ಪೊಲೀಸ್ ದಾಳಿ – 470 ಲೀಟರ್ ಮದ್ಯ, ಕಾರ್ ವಶ

Public TV
1 Min Read
KWR ALCOHAL copy

ಕಾರಾವಾರ: ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಬಿಣಗಾ ಘಟ್ಟದಲ್ಲಿ ಅಕ್ರಮವಾಗಿ ಮದ್ಯ ಸಾಗಾಟ ಮಾಡುತ್ತಿದ್ದವರ ಮೇಲೆ ಪೊಲೀಸರು ದಾಳಿ ಮಾಡಿದ್ದು, ಈ ಸಂಬಂಧ ಪೊಲೀಸರು ಒಬ್ಬನನ್ನು ಬಂಧಿಸಿದ್ದಾರೆ.

ಬಾಂಡಿಶಟ್ಟಾ ಮೂಲದ ಕಾರವಾರ ಬಂದರು ಇಲಾಖೆಯ ಕಾರ್ ಚಾಲಕನಾಗಿದ್ದ ವಿನಯ್ ಶಾಂತನಾಗೇಕರ್ ಬಂಧಿತ ಆರೋಪಿ. ಡಿಸಿಬಿ ಇನ್ಸ್ ಪೆಕ್ಟರ್ ಶರಣಗೌಡರವರು ಖಚಿತ ಮಾಹಿತಿ ಆಧಾರದಲ್ಲಿ ಅಕ್ರಮವಾಗಿ ಗೋವಾದಿಂದ ಹೊನ್ನಾವರಕ್ಕೆ ಸಾಗಿಸುತಿದ್ದಾಗ ದಾಳಿ ನಡೆಸಿದ್ದಾರೆ.

KLR ARREST AV 4

ಈ ವೇಳೆ ಜಲ್ಲಾ ಡಿ.ಸಿ.ಬಿ ಪೊಲೀಸರು ಒಂದು ಲಕ್ಷ ಮೌಲ್ಯದ 470 ಲೀಟರ್ ಮದ್ಯ ಹಾಗೂ ಸಾಗಾಟಕ್ಕೆ ಬಳಸಿದ ಒಂದು ಲಕ್ಷ ಮೌಲ್ಯದ ಕಾರನ್ನು ವಶಕ್ಕೆ ಪಡೆದು ಓರ್ವನನ್ನು ಬಂಧಿಸಿದ್ದಾರೆ. ಬಂಧಿತ ವ್ಯಕ್ತಿಯ ಮೇಲೆ ಈ ಹಿಂದೆ ಬಂದರು ಇಲಾಖೆಯ ವಾಹನವನ್ನು ಕಳವು ಮಾಡಿ ಮದ್ಯ ಸಾಗಿಸುತಿದ್ದ ದೂರು ಹಾಗೂ ಅಕ್ರಮ ಮದ್ಯ ಸಾಗಟದ ಪ್ರಕರಣಗಳು ದಾಖಲಾಗಿತ್ತು ಎಂದು ತಿಳಿದು ಬಂದಿದೆ.

ಈ ಸಂಬಂಧ ಕಾರವಾರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *