ಕೊಪ್ಪಳ: ಜಿಲ್ಲೆಯ ಕಾರಟಗಿ ತಾಲೂಕಿನ ಸೋಮನಾಳ ಗ್ರಾಮವನ್ನು ಪೊಲೀಸರು ಮದ್ಯಪಾನ ಮುಕ್ತ ಗ್ರಾಮವನ್ನು ಮಾಡಲು ಮುಂದಾಗಿದ್ದಾರೆ.
ಗ್ರಾಮದಲ್ಲಿ ಸರಿ ಸುಮಾರು 20ಕ್ಕೂ ಹೆಚ್ಚು ಅಂಗಡಿಗಳಲ್ಲಿ ಅಕ್ರಮವಾಗಿ ಮದ್ಯ ಮಾರಟ ಮಾಡಲಾಗ್ತಿತ್ತು. ಇದರಿಂದ ಗ್ರಾಮದಲ್ಲಿ ರಾತ್ರಿ ವೇಳೆ ಮಹಿಳೆಯರು, ಮಕ್ಕಳು ಹೊರಗಡೆ ಬಾರದಂತ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದರಿಂದ ಬೆಸತ್ತ ಗ್ರಾಮದ ಗುರುಹಿರಿಯರು, ಮಹಿಳಾ ಸಂಘಗಳು, ಯುವಕ ಮಂಡಳಿಗಳು, ಸಮೀಪದ ಕಾರಟಗಿ ಪೊಲೀಸ್ ಠಾಣೆಗೆ ಅಕ್ರಮ ಮದ್ಯ ಮಾರಾಟದ ವಿರುದ್ಧ ದೂರ ಕೊಟ್ಟಿದ್ದರು. ಅನಧಿಕೃತವಾಗಿ ಗ್ರಾಮದಲ್ಲಿ ಎಲ್ಲಂದರಲ್ಲಿ ಕಿರಾಣಿ ಅಂಗಡಿ, ಪಾನ್ ಶಾಪ್, ಚಿಕ್ಕ ಪುಟ್ಟ ಅಂಗಡಿಗಳಲ್ಲಿ ಮದ್ಯವನ್ನು ಅಕ್ರಮವಾಗಿ ಮಾರಾಟ ಮಾಡಲಾಗ್ತಿದೆ. ಇದರಿಂದ ಗ್ರಾಮದಲ್ಲಿ ಅಶಾಂತಿಯುತ ವಾತವರಣ ಸೃಷ್ಟಿ ಆಗಿದ್ದು, ದಯವಿಟ್ಟು ನಮ್ಮ ಗ್ರಾಮವನ್ನು ಸಾರಾಯಿ ಮುಕ್ತ ಗ್ರಾಮವನ್ನಾಗಿ ಮಾಡಿ ಎಂದು ಗ್ರಾಮಸ್ಥರು ಮನವಿ ಮಾಡಿ ದೂರು ದಾಖಲಿಸಿದ್ದಾರೆ.
