ಬೆಂಗಳೂರು: ತುಮಕೂರಿನಲ್ಲಿ ಪೊಲೀಸರು ನವ ವಿವಾಹಿತೆ ತಾಳಿ ಹಾಗೂ ಕಾಲುಂಗುರ ತೆಗೆಸಿದ್ದಾರೆ ಎಂದು ಆರೋಪಿಸಿ, ಈಗ ನ್ಯಾಯ ಕೋರಿ ನವ ಜೋಡಿ ಬೆಂಗಳೂರಿನ ಐಜಿಪಿ ಕಚೇರಿಗೆ ಬಂದಿದ್ದಾರೆ.
ಒಬಲೇಶ್ ಹಾಗೂ ನೇತ್ರಾವತಿ(ಹೆಸರು ಬದಲಾಯಿಸಲಾಗಿದೆ) ಕಿರುಕುಳಕ್ಕೆ ಒಳಗಾದ ನವ ಜೋಡಿ. ಒಬಲೇಶ್ ಹಾಗೂ ನೇತ್ರಾವತಿ ಕೆಲ ವರ್ಷದಿಂದ ಒಬ್ಬರಿಗೊಬ್ಬರು ಪ್ರೀತಿಸುತ್ತಿದ್ದರು. ಆದರೆ ಇದಕ್ಕೆ ನೇತ್ರಾವತಿ ಮನೆಯವರ ವಿರೋಧವಿತ್ತು.
ಮನೆಯವರು ನಿರಾಕರಿಸಿದ ಕಾರಣ ಈ ಇಬ್ಬರು ದೇವಸ್ಥಾನದಲ್ಲಿ ಮದುವೆಯಾಗಿದ್ದರು. ಆದರೆ ಪೋಷಕರಿಂದ ಬೆದರಿಕೆ ಇದ್ದ ಹಿನ್ನೆಲೆಯಲ್ಲಿ ನವ ದಂಪತಿಗಳು ರಕ್ಷಣೆಗಾಗಿ ಮಿಡಿಗೇಶಿ ಪೊಲೀಸ್ ಠಾಣೆಗೆ ಹೋಗಿದ್ದರು.
ಈ ವೇಳೆ ಮಿಡಗೇಶಿ ಠಾಣೆಯ ಸಬ್ ಇನ್ಸ್ ಪೆಕ್ಟರ್ ನವ ದಂಪತಿಗೆ ಹಿಂಸೆ ನೀಡಿದ್ದಾರೆ. ನೇತ್ರಾವತಿ ತಾಳಿ, ಕಾಲುಂಗುರ ಕಿತ್ತು ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ನವದಂಪತಿ ಆರೋಪಿಸಿದ್ದಾರೆ.
ಸದ್ಯ ನವ ದಂಪತಿ ಕೇಂದ್ರ ವಲಯ ಐಜಿಗೆ ದೂರು ನೀಡಿದ್ದಾರೆ.