ಬೆಳಗಾವಿ: ಹೆಲ್ಮೆಟ್ ಹಾಕದ ಕಾರಣಕ್ಕೆ ಟ್ರಾಫಿಕ್ ಡಿವೈಎಸ್ಪಿ ಬೈಕ್ ಸವಾರನನ್ನು ಸಾರ್ವಜನಿಕವಾಗಿ ಥಳಿಸಿ, ಒತ್ತಾಯಪೂರ್ವಕವಾಗಿ ಬಂಧಿಸಿ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ.
ಬೆಳಗಾವಿಯ ಚೆನ್ನಮ್ಮಾ ವೃತ್ತದಲ್ಲಿ ಈ ಘಟನೆ ನಡೆದಿದೆ. ಹೆಲ್ಮೆಟ್ ಹಾಕದ ವಿಚಾರಕ್ಕಾಗಿ ಬೈಕ್ ಸವಾರ ಹಾಗೂ ಟ್ರಾಫಿಕ್ ಪೊಲೀಸರ ನಡುವೆ ವಾಗ್ವಾದ ನಡೆದಿದ್ದು, ಈ ವೇಳೆ ಬೆಳಗಾವಿ ಟ್ರಾಫಿಕ್ ಡಿವೈಎಸ್ಪಿ ರಾಜೇಂದ್ರ ಕಲ್ಯಾಣಶೆಟ್ಟಿ ಸಾರ್ವಜನಿಕವಾಗಿ ಸವಾರನಿಗೆ ಥಳಿಸಿದ್ದಾರೆ. ಅಷ್ಟೇ ಅಲ್ಲದೆ ಒತ್ತಾಯಪೂರ್ವಕವಾಗಿ ಆತನನ್ನು ಬಂಧಿಸಿ ಠಾಣೆಗೆ ಕರೆದುಕೊಂಡ ಹೋಗಿದ್ದಾರೆ. ಇದನ್ನೂ ಓದಿ:ಹೆಲ್ಮೆಟ್ ಧರಿಸದ ಟ್ರ್ಯಾಕ್ಟರ್ ಚಾಲಕನಿಗೆ ಬಿತ್ತು ದಂಡ
ಈ ಹಿಂದೆ ಕೂಡ ಕೆಎಲ್ಇ ಆಸ್ಪತ್ರೆಯ ಬಳಿ ಟ್ರಾಫಿಕ್ ಪೊಲೀಸರು ಬೈಕ್ ಸವಾರರ ಮೇಲೆ ಹಲ್ಲೆ ನಡೆಸಿದ ಘಟನೆ ನಡೆದಿತ್ತು. ಟ್ರಾಫಿಕ್ ಪೊಲೀಸರು ಬೈಕ್ ಸವಾರರ ಮೇಲೆ ಹೀಗೆ ಹಲ್ಲೆ ನಡೆಸಿರುವುದಕ್ಕೆ ಸಾರ್ವಜನಿಕರು ಕಿಡಿಕಾರಿದ್ದಾರೆ. ಟ್ರಾಫಿಕ್ ರೂಲ್ಸ್ ಪಾಲಿಸದಿದ್ದರೆ ದಂಡ ಹಾಕಲಿ. ಹೀಗೆ ರಸ್ತೆಯಲ್ಲಿ ಥಳಿಸುವುದು ಸರಿಯಲ್ಲ ಎಂದು ಸಾರ್ವಜನಿರಕರು ಆಕ್ರೋಶ ಹೊರಹಾಕಿದ್ದಾರೆ.