ದೂರನ್ನು ತ್ವರಿತವಾಗಿ ಸ್ವಿಕರಿಸಿದ ಗಂಗಾವತಿ ಠಾಣೆಯ ಸಿಪಿಐ ಸುರೇಶ್ ತಳವಾರ್ ಕೂಡಲೇ ಗ್ರಾಮಕ್ಕೆ ಬಂದು ಮದ್ಯವನ್ನು ಅಕ್ರಮವಾಗಿ ಮಾರಾಟ ಮಾಡುವವರಿಗೆ ವಾರ್ನ್ ಮಾಡಿ, ಕಾಲಾವಕಾಶ ಕೊಟ್ಟು ಹೋಗಿದ್ದರು. ಆದರೂ ಅಕ್ರಮ ಮದ್ಯ ಮಾರಾಟ ಮುಂದುವರೆದ ಹಿನ್ನೆಲೆ ಗ್ರಾಮದ ಮಹಿಳೆಯರು ನೀಡಿದ ದೂರಿನನ್ವಯ ಗ್ರಾಮವನ್ನು ಸಂಪೂರ್ಣ ಸಾರಾಯಿ, ಮದ್ಯ ಮುಕ್ತ ಗ್ರಾಮ ಮಾಡಲು ಪೊಲೀಸರು ಪಣ ತೊಟ್ಟು, ಗ್ರಾಮಕ್ಕೆ ಆಗಮಿಸಿ ಮನೆ ಮನೆಗೆ ತೆರಳಿ ಜಾಗೃತಿ ಮೂಡಿಸಿ ನಂತರ ಗ್ರಾಮದಲ್ಲಿ ಸಾರಾಯಿ ಮುಕ್ತ ಗ್ರಾಮ ಎಂದು ಬೊರ್ಡ್ ಹಾಕಿಸಿದ್ದಾರೆ. ಇಂದಿನಿಂದ ಇದು ಸಾರಾಯಿ ಮುಕ್ತ ಗ್ರಾಮ ಇನ್ನುಮುಂದೆ ಯಾರಾದರೂ ಸಾರಾಯಿಯನ್ನು ಮಾರಾಟ ಮಾಡಿದಲ್ಲಿ ಅಂತವರ ವಿರುದ್ಧ ಕಾನೂನು ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದರು.
ಪೊಲೀಸರು ತಮ್ಮ ವ್ಯಾಪ್ತಿಯ ಗ್ರಾಮಗಳನ್ನು ಸಾರಾಯಿ ಮುಕ್ತಗೊಳಿಸಲು ಹೊರಟಿರುವುದು ಶ್ಲಾಘನೆಗೆ ಕಾರಣವಾಗಿದೆ. ಕಾರಟಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಈ ಗ್ರಾಮ ಮುನ್ನುಡಿ ಮಾತ್ರ. ಇನ್ನೂ ಹಲವಾರು ಗ್ರಾಮಗಳು ಈ ಗ್ರಾಮದಿಂದ ಪ್ರೇರೆಪಿತಗೊಂಡು ಸ್ವಯಂ ಪ್ರೇರಿತ ಮದ್ಯಮುಕ್ತ ಗ್ರಾಮ ಮಾಡಿಕೊಂಡರೆ ಒಳ್ಳೆದು. ಇಲ್ಲಾವಾದರೆ ಮುಂದಿನ ದಿನಗಳಲ್ಲಿ ನಮ್ಮ ಪೊಲೀಸ್ ಠಾಣೆಗೆ ಒಳಪಡುವ ಎಲ್ಲಾ ಗ್ರಾಮಗಳನ್ನು ಮದ್ಯಮುಕ್ತ ಗ್ರಾಮವನ್ನಾಗಿ ಮಾಡಲು ಪಣ ತೊಡುವುದಾಗಿ ಹೇಳಿದರು.
ಈ ಕಾರ್ಯಕ್ಕೆ ಗ್ರಾಮದ ಮಹಿಳೆಯರು ಸಂತಸವನ್ನು ವ್ಯಕ್ತಪಡಿಸಿದ್ದಾರೆ. ಗ್ರಾಮದಲ್ಲಿ ಹಗಲಲ್ಲೆ ಒಡಾಡದಂತ ಪರಿಸ್ಥಿತಿ ಇತ್ತು. ಮನೆಯಲ್ಲಿ ಗಂಡ, ಮಕ್ಕಳು ಎಲ್ಲಾರು ಈ ಸಾರಾಯಿಗೆ ದಾಸರಾಗಿದ್ದರು. ಇದೀಗ ಸಾರಾಯಿ ಬಂದ್ ಮಾಡಿದ್ದರಿಂದ ನಮಗೆ ತುಂಬಾ ಖುಷಿ ಆಗ್ತಿದೆ ಎಂದರು. ಪೊಲೀಸರ ಈ ನಿರ್ಧಾದದಿಂದ ಗ್ರಾಮದ ಮಹಿಳೆಯರು ನಿಟ್ಟುಸಿರು ಬಿಡುತ್ತಿದ್ದಾರೆ.