮಾತನಾಡಿದರು.
ಅಧಿಕಾರದ ಮದ ತಲೆಗೆ ಹತ್ತಬಾರದು. ಹೆಗಲಲ್ಲಿ ಜವಾಬ್ದಾರಿ ಹೊತ್ತು ಸಾಗಬೇಕು. ಯಡಿಯೂರಪ್ಪ ಸಿಎಂ ಆದ ಕೂಡಲೇ ನನಗೆ ಅಧಿಕಾರ ಕೊಟ್ಟರು. ಅವರು ಕಾಮಧೇನು ಇದ್ದಂತೆ ರಾಜ್ಯದಲ್ಲಿ ಅವರ ಬಳಿ ಬಂದವರಿಗೆ ಇಲ್ಲ ಎಂಬ ಉತ್ತರ ಸಿಗಲ್ಲ ಎಂದರು.
ಕಾಂಗ್ರೆಸ್ ಇನ್ನೂ ರಾಜ್ಯ ಅಧ್ಯಕ್ಷರನ್ನು ನೇಮಿಸಿಲ್ಲ. ಕಾಂಗ್ರೆಸ್ ನಾವೀಕನಿಲ್ಲದ ನೌಕೆಯಾಗಿದೆ. ದೇಶದಲ್ಲಿ ಕಾಂಗ್ರೆಸ್ಸಿನ ದೋಣಿ ಮುಳುಗುತ್ತಿದೆ. ಕಾಂಗ್ರೆಸ್ ಗ್ರಾಮ ಪಂಚಾಯತ್ ಗೆಲ್ಲದ ಪರಿಸ್ಥಿತಿಯಲ್ಲಿದೆ. ಸಿದ್ದರಾಮಯ್ಯ, ಪರಮೇಶ್ವರ್, ಡಿಕೆಶಿ ನಡುವೆ ತಿಕ್ಕಾಟ ಜೋರಾಗಿದೆ. ಒಬ್ಬರಿಗೆ ಅಧಿಕಾರ ಕೊಟ್ಟರೂ ಕಾಂಗ್ರೆಸ್ ಒಡೆದ ಮನೆ ಆಗುತ್ತದೆ. ಯಾರು ಅಧ್ಯಕ್ಷರಾದರೂ ಪಕ್ಷ ಮೂರು ಹೋಳಾಗಿ ಒಡೆಯುತ್ತದೆ ಎಂದರು. ಕಾಂಗ್ರೆಸ್ಸಿನಿಂದ ದೇಶ, ರಾಜ್ಯ ನಡೆಸಲು ಸಾಧ್ಯವಿಲ್ಲ ಎಂದರು.